ಬ್ರೇಕಿಂಗ್ ನ್ಯೂಸ್
19-04-24 10:11 pm Mangalore Correspondent ಕರಾವಳಿ
ಮಂಗಳೂರು, ಎ.19: ಸಿಮೆಂಟ್ ಮಿಕ್ಸ್ ಉದ್ದೇಶದ ಮಣ್ಣು ಸಾಗಿಸುವ ಕಂಟೇನರ್ ಲಾರಿ ಬ್ರೇಕ್ ಫೇಲ್ ಆಗಿ ಮಂಗಳೂರು- ಮೂಡುಬಿದ್ರೆ ಹೆದ್ದಾರಿಯ ಎಡಪದವು ಜಂಕ್ಷನ್ನಲ್ಲಿ ನಾಲ್ಕೈದು ವಾಹನಗಳಿ ಡಿಕ್ಕಿಯಾಗಿ ಸರಣಿ ಅಪಘಾತಕ್ಕೀಡಾಗಿ ಅವಾಂತರ ಸೃಷ್ಟಿಸಿದ ಘಟನೆ ನಡೆದಿದೆ.
ಗಂಜಿಮಠದಿಂದ ಎಡಪದವು ಇಳಿಜಾರಿನಲ್ಲಿ ಸಾಗುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ್ದು ಎಡಪದವು ಜಂಕ್ಷನ್ನಲ್ಲಿ ಮುಂದಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಸೈಡ್ ತಗೊಂಡಿದ್ದಾನೆ. ಅಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಡಿಕ್ಕಿಯಾಗಿ ಮುಂದಕ್ಕೆ ಬಂದಿದ್ದು ಅಗರಿ ಶೋರೂಮ್ ಇರುವ ಅಂಗಡಿ ಕಟ್ಟಡಕ್ಕೆ ನುಗ್ಗಿದೆ. ಫುಲ್ ಲೋಡ್ ಇದ್ದ ಕಾರಣ ಲಾರಿ ಓರೆಯಾಗಿ ನಿಂತಿದೆ.





ರಸ್ತೆ ಬದಿಯಲ್ಲಿದ್ದ ಟ್ಯಾಂಕರ್ ಉರುಳಿ ಬಿದ್ದಿದ್ದು ನಿಲ್ಲಿಸಿದ್ದ ನಾಲ್ಕು ಬೈಕ್, ಸ್ಕೂಟರ್ ಅಪ್ಪಚ್ಚಿಯಾಗಿದೆ. ಅಲ್ಲದೆ, ಅಲ್ಲಿದ್ದ ಸ್ವಿಫ್ಟ್ ಕಾರು ಕೂಡ ನಜ್ಜುಗುಜ್ಜಾಗಿದೆ. ಲಾರಿ ಒರಸಿಕೊಂಡು ನುಗ್ಗಿ ಬರುತ್ತಲೇ ಸಾರ್ವಜನಿಕರು ಓಡಿದ್ದರಿಂದ ಬಚಾವಾಗಿದ್ದಾರೆ. ಲಾರಿ ಚಾಲಕ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡುಬಿದ್ರೆಯಿಂದ ಮಂಗಳೂರು ಬರುತ್ತಿದ್ದ ಖಾಸಗಿ ಬಸ್ಸಿನ ಮುಂಭಾಗಕ್ಕೆ ಒರಸಿದ್ದು ಹಾನಿಯಾಗಿದ್ದು ಬಿಟ್ಟರೆ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ.




ಸಂಜೆಯ ವೇಳೆಗೆ ಭೀಕರ ಅಪಘಾತ ನಡೆದಿದ್ದು ಸ್ಥಳದಲ್ಲಿ ಭಾರೀ ಸಂಖ್ಯೆಯ ಜನರು ಸೇರಿದ್ದರು. ಟ್ರಾಫಿಕ್ ರಾತ್ರಿಯ ವರೆಗೂ ಕ್ಲಿಯರ್ ಆಗಿರಲಿಲ್ಲ. ಬಜ್ಪೆ ಠಾಣೆ ಪೊಲೀಸರು ಲಾರಿಯನ್ನು ತೆರವುಗೊಳಿಸಲು ಹರಸಾಹಸ ಮಾಡಿದ್ದಾರೆ.
ಗಂಜಿಮಠ ಪರಿಸರದಿಂದ ಮಣ್ಣು ಸಾಗಾಟದ ಲಾರಿ ಕಂಟೇನರ್ ಭಾರೀ ಸರಕಿನೊಂದಿಗೆ ಮೂಡುಬಿದ್ರೆಯ ಮೂಲಕ ಪೊಲೀಸರ ಕಣ್ತಪ್ಪಿಸಿ ಆಂಧ್ರಪ್ರದೇಶದತ್ತ ಸಾಗುತ್ತದೆ. ಇದೇ ರೀತಿಯ ಅಪಘಾತ ಇತ್ತೀಚೆಗೆ ಗುರುಪುರದಲ್ಲಿಯೂ ನಡೆದಿತ್ತು. ಮಣ್ಣು ಸಾಗಾಟದ ಲಾರಿಯಿಂದ ಅವಾಂತರ ಉಂಟಾಗಿತ್ತು. ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಭಾರ ಒಯ್ಯುವುದರಿಂದ ಈ ರೀತಿಯ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಡುಗೆ ಎಣ್ಣೆ ಒಯ್ಯುತ್ತಿದ್ದ ಟೆಂಪೋಗೆ ಡಿಕ್ಕಿಯಾಗಿದ್ದರಿಂದ ಅಡುಗೆ ಎಣ್ಣೆಯ ಬ್ಯಾರಲ್, ಪ್ಯಾಕೆಟ್ ಬಿಚ್ಚಿ ಎಣ್ಣೆ ರಸ್ತೆಗೆ ಚೆಲ್ಲಿತ್ತು. ಹೀಗಾಗಿ ಸ್ಥಳದಲ್ಲಿ ಭೀಕರ ಅನ್ನುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಅಂಗಡಿಗೆ ಲಾರಿ ನುಗ್ಗುವಾಗ ಯಾರೂ ಇರದೇ ಇದ್ದುದರಿಂದ ಅನಾಹತ ತಪ್ಪಿದೆ.
Mangalore Yedapadavu accident, Several vehicles shops destroyed as truck brake cuts. At least three goods vehicles, a private bus, a car, two scooters, and three shops were damaged when a soil-laden truck ran amok in the busy Yedapadavu town on Mangaluru-Moodbidri-Karkala National Highway 169 on Friday, April 19.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm