Mangalore Puttur Accident : ಜೀಪು ಚಾಲಕನ ನಿರ್ಲಕ್ಷ್ಯದ ಚಾಲನೆ ; ಬೈಕಿಗೆ ಡಿಕ್ಕಿಯಾದರೂ 50 ಮೀಟರ್ ಎಳೆದೊಯ್ದ ಜೀಪು, ರಸ್ತೆಗೆ ಎಸೆಯಲ್ಪಟ್ಟ ಸವಾರ ಬಲಿ, ಮಕ್ಕಳಿಬ್ಬರು ಗಂಭೀರ 

18-04-24 02:23 pm       Mangalore Correspondent   ಕರಾವಳಿ

ಜೀಪು ಚಾಲಕನ ಅತಿ ವೇಗ ಮತ್ತು ಅವಾಂತರಕ್ಕೆ ಮಕ್ಕಳಿಬ್ಬರ ಜೊತೆಗೆ ತೆರಳುತ್ತಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಬುಧವಾರ ರಾತ್ರಿ ನರಿಮೊಗರು ಗ್ರಾಮದ ಪಾಪೆತ್ತಡ್ಕದಲ್ಲಿ ಸಂಭವಿಸಿದೆ.

ಪುತ್ತೂರು, ಎ.18: ಜೀಪು ಚಾಲಕನ ಅತಿ ವೇಗ ಮತ್ತು ಅವಾಂತರಕ್ಕೆ ಮಕ್ಕಳಿಬ್ಬರ ಜೊತೆಗೆ ತೆರಳುತ್ತಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಬುಧವಾರ ರಾತ್ರಿ ನರಿಮೊಗರು ಗ್ರಾಮದ ಪಾಪೆತ್ತಡ್ಕದಲ್ಲಿ ಸಂಭವಿಸಿದೆ.

ಬಡಕ್ಕೋಡಿ ಕಡ್ಯ ನಿವಾಸಿ, ಮಂಗಳೂರಿನಲ್ಲಿ ಲಾರಿ ಚಾಲಕರಾಗಿದ್ದ ಲೋಕೇಶ್ ಗೌಡ(48) ಮೃತಪಟ್ಟ ವ್ಯಕ್ತಿ. ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಲೋಕೇಶ್ ತನ್ನ ಇಬ್ಬರು ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಸವಣೂರು ಕಡೆಯಿಂದ ಬರುತ್ತಿದ್ದ ಜೀಪು ಬೈಕ್ ಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಬೈಕನ್ನು ಎಳೆದುಕೊಂಡು ಹೋಗಿದ್ದಲ್ಲದೆ, ಎರಡು ತುಂಡಾಗಿದೆ. 50 ಮೀಟರ್ ದೂರದ ತನಕ ಬೈಕನ್ನು ಜೀಪ್ ಎಳೆದೊಯ್ದಿದ್ದರಿಂದ ಸವಾರ ಲೋಕೇಶ್ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಕ್ಕಳಾದ ದೀಪ್ತಿ (8) ಮತ್ತು ಗಗನ್ (4) ತೀವ್ರ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ನಡೆದರೂ ಜೀಪು ಚಾಲಕ ನಿಲ್ಲಿಸದೆ ಮುಂದಕ್ಕೆ ಒಯ್ದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Jeep bike accident in puttur, biker killed on spot. The deceased has been identified as Lokesh Gowda.