Mangalore rain, Auto Accident, Kottara: ಮಂಗಳೂರಿನಲ್ಲಿ ಭಾರೀ ಮಳೆ ; ಕೊಟ್ಟಾರದಲ್ಲಿ 20 ಮನೆಗಳಿಗೆ ನುಗ್ಗಿದ ನೀರು, ಆಟೋ ಕಾಲುವೆಗೆ ಬಿದ್ದು ಚಾಲಕ ಸಾವು 

25-05-24 01:27 pm       Mangalore Correspondent   ಕರಾವಳಿ

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ಕೊಟ್ಟಾರದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಉಕ್ಕಿ ಹರಿಯುತ್ತಿದ್ದ ಕಾಲುವೆಯಲ್ಲಿ ಆಟೋ ರಿಕ್ಷಾ ಕೊಚ್ಚಿ ಹೋಗಿದ್ದು ಅದರ ಚಾಲಕ ನೀರುಪಾಲಾಗಿದ್ದಾರೆ. 

ಮಂಗಳೂರು, ಮೇ 25: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ಕೊಟ್ಟಾರದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಉಕ್ಕಿ ಹರಿಯುತ್ತಿದ್ದ ಕಾಲುವೆಯಲ್ಲಿ ಆಟೋ ರಿಕ್ಷಾ ಕೊಚ್ಚಿ ಹೋಗಿದ್ದು ಅದರ ಚಾಲಕ ನೀರುಪಾಲಾಗಿದ್ದಾರೆ. 

ಕೊಟ್ಟಾರ ನಿವಾಸಿ ದೀಪಕ್ ಆಚಾರ್ಯ(44) ಸಾವನ್ನಪ್ಪಿದವರು. ಭಾರೀ ಮಳೆಗೆ ಮಳೆನೀರು ರಸ್ತೆಯ ಮೇಲೆ ಹರಿದಿದ್ದು ಈ ವೇಳೆ ನೀರಿನಲ್ಲಿ ಆಟೋ ಚಲಾಯಿಸಲು ಹೋಗಿದ್ದಾಗ ಕಾಲುವೆಗೆ ಪಲ್ಟಿಯಾಗಿ ಬಿದ್ದಿದೆ. ದೀಪಕ್ ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. 

ಭಾರೀ ಮಳೆಯಿಂದಾಗಿ ಕೊಟ್ಟಾರದಲ್ಲಿ ಹತ್ತು ಮನೆಗಳು, ಸಾಗರ್ ಕೋರ್ಟ್ ಪ್ರದೇಶದಲ್ಲಿ 10 ಮನೆಗಳಿಗೆ ಮಳೆನೀರು ನುಗ್ಗಿದೆ. ಮಳೆ ನೀರು ನುಗ್ಗಿದ ಬಗ್ಗೆ ರಾತ್ರಿಯೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಸಿಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದ್ದು ಸಾಗರ್ ಕೋರ್ಟ್ ಪ್ರದೇಶದಲ್ಲಿ ಲಕ್ಷ್ಮೀ ಎಂಬ 85 ವರ್ಷದ ವೃದ್ಧೆಯನ್ನು ರಕ್ಷಣೆ ಮಾಡಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿದೆ. ಮಂಗಳೂರು, ಮೂಲ್ಕಿಯಲ್ಲಿ ಅತಿ ಹೆಚ್ಚು ಮಳೆಯಾದ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪಡುಪಣಂಬೂರಿನಲ್ಲಿ 19.20 ಸೆಮೀ, ಕಿಲ್ಪಾಡಿಯಲ್ಲಿ 13.35, ಚೇಳಾರಿನಲ್ಲಿ 13.30 ಸೆಮೀ ಮಳೆಯಾಗಿದೆ.

Heavy rains in Mangalore, auto falls into pit at kottara, dies on spot. The deceased has been identified as Deepak Achar. Auto toppled while he was driving near kottara. Water has entered more than 20 houses in kottara.