ಬ್ರೇಕಿಂಗ್ ನ್ಯೂಸ್
21-05-24 09:01 pm Mangalore Correspondent ಕರಾವಳಿ
ಮಂಗಳೂರು, ಮೇ 21: ನೇರ, ನಿಷ್ಠುರ ಮತ್ತು ಸತ್ಯವನ್ನೇ ಹೇಳುವ ವಿಶೇಷ ಗುಣ ಹೊಂದಿದ್ದ ಜನಪರ ವ್ಯಕ್ತಿಯಾಗಿದ್ದವರು ವಸಂತ ಬಂಗೇರ. ಇಂತಹ ವ್ಯಕ್ತಿಯ ಅಗಲಿಕೆಯಿಂದ ರಾಜ್ಯದ ರಾಜಕಾರಣ ಬಡವಾಗಿದೆ. ವಸಂತ ಬಂಗೇರ ಅವರ ಪ್ರತಿಮೆಯನ್ನು ಬೆಳ್ತಂಗಡಿಯಲ್ಲೇ ಸ್ಥಾಪಿಸಲು ಕ್ರಮ ವಹಿಸಲಾಗುವುದು. ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಮಾಜಿ ಶಾಸಕ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಐದು ಬಾರಿ ಶಾಸಕರಾಗಿದ್ದರೂ ಒಂದು ಬಾರಿಯೂ ಮಂತ್ರಿಯಾಗಬೇಕೆಂದು ಲಾಬಿ ನಡೆಸಿದವರಲ್ಲ. ಜನರ ಸಮಸ್ಯೆ ಹಿಡಿದು ನನ್ನ ಬಳಿಗೆ ಬರುತ್ತಿದ್ದರೇ ವಿನಾ ಒಂದು ಬಾರಿಯೂ ವೈಯಕ್ತಿಕ ಹಿತಾಸಕ್ತಿ ಹಿಡಿದು ವಿಧಾನಸೌಧಕ್ಕೆ ಬಂದಿಲ್ಲ. ನೇರ, ನಿಷ್ಠುರ ನಡೆಯ ಸತ್ಯವನ್ನೇ ಹೇಳುವ ವಿಶೇಷ ಗುಣ ಅವರಲ್ಲಿತ್ತು. ನಾನು ಮತ್ತು ವಸಂತ ಬಂಗೇರ ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದ್ದೆವು. ಆವತ್ತಿನಿಂದಲೂ ಕೊನೆಯ ಉಸಿರು ಇರೋವರೆಗೂ ನನಗೆ ಆಪ್ತ ಮಿತ್ರನಾಗಿದ್ದರು.
ಬೆಂಗಳೂರಿನಲ್ಲಿ ಅನಾರೋಗ್ಯದಲ್ಲಿದ್ದಾಗ ನೋಡಲು ಹೋಗಿದ್ದೆ. ಉಷಾರಾಗಿ ಬರಬಹುದು, ನಮ್ಮೊಂದಿಗೆ ಇನ್ನೂ ಜೊತೆಗಿರುತ್ತಾರೆ ಎಂದುಕೊಂಡಿದ್ದೆ. ಆಪ್ತರನ್ನು ಕಳಕೊಂಡ ನೋವು ನನ್ನನ್ನು ಕಾಡುತ್ತಿದೆ. ಆದರೆ ಸದಾ ಜನರ ಪರ ಇರುತ್ತಿದ್ದ ವ್ಯಕ್ತಿಯನ್ನು ಜನರು ಮರೆಯಲ್ಲ, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಸ್ಥಾನ ಪಡೆಯಲಿದ್ದಾರೆ. ವಸಂತ ಬಂಗೇರ ಅವರು ತಮ್ಮ ರಾಜಕೀಯ ಜೀವನವನ್ನು ಜನರ ಪರವಾಗಿದ್ದುಕೊಂಡೇ ಸಾರ್ಥಕ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಜನಾರ್ದನ ಪೂಜಾರಿ, ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಮಾಜಿ ಸಚಿವ ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ರೈ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಬೆಳ್ತಂಗಡಿ ಕ್ಷೇತ್ರದ ಮುಖಂಡ ರಕ್ಷಿತ್ ಶಿವರಾಂ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತಿತರರಿದ್ದರು.
CM Siddaramaiah pays tributes to Vasant Bangera at Belthangady in Mangalore. Chief Minister Siddaramaiah on Tuesday paid glowing tributes to former MLA Vasant Bangera and recalled that he and the deceased Congress leader had entered the Assembly together and had been very close.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 03:26 pm
Mangalore Correspondent
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm