Mangalore news, Ullal, Rajeev Shetty: ಸೋಮೇಶ್ವರದ ಶತಾಯುಷಿ ಅಜ್ಜಿ ನಿಧನ ; 107 ವರ್ಷದಲ್ಲೂ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದ್ದ ಲವಲವಿಕೆಯ ಅಜ್ಜಿ ! 

14-05-24 09:13 pm       Mangalore Correspondent   ಕರಾವಳಿ

ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು, ದೇಲಂತಬೆಟ್ಟು ನಿವಾಸಿ ಶತಾಯುಷಿ ರಾಜೀವಿ ಶೆಟ್ಟಿ(107) ವಯೋಸಹಜ ಕಾಯಿಲೆಯಿಂದ ಮಂಗಳವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು. 

ಉಳ್ಳಾಲ, ಮೇ.14: ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು, ದೇಲಂತಬೆಟ್ಟು ನಿವಾಸಿ ಶತಾಯುಷಿ ರಾಜೀವಿ ಶೆಟ್ಟಿ(107) ವಯೋಸಹಜ ಕಾಯಿಲೆಯಿಂದ ಮಂಗಳವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು. 

ಮೃತ ರಾಜೀವಿ ಅವರು ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದು ಎಪ್ರಿಲ್ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮನೆಯಲ್ಲೇ ತಮ್ಮ ಮತದಾನದ ಹಕ್ಕನ್ನ ಚಲಾಯಿಸಿದ್ದರು. ಕಳೆದ ವರುಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಿಲಾರಿನ ಮತಗಟ್ಟೆಗೆ ತೆರಳಿ ರಾಜೀವಿ ಮತ ಚಲಾಯಿಸಿದ್ದರು.

1917 ನೇ ಇಸವಿಯ ಜನವರಿ 1 ರಂದು ಜನಿಸಿದ ರಾಜೀವಿ ಅವರು ಯಾವುದೇ ಕಾಯಿಲೆ ಇಲ್ಲದೆ ಮಕ್ಕಳು ,ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೊಂದಿಗೆ ಸಂತೃಪ್ತಿಯ ಜೀವನ ಕಳೆದಿದ್ದರು. ತಮ್ಮ ಜೀವಿತಾವಧಿಯ ಕೊನೆಯಲ್ಲೂ ರಾಜೀವಿ ಅವರು ಕನ್ನಡಕ ಇಲ್ಲದೆಯೇ ದಿನಪತ್ರಿಕೆ ಓದಿ, ಎಲ್ಲರನ್ನೂ ಗುರುತಿಸುವಷ್ಟು ಲವ ಲವಿಕೆಯಲ್ಲಿದ್ದರು. ಪ್ರತಿ ಬಾರಿಯ ಚುನಾವಣೆಯಲ್ಲೂ ಮತಗಟ್ಟೆಗೆ ತೆರಳಿ ಮತ ಚಲಾಯಿಸುತ್ತಿದ್ದ ರಾಜೀವಿ ಅವರು ಈ ಬಾರಿ ಮಾತ್ರ ಮನೆಯಲ್ಲೇ ಲೋಕಸಭಾ ಚುನಾವಣೆಗೆ ಮತ ಚಲಾಯಿಸಿದ್ದರು.

ರಾಜೀವಿ ಅವರ ಅಗಲಿಕೆಗೆ ಮನೆ ಮಂದಿ, ಕುಟುಂಬಸ್ಥರು, ಊರಿನ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಮೃತರು ನಾಲ್ಕು ಗಂಡು, ಎರಡು ಹೆಣ್ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳನ್ನ ಅಗಲಿದ್ದಾರೆ.

107 year old  Rajeev Sheety dies at Ullal in Mangalore. She was not keeping well since some days. She has casted her vote during the assembly elections in karnataka.