ಬ್ರೇಕಿಂಗ್ ನ್ಯೂಸ್
10-02-24 08:22 pm Mangalore Correspondent ಕರಾವಳಿ
ಉಳ್ಳಾಲ, ಫೆ.10: ಕನಸು ನನಸಾಗಲು ಪ್ರಯತ್ನ ಬೇಕು. ಬಡವನಾಗಿ ಹುಟ್ಟಬಹುದು ಬಡವನಾಗಿಯೇ ಸಾಯಬೇಕೆಂದೇನಿಲ್ಲ, ಮಕ್ಕಳು ಉತ್ತಮ ಶಿಕ್ಷಣ ಪಡೆದರಷ್ಟೇ ಕುಟುಂಬದ ಸಮಸ್ಯೆಗಳನ್ನ ಪರಿಹರಿಸಲು ಸಾಧ್ಯ. ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಸಲುವಾಗಿ ಕಿನ್ಯಾ ಗ್ರಾಮವೊಂದಕ್ಕೆ ಶಿಕ್ಷಣಕ್ಕಾಗಿ 80 ಲಕ್ಷ ರೂ. ಮೀಸಲಿಟ್ಟಿರುವುದಾಗಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಕಿನ್ಯ ಗ್ರಾಮದ ಬೆಳರಿಂಗೆ ಪ್ರಾಥಮಿಕ ಶಾಲೆಗೆ ವಿವೇಕ ಶಾಲಾ ಯೋಜನೆಯಡಿ ನಿರ್ಮಾಣಗೊಂಡ ಸುಸಜ್ಜಿತ ನೂತನ ಕಟ್ಟಡವನ್ನ ಅವರು ಉದ್ಘಾಟಿಸಿದರು. 2022ರ ಮೇ ತಿಂಗಳಲ್ಲಿ ಸುರಿದ ಮೊದಲ ಧಾರಾಕಾರ ಮಳೆಗೆ ಬೆಳರಿಂಗೆ ಪ್ರಾಥಮಿಕ ಶಾಲೆಯ ಹಂಚಿನ ಛಾವಣಿಯ ಕಟ್ಟಡವು ಧರೆಗುರುಳಿತ್ತು. ಶಾಲಾರಂಭದ ಹಿಂದಿನ ರಾತ್ರಿ ಘಟನೆ ನಡೆದುದರಿಂದ ಗಂಡಾಂತರ ತಪ್ಪಿತ್ತು. ಕಟ್ಟಡ ಶಿಥಿಲಗೊಂಡಿದ್ದರೂ ಅಧಿಕಾರಿಗಳ ಅಸಡ್ಡೆಯಿಂದ ಘಟನೆ ಸಂಭವಿಸಿದ್ದು ಭಾರೀ ಜನಾಕ್ರೋಶ ಉಂಟಾಗಿತ್ತು. ಪಕ್ಕದ ಮದರಸದ ಕೊಠಡಿಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸ್ಥಳೀಯ ಶಾಸಕ ಯು.ಟಿ ಖಾದರ್ ಮುತುವರ್ಜಿಯಲ್ಲಿ ಇದೀಗ ಶಾಲೆಗೆ ನೂತನ ಕಟ್ಟಡ ನಿರ್ಮಾಣವಾಗಿದೆ. ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ಖಾದರ್, ನಮ್ಮ ಕುಟುಂಬದ ಸಮಸ್ಯೆಗಳನ್ನ ಸರಕಾರ ಪರಿಹರಿಸಲು ಸಾಧ್ಯವಿಲ್ಲ. ಮನೆಯ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಹೆತ್ತವರ ಕನಸನ್ನ ನನಸು ಮಾಡಿದಾಗಲೇ ಕುಟುಂಬದ ಸಮಸ್ಯೆ ಪರಿಹಾರ ಆಗಲು ಸಾಧ್ಯ. ಕಿನ್ಯ ಗ್ರಾಮವೊಂದಕ್ಕೆ ಶಿಕ್ಷಣಕ್ಕಾಗಿ 80 ಲಕ್ಷ ಅನುದಾನ ಮೀಸಲಿಟ್ಟಿದ್ದು ವಿದ್ಯಾರ್ಥಿಗಳು ಯೋಜನೆಗಳ ಸದುಪಯೋಗ ಪಡೆಯಬೇಕೆಂದರು.
ಕೇವಲ ಎಂಟು ತಿಂಗಳಲ್ಲೇ ಬೆಳರಿಂಗೆ ಶಾಲೆಗೆ ಈ ರೀತಿಯ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲು ಜನರು ಕೊಟ್ಟ ಮತಗಳೇ ಕಾರಣ. ಶಾಲೆಗೆ ಅಂಗನವಾಡಿ ಕಟ್ಟಡ, ಆವರಣ ಗೋಡೆಯನ್ನ ಶೀಘ್ರ ನಿರ್ಮಿಸಲಾಗುವುದೆಂದರು. ಕಿನ್ಯಾ ಗ್ರಾಮದ ಮೀನಾದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ನಿರ್ಮಾಣಗೊಂಡ ನೂತನ ಕೊಠಡಿಯನ್ನು ಸ್ಪೀಕರ್ ಖಾದರ್ ಉದ್ಘಾಟಿಸಿದರು. ಕಿನ್ಯ ಗ್ರಾಮದ ಉಕ್ಕುಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೂ ಶಿಲಾನ್ಯಾಸಗೈದರು. ಕಿನ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷರಾದ ಫಾರೂಕ್ ಕಿನ್ಯ, ಮಾಜಿ ಅಧ್ಯಕ್ಷ ಸಿರಾಜ್ ಕಿನ್ಯ, ಪಿಡಿಒ ತುಳಸಿ, ಕೆಡಿಪಿ ಸದಸ್ಯರಾದ ಹಮೀದ್ ಕಿನ್ಯ, ಕಾಂಗ್ರೆಸ್ ಮುಖಂಡ ಎನ್.ಎಸ್ ಕರೀಂ ಮೊದಲಾದವರು ಉಪಸ್ಥಿತರಿದ್ದರು.
In order to give more thrust to education, a sum of Rs 80 lakh has been sanctioned to the school that was collapsed at Kinya for education. Assembly Speaker U T Khader said the reservation was made.
23-09-24 07:46 pm
HK News Desk
Bangalore, North Indians, Video; ನಾವಿದ್ದರೆ ಬೆ...
23-09-24 04:42 pm
Tirupati laddu: ತಿರುಪತಿ ಲಡ್ಡಿನಲ್ಲಿ ಕೊಬ್ಬಿನಂಶ...
22-09-24 07:10 pm
Chikkaballapur, Accident: ಓವರ್ಟೇಕ್ ಮಾಡಲು ಹೋಗ...
22-09-24 06:52 pm
ಪ್ಯಾಲೆಸ್ತೀನ್ ಧ್ವಜದ ಬಗ್ಗೆ ಸಚಿವ ಜಮೀರ್ ಸಮರ್ಥನೆ ಬ...
21-09-24 11:17 pm
23-09-24 07:01 pm
HK News Desk
Arjun missing truck, Shiruru: ಶಿರೂರು ಗುಡ್ಡ ಕು...
21-09-24 08:05 pm
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
ಲೆಬನಾನಲ್ಲಿ ಪೇಜರ್ ಸ್ಫೋಟ ; ವಯನಾಡಿನಲ್ಲಿ ಸುದ್ದಿ ಸ...
21-09-24 05:49 pm
Uttar Pradesh: ಗಂಡು ಮಗುವಿಗಾಗಿ ಪತ್ನಿ ಜೊತೆ ಜಗಳ...
20-09-24 07:39 pm
24-09-24 10:28 am
Mangalore Correspondent
Doctor Drunk, ICU, Mangalore, Crime: ಮಂಗಳೂರಿನ...
22-09-24 04:55 pm
Shri Ram sene, Gangadhar Kulkarni, Mangalore:...
22-09-24 01:16 pm
Dasara 2024 School holiday; ಈ ಬಾರಿ ಅ.3ರಿಂದ 20...
21-09-24 01:15 pm
Nitte Tulu Study Centre, Mangalore: ನಿಟ್ಟೆ ತು...
20-09-24 11:08 pm
23-09-24 09:12 pm
Bangalore Correspondent
Bangalore Murder, Crime; ಕೂಲ್ ಸಿಟಿಯಲ್ಲಿ ಶ್ರದ್...
23-09-24 11:42 am
ಉಪ್ಪಳದ ಎರಡಂತಸ್ತಿನ ಮನೆಯಲ್ಲಿ ಮೂರು ಕೋಟಿ ಮೌಲ್ಯದ ಡ...
22-09-24 10:48 pm
ಪಾರ್ಟ್ ಟೈಮ್ ಉದ್ಯೋಗದ ಹೆಸರಲ್ಲಿ ಹೂಡಿಕೆ ; ಹಣ ಡಬಲ್...
22-09-24 10:40 pm
Mangalore cyber fraud, stock market: ಯೂಟ್ಯೂಬ್...
22-09-24 08:25 pm