ಬಿಳಿನೆಲೆಯಲ್ಲಿ ನಕ್ಸಲರು ಪ್ರತ್ಯಕ್ಷ ; ರಾತ್ರಿ ಬಂದು ಊಟ ಮಾಡಿ ತೆರಳಿದ ಶಸ್ತ್ರಸಜ್ಜಿತ ತಂಡ ! ಎಎನ್ಎಫ್ ಕೂಂಬಿಂಗ್ ನಡುವಲ್ಲೇ ನಕ್ಸಲ್ ಸಂಚಾರ 

06-04-24 12:03 pm       Mangalore Correspondent   ಕರಾವಳಿ

ಸುಬ್ರಹ್ಮಣ್ಯ, ಕೂಜುಮಲೆಯಲ್ಲಿ ಎಎನ್ಎಫ್ ಕೂಂಬಿಂಗ್ ಕಾರ್ಯಾಚರಣೆ ನಡುವೆಯೇ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ. 

ಪುತ್ತೂರು, ಎ.6: ಸುಬ್ರಹ್ಮಣ್ಯ, ಕೂಜುಮಲೆಯಲ್ಲಿ ಎಎನ್ಎಫ್ ಕೂಂಬಿಂಗ್ ಕಾರ್ಯಾಚರಣೆ ನಡುವೆಯೇ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ. 

ಕಡಬ ತಾಲೂಕಿನ ಬಿಳಿನೆಲೆ ಬಳಿಯ ಚೇರು ಎಂಬಲ್ಲಿ ನಿನ್ನೆ ರಾತ್ರಿ 7 ಗಂಟೆಗೆ ಆರು ಮಂದಿಯಿದ್ದ ನಕ್ಸಲರು ಮನೆಯೊಂದಕ್ಕೆ ಭೇಟಿ ನೀಡಿದ್ದಾರೆ. ಶಸ್ತ್ರಸಜ್ಜಿತರಾಗಿದ್ದ ನಕ್ಸಲರು ಮನೆಯಲ್ಲಿ ಊಟ ಕೇಳಿ, ಅಲ್ಲಿಯೇ ಮಾಡಿ ಮೊಬೈಲ್ ಚಾರ್ಜ್ ಮಾಡಿ ತೆರಳಿದ್ದಾರೆ. ಬಳಿಕ ಮನೆಯಿಂದ ಅಕ್ಕಿ ತೆಗೆದುಕೊಂಡು ಹೋಗಿದ್ದಾರೆ.‌ 

ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿದ್ದರು. ಅದಕ್ಕೂ ಒಂದು ವಾರದ ಹಿಂದೆ ಕೂಜುಮಲೆ ಎಸ್ಟೇಟ್ ಬಳಿ ನಕ್ಸಲರು ಕಾಣಿಸಿಕೊಂಡು ಆತಂಕ ಮೂಡಿಸಿದ್ದರು. ಈ ಭಾಗದಲ್ಲಿ ಎಎನ್ಎಫ್ ಕೂಂಬಿಂಗ್ ಕಾರ್ಯಚರಣೆ ನಡುವೆಯೇ ನಕ್ಸಲರು ಮತ್ತೆ ಪ್ರತ್ಯಕ್ಷರಾಗಿರುವುದು ಆತಂಕ ಮೂಡಿಸಿದೆ. 

ಪಶ್ಚಿಮ ಘಟ್ಟ ವ್ಯಾಪ್ತಿಯ ದಕ್ಷಿಣ ಕನ್ನಡ‌ - ಕೊಡಗು ಗಡಿಭಾಗದಲ್ಲಿ ನಕ್ಸಲರು ಆಗಿಂದಾಗ್ಗೆ ಪ್ರತ್ಯಕ್ಷರಾಗುತ್ತಿರುವುದು ಪಶ್ಚಿಮ ಘಟ್ಟದ ಅರಣ್ಯ ನಕ್ಸಲ್ ಕಾರಿಡಾರ್ ಆಗುತ್ತಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಮೋಸ್ಟ್ ವಾಂಡೆಟ್ ನಕ್ಸಲರಾದ ವಿಕ್ರಮ ಗೌಡ, ಮುಂಡಗಾರು ಲತಾ‌ ತಂಡವೇ ಇಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ANF combing, naxals moment found at Kadaba in Mangalore.