Udupi karkala news, drowning river: ಕಾರ್ಕಳ ; ಮಾವನೊಂದಿಗೆ ನದಿಗೆ ಮೀನು ಹಿಡಿಯಲು ಹೋಗಿದ್ದ ಯುವಕ, ನದಿ ಆಳ ತಿಳಿಯದೆ ಇಬ್ಬರೂ ನೀರುಪಾಲು 

20-05-24 12:20 pm       Udupi Correspondent   ಕರಾವಳಿ

ನದಿಗೆ ಮೀನು ಹಿಡಿಯಲು ಹೋಗಿದ್ದ ವೇಳೆ ಇಬ್ಬರು ನೀರುಪಾಲಾದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಉಬ್ಬರಬೈಲು ಕೆರೆಯಲ್ಲಿ ನಡೆದಿದೆ.‌ 

ಕಾರ್ಕಳ, ಮೇ.20: ನದಿಗೆ ಮೀನು ಹಿಡಿಯಲು ಹೋಗಿದ್ದ ವೇಳೆ ಇಬ್ಬರು ನೀರುಪಾಲಾದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಉಬ್ಬರಬೈಲು ಕೆರೆಯಲ್ಲಿ ನಡೆದಿದೆ.‌ 

ಶಿರ್ಲಾಲು ಗ್ರಾಮದ ಮೂಡಾಯಿಗುಡ್ಡೆ ಹರೀಶ್ ಪೂಜಾರಿ (48) ಮತ್ತು ಅವರ ತಂಗಿಯ ಪುತ್ರ ಹೃತೇಶ್ ಪೂಜಾರಿ (18) ಮೃತಪಟ್ಟವರು. ಇವರು ಭಾನುವಾರ ಮೀನು ಹಿಡಿಯಲೆಂದು ಸ್ವರ್ಣಾ ನದಿಯ ಉಬ್ರೆಲ್ ಗುಂಡಿ ಎಂಬಲ್ಲಿಗೆ ತೆರಳಿದ್ದರು. ಮಧ್ಯಾಹ್ನ ವೇಳೆಗೆ ನದಿಗೆ ತೆರಳಿದ್ದು ಆರಂಭದಲ್ಲಿ ರಿತೇಶ್ ನೀರಿನಲ್ಲಿ ಮುಳುಗಿದ್ದರು. ಆತನ ರಕ್ಷಣೆಗಿಳಿದ ಹರೀಶ್ ಪೂಜಾರಿ ಅವರೂ ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ. 

ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ನದಿಯ ನಡುವಿನ ಗುಂಡಿಯಲ್ಲಿ ಆಳ ತಿಳಿಯದೆ ಮೀನಿಗೆ ಬಲೆ‌ ಹಾಕುವಾಗ ಆಯತಪ್ಪಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಕಳದ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Udupi Two drowned at river in karkala while catching fishes. The deceased has been identified as Harish Poojari and Hiytesh. Karkala police have registered a case.