ಬ್ರೇಕಿಂಗ್ ನ್ಯೂಸ್
23-05-24 03:13 pm Mangaluru Correspondent ಕರಾವಳಿ
ಮಂಗಳೂರು, ಮೇ23 ಹರೀಶ ಪೂಂಜರಿಗೆ ಸಣ್ಣ ವಯಸ್ಸಿನಲ್ಲಿ ಅಧಿಕಾರ ಸಿಕ್ಕಿದೆ. ಆದರೆ, ಶಾಸಕರು ಸಾರ್ವಜನಿಕ ಜೀವನದಲ್ಲಿ ರೋಲ್ ಮಾಡೆಲ್ ಆಗುವಂತೆ ಇರಬೇಕು. ವೈಕುಂಠ ಬಾಳಿಗಾರಂತಹ ಶಾಸಕರಿದ್ದ ಕ್ಷೇತ್ರವನ್ನು ತುಂಬಿದ್ದವರು ಶಾಸಕನಾಗಿ ಯಾವ ರೀತಿ ಇರಬೇಕು ಎಂದು ತಿಳ್ಕೊಂಡಿರಬೇಕು. ಹರೀಶ್ ಪೂಂಜ ಅವರು ಬಾಯಿಗೆ ಬಂದ ರೀತಿ ಮಾತನಾಡಿ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಂಡಿದ್ದಾರೆ. ಕಾಗೆಯನ್ನು ನೀಚ ಪಕ್ಷಿಯಂತೆ ಬಿಂಬಿಸಿ ಹಿಂದು ಧರ್ಮಕ್ಕೂ ಅವಮಾನಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದು ಧರ್ಮದಲ್ಲಿ ಕಾಗೆಯ ಮಹತ್ವ ಏನು ಅನ್ನುವುದು ಹರೀಶ್ ಪೂಂಜಗೆ ಗೊತ್ತಿಲ್ಲ. ಹಿಂದು ಧರ್ಮವನ್ನು ಗುತ್ತಿಗೆ ತೆಗೆದುಕೊಂಡವರ ರೀತಿ ವರ್ತಿಸುವ ಬಿಜೆಪಿ ನಾಯಕರೇ ಹಿಂದು ಧರ್ಮವನ್ನು ನಿಂದನೆ ಮಾಡಿದ್ದಾರೆ. ಶನಿ ದೇವರು ಕಾಗೆಯ ಜೊತೆಗಿರುವುದಲ್ಲವೇ.. ಶ್ರಾದ್ಧ ಮಾಡುವುದಕ್ಕೂ ತುಳುವರು ಕಾಗೆಗೆ ಮೊದಲು ಅನ್ನ ಕೊಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಇದೆ. ಕಾಗೆಗೂ ಮಹತ್ವದ ಸ್ಥಾನ ಇದೆ, ಆದರೆ, ಹರೀಶ್ ಪೂಂಜ ಅವರು ರಕ್ಷಿತ್ ಶಿವರಾಂ ಅವರನ್ನು ಕಾಗೆಗೆ ಹೋಲಿಸಿದ್ದಾರೆ.
ಪೊಲೀಸರು ನೋಟೀಸ್ ಕೊಡಲು ಹರೀಶ್ ಪೂಂಜ ಮನೆಗೆ ತೆರಳಿದ್ದರು. ಬಂಧಿಸಲು ಹೋಗಿರಲಿಲ್ಲ. ಜನ ಸೇರಿಸಿ ಗೊಂದಲ ಏರ್ಪಟ್ಟಾಗ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡಿದ್ದರು. ಸಂಸದರು ಬಳಿಕ ವಿಚಾರಣೆಗೆ ಕಳಿಸುತ್ತೇನೆ ಎಂದು ಹೇಳಿದ್ದಕ್ಕೆ ಪೊಲೀಸರು ಹಿಂತಿರುಗಿ ಹೋಗಿದ್ದರು. ಠಾಣೆಯಲ್ಲೇ ಜಾಮೀನು ನೀಡಬಲ್ಲ ಸೆಕ್ಷನ್ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಅಷ್ಟಕ್ಕೇ ಬೃಹನ್ನಾಟಕ ಮಾಡುವ ಅಗತ್ಯವಿತ್ತೇ.. ಪೊಲೀಸರು ಬಂಧಿಸಲು ಬಂದಿದ್ದಾರೆ ಎಂದು ಹೇಳಿ ಸುದ್ದಿ ಹಬ್ಬಿಸಿದ್ದು, ಶಾಸಕರು, ಸಂಸದರನ್ನು ಕರೆಸಿ ಡ್ರಾಮಾ ಮಾಡಿದ್ದು ಹರೀಶ್ ಪೂಂಜ ಎಂದು ಭಂಡಾರಿ ಹೇಳಿದರು.
ಬಂಧಿಸಬೇಕೆಂದಿದ್ದರೆ ಅಷ್ಟು ಕಷ್ಟ ಇದೆಯೇ ?
ಕಾರ್ಯಕರ್ತರನ್ನು ನೋಡಿ ಪೊಲೀಸರು ಹಿಂತಿರುಗಿ ಹೋದರು ಅಂತ ಹೇಳ್ತಾರಲ್ವಾ.. ಮುಖ್ಯಮಂತ್ರಿ, ಸಚಿವರನ್ನೇ ಪೊಲೀಸರು ಬಂಧನ ಮಾಡಿಲ್ವಾ.. ಸರಕಾರ ಮನಸ್ಸು ಮಾಡಿದ್ದರೆ ಶಾಸಕರನ್ನು ಬಂಧನ ಮಾಡಲು ಅಷ್ಟು ಕಷ್ಟ ಇದೆಯೇ.. ತಹಸೀಲ್ದಾರ್ ಬಗ್ಗೆ ಅವಾಚ್ಯ ನಿಂದನೆ ಮಾಡುತ್ತಾರೆ. ಅದೇ ತಹಸೀಲ್ದಾರ್ ಚುನಾವಣೆಗೂ ಮುನ್ನ ಎಂಟು ತಿಂಗಳು ಇರಲಿಲ್ಲವೇ, ಆಗಲೂ ಕಾಂಗ್ರೆಸ್ ಏಜೆಂಟ್ ಇದ್ದರೇ ಅಥವಾ ಬಿಜೆಪಿ ಏಜಂಟ್ ಆಗಿದ್ದರೇ.. ಯಾಕೆ, ಆಗ ತಹಸೀಲ್ದಾರ್ ಬಗ್ಗೆ ಮಾತನಾಡಿಲ್ಲ ಎಂದು ಭಂಡಾರಿ ಪ್ರಶ್ನೆ ಮಾಡಿದರು.
ಬಂಗೇರ ಅವರ ರಾಜಕಾರಣದ ವಯಸ್ಸಿನಷ್ಟು ನಿಮಗೆ ವಯಸ್ಸು ಆಗಿಲ್ಲ. ಕೆಜೆ ಹಳ್ಳಿ ಮಾಡ್ತೀನಿ ಅನ್ನೋ ಬದಲು ಒಳ್ಳೆಯ ತಾಲೂಕು ಮಾಡ್ತೀನಿ ಎಂದು ಹೇಳಿ. ಇವರು ಕಾನೂನು ಕೈಗೆತ್ತಿಕೊಂಡವರ ಪರ ಮಾತನಾಡುತ್ತಿದ್ದಾರೆ, ಬಂಗೇರ ಯಾವತ್ತೂ ರೌಡಿ, ಭ್ರಷ್ಟರು, ಅಕ್ರಮ ಮಾಡುತ್ತಿದ್ದವರ ಪರ ಅಧಿಕಾರಿಗಳ ವಿರುದ್ಧ ಮಾತನಾಡಿಲ್ಲ. ಇದರ ನಡುವೆ, ಬಿಜೆಪಿ ನಾಯಕರು 4ನೇ ತಾರೀಕು ನಂತರ ಕಾಂಗ್ರೆಸ್ ಸರ್ಕಾರ ಹೋಗುತ್ತೆ ಎಂದು ಹೇಳುತ್ತಾರೆ. ಯಾವ ಆಧಾರದಲ್ಲಿ ಇದನ್ನು ಹೇಳುತ್ತಾರೋ ಗೊತ್ತಿಲ್ಲ. ನಿಮಗೆ ಅಧಿಕಾರಿಗಳು, ಕಾರ್ಯಾಂಗವೇ ಬೇಡ ಅಂತಾದರೆ, ರಾಜ್ಯಾಂಗವನ್ನೇ ಇಟ್ಕೊಂಡು ಸರಕಾರ ನಡೆಸಕಾಗುತ್ತಾ.. ಆಡಳಿತ ಮಾಡಕ್ಕೆ ಆಗೋದಾದ್ರೆ ಅದನ್ನು ಮಾಡಿಸಿ ಎಂದು ಹೇಳಿದರು.
ಅಕ್ರಮ ಕಲ್ಲು ಕೋರೆ, ಮರಳುಗಾರಿಕೆ ಎಲ್ಲ ಕಡೆ ಇದೆ ಎಂದು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಇಲ್ಲ. ಅಕ್ರಮಗಳಿಗೆ ಬೆಂಬಲ ಕೊಡುವುದಿಲ್ಲ. ಎಲ್ಲ ರೀತಿಯ ಅಕ್ರಮಗಳನ್ನು ಹತ್ತಿಕ್ಕಲು ಉಸ್ತುವಾರಿ ಸಚಿವರಿಗೆ ಹೇಳುತ್ತೇನೆ. ಹರೀಶ್ ಪೂಂಜ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಹೇಳಿಲ್ಲ. ಅದರ ಹಿಂದೆ ಕಾಂಗ್ರೆಸ್ ಕೈವಾಡವೂ ಇಲ್ಲ. ಇವರೇ ಮೈಗೆ ಬಿದ್ದು ಇದನ್ನೆಲ್ಲ ಮೈಗೆ ಎಳ್ಕೊಂಡಿದ್ದಾರೆ ಎಂದು ಹೇಳಿದರು.
Congress Manjunath Bhandary slams Harish poonja for his indecent behaviour in Belthangady holding a press meet at congres office in Mangalore. Harish Poonja must be a role model not a rowdy he added.
21-09-25 10:23 pm
HK News Desk
ಅಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತ ಕಳ್ಳತನ ; ತನಿಖೆಗ...
21-09-25 01:28 pm
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm