ಬ್ರೇಕಿಂಗ್ ನ್ಯೂಸ್
14-02-24 11:07 pm Mangalore Correspondent ಕರಾವಳಿ
ಉಳ್ಳಾಲ, ಫೆ.14: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮಲೆನಾಡು ಗಿಡ್ಡ ತಳಿ ಗೋವುಗಳ ಅಭಿವೃದ್ಧಿ ಜೊತೆಗೆ ಕೈರಂಗಳದ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಕಳೆದ ಜ.14ರಿಂದ ನಡೆದುಬಂದ ಒಂದು ತಿಂಗಳ ಗೋಸೇವಾ ಮಾಸಾಚರಣೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.13ರ ಮಂಗಳವಾರ ದೀಪೋತ್ಸವದ ಮೂಲಕ ಸಂಪನ್ನಗೊಂಡಿತು.
ಮಕರ ಸಂಕ್ರಮಣದಂದು ಆರಂಭಗೊಂಡಿದ್ದ ಗೋಸೇವಾ ಮಾಸಾಚರಣೆ ಕುಂಭ ಮಾಸದಂದು ಸಮಾಪನಗೊಂಡಿದೆ. ಮಕರ ಮಾಸದಲ್ಲಿ ಗೋದರ್ಶನ ಮಾಡಿದವರ ಜನ್ಮ ಪಾವನವಾಗುತ್ತದೆ ಎಂದು ನಂಬಿಕೆಯಿದೆ. ಹೀಗಾಗಿ ಭಕ್ತರು ನಿತ್ಯವೂ ಭಜನೆ, ಶ್ರೀಮದ್ ರಾಮಾಯಣ, ಭಗವದ್ಗೀತೆ ಪಾರಾಯಣದ ಸವಿಯನ್ನು ಅನುಭವಿಸಿದರು.
ಗೋಸೇವಾ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗೋಸೇವೆ ನಿತ್ಯವೂ ನಡೆಯಿತು. ಪ್ರತಿನಿತ್ಯ ಸಂಜೆ ವಿವಿಧ ಭಜನಾ ಮಂಡಳಿಗಳ ಆಶ್ರಯದಲ್ಲಿ ಸಂದ್ಯಾ ಭಜನೆ ನಡೆಯಿತು. ಗೋಸೇವಾ ಮಾಸಾಚರಣೆಯ ಕೊನೆಯ ದಿನವಾದ ಸೋಮವಾರ ಭಜನಾ ಮಂಗಳೋತ್ಸವ ಹಾಗೂ ದೀಪೋತ್ಸವ ಮೂಲಕ ಗೋಸೇವಾ ಮಾಸಾಚರಣೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಗೋಶಾಲಾ ಸಂಚಾಲಕ ಟಿ.ಜಿ ರಾಜಾರಾಮ್ ಭಟ್ ಮಾತನಾಡಿ, ಗೋಸೇವೆಯ ಮಾಸಾಚರಣೆಯಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಆ ಗೋಮಾತೆಯ ಆಶೀರ್ವಾದವಿರಲಿ ಹಾಗೂ ಗೋಸೇವೆ ನಿತ್ಯ ನಿರಂತರವಾಗಿ ನಡೆಯಲಿದ್ದು, ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ. ಹಣದಿಂದ ಭೋಗ ಮತ್ತು ದಾನ ಎರಡನ್ನು ಹೊರತು ಬೇರೆ ಏನೂ ಮಾಡಲು ಸಾಧ್ಯವಿಲ್ಲ. ರಕ್ತ ಮತ್ತು ಹಣ ಒಂದೇ ಕಡೆ ಉಳಿಯಬಾರದು, ಹರಿಯುತ್ತಿರಬೇಕು. ಅದಕ್ಕಾಗಿ ದಾನ ಮಾಡಿ ಎಂದರು.
ಬೆಂಗಳೂರಿನ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಉಪಸ್ಥಿತರಿದ್ದರು.
The month-long 'Goseva Maasa' celebrations, which began on January 14 at Amritadhara Goshala in Punyakoti town of Kairangala, with the development of Malnad short breed cows under the guidance of Sri Raghaveshwara Bharathi Swamiji, concluded with deepotsava on Tuesday, Feb. 13, with various religious and cultural programmes.
02-02-25 02:31 pm
Bangalore Correspondent
Mla BR Patil resigns: ಸಿಎಂ ರಾಜಕೀಯ ಸಲಹೆಗಾರ ಹುದ...
02-02-25 01:43 pm
ಆಂಧ್ರ, ಬಿಹಾರಕ್ಕೆ ಒತ್ತು ಕೊಟ್ಟಿದ್ದಾರೆ, ಕರ್ನಾಟಕಕ...
01-02-25 05:12 pm
ಕಾಂಗ್ರೆಸ್ ನಿಂದ ಬಿಜೆಪಿ ಹೋದವರಿಗೆ ಅಲ್ಲಿ ಯಾವ ಸ್ಥಾ...
31-01-25 10:10 pm
Sriramulu, BJP, B. Y. Vijayendra: ವಿಜಯೇಂದ್ರ ಸ...
31-01-25 08:03 pm
01-02-25 09:51 pm
HK News Desk
ಎರ್ನಾಕುಲಂ ಜಿಲ್ಲೆಯಲ್ಲಿ ಒಂದೇ ದಿನ 27 ಬಾಂಗ್ಲಾ ದೇಶ...
01-02-25 09:35 pm
2025ರ ಕೇಂದ್ರ ಬಜೆಟ್ ಗುಂಡಿನ ಗಾಯಕ್ಕೆ ಹಾಕಿದ ಬ್ಯಾಂ...
01-02-25 05:51 pm
ಕೇಂದ್ರ ಬಜೆಟ್ ಮಂಡನೆ ; ಕೃಷಿಕರು, ಮಧ್ಯಮ ವರ್ಗಕ್ಕೆ...
01-02-25 02:10 pm
Sonia Gandhi, president Murmu: ರಾಷ್ಟ್ರಪತಿ ಬಗ್...
31-01-25 09:10 pm
02-02-25 09:49 pm
Mangalore Correspondent
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
Kotekar Bank Robbery, Murgan D Devar: ಕೋಟೆಕಾರ...
01-02-25 02:32 pm
Mangalore builder Jitendra Kottary, prasanna...
31-01-25 11:05 pm
02-02-25 09:00 pm
Bangalore Correspondent
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am
Ankola, Mangalore Car, Cash, Crime: ಅಂಕೋಲಾದಲ್...
29-01-25 04:12 pm