Kumpala Brahmakalashotsava 2024, Maharishi Ananda Guruji: ದೈವ, ದೇವರುಗಳ ಬೀಡು ಕರಾವಳಿ ನೆಲಕ್ಕೆ ಎಂದಿಗೂ ತಲೆಬಾಗುತ್ತೇನೆ ; ಕುಂಪಲ ಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮಹರ್ಷಿ ಆನಂದ ಗುರೂಜಿ 

27-01-24 01:52 pm       Mangalore Correspondent   ಕರಾವಳಿ

ಪರುಶುರಾಮ ಸೃಷ್ಟಿ, ನಾಗಕ್ಷೇತ್ರ, ಕಾರಣಿಕ ದೈವ, ದೇವರನ್ನೊಳಗೊಂಡ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಎಂದೆಂದಿಗೂ ನಾನು ತಲೆಬಾಗಿ ಸಾಷ್ಟಾಂಗ ನಮಸ್ಕರಿಸುವೆ ಎಂದು ಬೆಂಗಳೂರಿನ ಬ್ರಹ್ಮಶ್ರೀ ಆನಂದ ಸಿದ್ಧಿ ಪೀಠಂನ ಸಂಸ್ಥಾಪಕರಾದ ಮಹರ್ಷಿ ಡಾ. ಆನಂದ ಗುರೂಜಿ ಹೇಳಿದರು.

ಉಳ್ಳಾಲ, ಜ.27: ಪರುಶುರಾಮ ಸೃಷ್ಟಿ, ನಾಗಕ್ಷೇತ್ರ, ಕಾರಣಿಕ ದೈವ, ದೇವರನ್ನೊಳಗೊಂಡ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಎಂದೆಂದಿಗೂ ನಾನು ತಲೆಬಾಗಿ ಸಾಷ್ಟಾಂಗ ನಮಸ್ಕರಿಸುವೆ ಎಂದು ಬೆಂಗಳೂರಿನ ಬ್ರಹ್ಮಶ್ರೀ ಆನಂದ ಸಿದ್ಧಿ ಪೀಠಂನ ಸಂಸ್ಥಾಪಕರಾದ ಮಹರ್ಷಿ ಡಾ. ಆನಂದ ಗುರೂಜಿ ಹೇಳಿದರು.

ಕುಂಪಲದ ವ್ಯಾಸನಗರದ ಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನದ  ಮಾತುಗಳನ್ನಾಡಿದರು. ಮಂಗಳೂರು, ಉಡುಪಿಯವರು ಆಮಂತ್ರಿಸಿದರೆ ಎಂತದ್ದೇ ಕಾರ್ಯಕ್ರಮಗಳು ನಿಗದಿಯಾಗಿದ್ದರೂ ಬದಿಗೊತ್ತಿ ಬರುತ್ತೇನೆ. ಪರಶುರಾಮ ಸೃಷ್ಟಿಯ ಇಲ್ಲಿನ ಮಣ್ಣಿನ ಶಕ್ತಿ ಅಂತಹದು. ಕುಂಪಲದಂತಹ ಸಣ್ಣ ಪ್ರಾಂತ್ಯವು ಸಂಪೂರ್ಣ ಕೇಸರೀಕರಣಗೊಂಡು ಇಲ್ಲಿ ಅದ್ಭುತವಾದ ಧರ್ಮ ಜಾಗೃತಿಗೊಳಿಸುವ ಕಾರ್ಯ ನಡೆದಿರುವುದು ಶ್ಲಾಘನೀಯ. ಇಂತಹ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ನಿಮ್ಮೆಲ್ಲರ ಹೃದಯ ಗೆಲ್ಲುವ ಸುವರ್ಣಾವಕಾಶ ಕಲ್ಪಿಸಿದ ಕಾರ್ಯಕ್ರಮದ ಆಯೋಜಕರಿಗೆ ನಾನು ಆಭಾರಿ ಎಂದರು.

ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ ಕುಂಪಲದಲ್ಲಿ ಆದಿಶಕ್ತಿ ಚಾಮುಂಡಿ ಕ್ಷೇತ್ರ ನಿರ್ಮಾಣದ ಮೂಲಕ ಇಲ್ಲಿನ ಜನರ ಬಹಳಷ್ಟು ದಿನಗಳ ಕನಸು ಸಾಕಾರಗೊಂಡಿದೆ. ಭಾರತ ದೇಶವು ರಾಮಾಯಣ, ಮಹಾಭಾರತ ಸಂಸ್ಕೃತಿಯ ಆಧಾರದಲ್ಲಿ ನಿಂತಿದೆ. ಗಾಂಧೀಜಿಯ ರಾಮರಾಜ್ಯ, ಗ್ರಾಮರಾಜ್ಯ ಪರಿಕಲ್ಪನೆಯ ಅರ್ಥ ರಾಮಾಯಣದ ಪ್ರತೀ ಪಾತ್ರಗಳ ಆದರ್ಶಗಳನ್ನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಕುಂಪಲ ಅವರನ್ನ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಮಹರ್ಷಿ ಆನಂದ ಗುರೂಜಿ ಮತ್ತು ಕಿರಿಯ ಗುರು ಶ್ರೀನಿವಾಸ ಆನಂದ ಗುರೂಜೀ ಅವರನ್ನು ಕುಂಪಲ ಬೈಪಾಸಿನಿಂದ ಆದಿಶಕ್ತಿ ಚಾಮುಂಡಿ ಕ್ಷೇತ್ರಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ವೇದಿಕೆಯಲ್ಲಿ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್, ಮೆಸ್ಕಾಂ ಜೂನಿಯರ್ ಇಂಜಿನಿಯರ್ ನಿತೇಶ್ ಹೊಸಗದ್ದೆ, ಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಚರಣ್ ಬೇಬಿ ನಾರಾಯಣ ಪಂಡಿತರು, ದೇವಸ್ಥಾನ ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕುಲಾಲ್ ಕುಂಪಲ, ಕಾರ್ಯಾಧ್ಯಕ್ಷರುಗಳಾದ ಪ್ರಕಾಶ್ ಕುಂಪಲ, ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಇದ್ದರು.

Kumpala Brahmakalashotsava 2024, Maharishi Ananda Guruji speks at Kumpala in Mangalore. Founder of Brahmashri Ananda Siddhi Peetham, Bangalore, said that he will bow down and prostrate forever to the creation of Parashurama. Speaker UT Khader said that the long-time dream of the people here has come true with the construction of Adishakti Chamundi constituency in Kumpala.