ಬ್ರೇಕಿಂಗ್ ನ್ಯೂಸ್
02-12-20 06:11 pm Udupi Correspondent ಕರಾವಳಿ
ಉಡುಪಿ, ಡಿ.2 : ಮಂಗಳೂರಿನಲ್ಲಿ ಸಮುದ್ರ ಮಧ್ಯೆ ಬೋಟ್ ಮುಳುಗಡೆಯಾಗಿ ಆರು ಮೀನುಗಾರರು ಕಣ್ಮರೆಯಾಗಿರುವ ದುರ್ಘಟನೆಯ ಹೊತ್ತಲ್ಲೇ ಉಡುಪಿ ಮೂಲದ ಬೋಟ್ ಅದೇ ಮಾದರಿಯಲ್ಲಿ ದುರಂತಕ್ಕೀಡಾಗಿ ತಂತ್ರಜ್ಞಾನ ಸಾಧನದ ನೆರವಿನಿಂದ ಅಪಾಯದಿಂದ ಪಾರಾಗಿ ಮರು ವಿಚಾರ ಬೆಳಕಿಗೆ ಬಂದಿದೆ.
ಉಡುಪಿಯ ಏಳು ಮೀನುಗಾರರನ್ನು ಹೊಂದಿದ್ದ ಮೀನುಗಾರಿಕಾ ಬೋಟ್ ಮಹಾರಾಷ್ಟ್ರ ಕರಾವಳಿಯ ಸಮುದ್ರ ಮಧ್ಯೆ ಮುಳುಗುವ ಹಂತ ತಲುಪಿತ್ತು. ಬೋಟ್ ನಲ್ಲಿದ್ದವರು ಕೂಡಲೇ ತಮ್ಮ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಆದರೆ, ಕಡಲಿನಲ್ಲಿ ಏನೇ ಬೊಬ್ಬೆ ಹಾಕಿದರೂ ಅದು ಅರಣ್ಯ ರೋದನ. ಅದೃಷ್ಟ ಎಂಬಂತೆ ಮೀನುಗಾರರ ಕಿರುಚಾಟ ಹತ್ತಿರದಲ್ಲಿದ್ದ ಇನ್ನೊಂದು ಬೋಟಿನವರಿಗೆ ಕೇಳಿಸಿತ್ತು.
ಕೂಡಲೇ ಬೋಟಿನಲ್ಲಿದ್ದ ಮಹೂರ್ ಎಂಬವರು, ತಮ್ಮ ಬಳಿಯಿದ್ದ ಸ್ಯಾಟಲೈಟ್ ಆಧರಿತ ಸಂವಹನ ಸಾಧನದಲ್ಲಿ ಸಂಪರ್ಕ ಸಾಧಿಸಿದ್ದಾರೆ. ಬಿಎಸ್ಎನ್ಎಲ್ ಕಂಪೆನಿಯ ಸ್ಕೈಲೊ 2-ವೇ ಸಂವಹನ ತಂತ್ರಜ್ಞಾನದಲ್ಲಿ ಕೂಡಲೇ ಮಹೂರ್, ದುರಂತಕ್ಕೀಡಾದ ಮಲ್ಪೆಯ ಬೋಟ್ ಮಾಲಕ ತಾರನಾಥ ಕುಂದರ್ ಗೆ ಸುದ್ದಿ ಮುಟ್ಟಿಸಿದರು. ಅಲ್ಲದೆ, ಮಹಾರಾಷ್ಟ್ರದ ಕೋಸ್ಟ್ ಗಾರ್ಡ್ ಪಡೆಗೂ ವಿಷಯ ತಿಳಿಸಿದ್ದಲ್ಲದೆ ಅದೇ ತಂತ್ರಜ್ಞಾನದ ಕಾರಣದಿಂದಾಗಿ ದುರಂತಕ್ಕೀಡಾದ ಬೋಟ್ ಇರುವ ಜಾಗವನ್ನು ಸುಲಭದಲ್ಲಿ ಪತ್ತೆ ಮಾಡುವಂತಾಗಿತ್ತು.
ನ.26ರಂದು ಈ ಘಟನೆ ನಡೆದಿದ್ದು ಮಲ್ಪೆಯ ತಾರನಾಥ್ ಕುಂದರ್ ಮಾಲಕತ್ವದ ಮಥುರಾ ಬೋಟ್ ನಲ್ಲಿ ಅಪಾಯಕ್ಕೀಡಾದ ಎಲ್ಲರನ್ನೂ ಸುರಕ್ಷಿತವಾಗಿ ಪಾರು ಮಾಡಲಾಗಿತ್ತು. ಬೋಟಿನಲ್ಲಿ ವಿನೋದ್ ಹರಿಕಂತ್ರ, ಮಹೇಶ್, ಲೋಕೇಶ್, ಶೇಖರ್, ಗಂಗಾಧರ್ ಮೊಗೇರ, ನಾಗಪ್ಪ ನಾರಾಯಣ್ ಹರಿಕಂತ್ರ ಮತ್ತು ಅನಿಲ್ ಗತಬೀರ ಹರಿಕಾಂತ್ ಇದ್ದರು. ಸಾವಿನ ದವಡೆಗೆ ಸಿಲುಕಿದ್ದ ಏಳು ಮೀನುಗಾರರನ್ನು ರಕ್ಷಣೆ ಮಾಡಲಾಗಿತ್ತು.
ರಕ್ಷಣೆಗೆ ನೆರವಾದ ಸಂವಹನ ತಂತ್ರಜ್ಞಾನ
ಘಟನೆಯ ಸಂದರ್ಭ ಮಹೂರ್ ತನ್ನಲ್ಲಿದ್ದ ಉಪಗ್ರಹ ಆಧಾರಿತ ಬಿಎಸ್ಎನ್ಎಲ್- ಸ್ಕೈಲೊ 2-ವೇ ಸಂವಹನ ತಂತ್ರಜ್ಞಾನವನ್ನು ಬಳಸಿಕೊಂಡು, ಮಥುರಾ ಬೋಟ್ ಮಾಲೀಕರು ಮತ್ತು ಮಹಾರಾಷ್ಟ್ರ ಕರಾವಳಿ ಭದ್ರತಾ ಪಡೆಯೊಂದಿಗೆ ಸಂಪರ್ಕ ಸಾಧಿಸಿ ಅಪಾಯದ ಸಂದೇಶ ರವಾನಿಸಿದ್ದರು. ದ್ವಿಮುಖ ಸಂವಹನ ವ್ಯವಸ್ಥೆಯನ್ನು ಬಳಸಿಕೊಂಡು ಮುಳುಗುತ್ತಿದ್ದ ಮಥುರಾ ದೋಣಿಯ ನಿಖರವಾದ ಸ್ಥಳವನ್ನು ರಕ್ಷಣಾ ಪಡೆ ಸುಲಭದಲ್ಲಿ ಪತ್ತೆಹಚ್ಚಿತ್ತು.
ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾತನಾಡಿದ ಬೋಟ್ ಮಾಲೀಕ ತಾರನಾಥ ಕುಂದರ್, ಏಳು ಮೀನುಗಾರರು ಸುರಕ್ಷಿತವಾಗಿ ಮರಳುವಂತಾಗಿದ್ದು ತುಂಬ ಸಂತೋಷ ಮತ್ತು ನೆಮ್ಮದಿ ನೀಡಿದೆ. ಆಧುನಿಕ ಸಂವಹನ ಸಾಧನಗಳು ಶೀಘ್ರದಲ್ಲೇ ಎಲ್ಲ ಮೀನುಗಾರಿಕಾ ದೋಣಿಗಳಲ್ಲಿ ಅಳವಡಿಸುವ ಕೆಲಸವಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.
ಮೀನುಗಾರಿಕಾ ಬೋಟ್ ಗಳಲ್ಲಿ ಪರಿಣಾಮಕಾರಿ ಸಂವಹನ ತಂತ್ರಜ್ಞಾನದ ಕೊರತೆಯಿಂದಾಗಿ ನಾವು ಅನೇಕ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಮೀನುಗಾರರು ಇಂತಹ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಬಹಳ ಅಗತ್ಯ. ಇದರಿಂದ ಪ್ರತಿವರ್ಷ ನೂರಾರು ಮೀನುಗಾರರ ಪ್ರಾಣ ಹೋಗುವುದನ್ನು ತಪ್ಪಿಸಬಹುದು ಮೀನುಗಾರಿಕೆ ಇಲಾಖೆ ಅಧಿಕಾರಿ ಗಣೇಶ್ ಹೇಳಿದ್ದಾರೆ.
Another Boat which should have been capsized at Udupi had a major escape through Satellite Phone. In Mangalore six fishermen died after boat capsized in the deep ocean.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm