Mangalore, Kavoor Mosque: ಕುಡಿದ ಮತ್ತಿನಲ್ಲಿ ತಡರಾತ್ರಿ ಮಸೀದಿಗೆ ನುಗ್ಗಿ ಅಸಭ್ಯ ವರ್ತನೆ ; ಕಾವೂರು ಪೊಲೀಸರಿಂದ ಬಂಧನ

27-01-24 12:57 pm       Mangalore Correspondent   ಕರಾವಳಿ

ಮರಕಡ ಬಳಿಯ ಮಿಲಾತ್ ನಗರ್ ಎಂಬಲ್ಲಿ ನಿನ್ನೆ ತಡರಾತ್ರಿ ಮಸೀದಿಯೊಂದಕ್ಕೆ ಕೂಲಿ ಕಾರ್ಮಿಕ ವ್ಯಕ್ತಿಯೊಬ್ಬ ಕುಡಿದು ಬಂದು ಒಳಗೆ ನುಗ್ಗಿದ್ದು, ಅಲ್ಲಿದ್ದವರನ್ನು ಅವಾಚ್ಯವಾಗಿ ನಿಂದಿಸಿ ಅಸಭ್ಯ ವರ್ತಿಸಿದ ಘಟನೆ ನಡೆದಿದೆ.

ಮಂಗಳೂರು, ಜ.27: ಮರಕಡ ಬಳಿಯ ಮಿಲಾತ್ ನಗರ್ ಎಂಬಲ್ಲಿ ನಿನ್ನೆ ತಡರಾತ್ರಿ ಮಸೀದಿಯೊಂದಕ್ಕೆ ಕೂಲಿ ಕಾರ್ಮಿಕ ವ್ಯಕ್ತಿಯೊಬ್ಬ ಕುಡಿದು ಬಂದು ಒಳಗೆ ನುಗ್ಗಿದ್ದು, ಅಲ್ಲಿದ್ದವರನ್ನು ಅವಾಚ್ಯವಾಗಿ ನಿಂದಿಸಿ ಅಸಭ್ಯ ವರ್ತಿಸಿದ ಘಟನೆ ನಡೆದಿದೆ.

ಆರೋಪಿಯನ್ನು ಬಾಗಲಕೋಟ ಮೂಲದ ಕೂಲಿ ಕಾರ್ಮಿಕ ಹನುಮಂತು ಎಂಬಾತನೆಂದು ಪೊಲೀಸರು ಗುರುತಿಸಿದ್ದು, ವಶಕ್ಕೆ ಪಡೆದಿದ್ದಾರೆ. ನಡುರಾತ್ರಿ 1 ಗಂಟೆ ವೇಳೆಗೆ ಮಸೀದಿಯ ಒಳಕ್ಕೆ ಬಂದಿದ್ದು ಮಾನಸಿಕ ಸ್ಥಿಮಿತ ಇಲ್ಲದಂತೆ ವರ್ತಿಸಿದ್ದಾನೆ. ಕುಡಿದ ಮತ್ತಿನಲ್ಲಿ ತೂರಾಡುತ್ತಾ ಏನೇನೋ ಅವಾಚ್ಯ ಶಬ್ದಗಳಿಂದ ಮಸೀದಿ ಸಿಬಂದಿಯನ್ನು ನಿಂದಿಸಿದ್ದಾನೆ. ಮಸೀದಿ ಸಿಬಂದಿ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು, ಕಾವೂರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಕಾರ್ಮಿಕನನ್ನು ಎಳೆದೊಯ್ದಿದ್ದಾರೆ.

ವಿಚಾರಣೆ ನಡೆಸಿದಾಗ 20 ದಿನಗಳ ಹಿಂದೆ ಬಾಗಲಕೋಟೆಯಿಂದ ಬಂದಿದ್ದು, ಮಂಗಳೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದ. ಕಾವೂರು ಠಾಣೆಯಲ್ಲಿ ಆರೋಪಿ ವಿರುದ್ಧ ಸೆಕ್ಷನ್ 447, 295 ಮತ್ತು 295 ಎ ಅಡಿ ಪ್ರಕರಣ ದಾಖಲಿಸಲಾಗಿದೆ.

Mangalore One arrested at Kavoor for entering mosque by drinking and misbehaving.