Mangalore Kuntikan accident: ಕುಂಟಿಕಾನ ಹೆದ್ದಾರಿಯಲ್ಲಿ ಟ್ಯಾಂಕರ್ ಹರಿದು ಯುವಕ ಸ್ಥಳದಲ್ಲೇ ಸಾವು ; ಹೊಟೇಲ್ ಮ್ಯಾನೇಜ್ಮೆಂಟ್ ಗೆಳೆಯರಿಗೆ ಶಾಕ್ 

26-05-24 09:03 pm       Mangalore Correspondent   ಕರಾವಳಿ

ಟ್ಯಾಂಕರ್ ಹರಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕುಂಟಿಕಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತನನ್ನು ಬೋಳಾರ ನಿವಾಸಿ ಗೌರವ್ (29) ಎಂದು ಗುರುತಿಸಲಾಗಿದೆ. 

ಮಂಗಳೂರು, ಮೇ.26: ಟ್ಯಾಂಕರ್ ಹರಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕುಂಟಿಕಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತನನ್ನು ಬೋಳಾರ ನಿವಾಸಿ ಗೌರವ್ (29) ಎಂದು ಗುರುತಿಸಲಾಗಿದೆ. 

ಶನಿವಾರ ರಾತ್ರಿ 8.40ರ ಸುಮಾರಿಗೆ ಘಟನೆ ನಡೆದಿದೆ. ಗೌರವ್ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿ ಕುಳೂರಿನಲ್ಲಿ ಹೊಟೇಲ್ ಒಂದರ ಮ್ಯಾನೇಜರ್ ಆಗಿದ್ದರು. ಶನಿವಾರ ರಾತ್ರಿ ಕೆಲಸ ಮುಗಿಸಿ ಕೊಟ್ಟಾರ ಮೂಲಕ ಹೆದ್ದಾರಿಯಲ್ಲಿ ಸ್ಕೂಟರಿನಲ್ಲಿ ಕೆಪಿಟಿ ಕಡೆಗೆ ಬರುತ್ತಿದ್ದರು. 

ಸ್ಕೂಟರ್ ಕುಂಟಿಕಾನದ ಬಿಎಂಎಸ್ ಹೊಟೇಲ್ ಬಳಿಗೆ ತಲುಪುತ್ತಿದ್ದಂತೆ ಹೆದ್ದಾರಿಯಲ್ಲಿ ಹಿಂದಿನಿಂದ ಬರುತ್ತಿದ್ದ ಟ್ಯಾಂಕರ್ ಡಿಕ್ಕಿಯಾಗಿದ್ದು ಸವಾರನ ಮೇಲಿನಿಂದಲೇ ಹರಿದಿದೆ. ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ. ಆತನ ಜೊತೆಗೆ ಹೊಟೇಲ್ ಮ್ಯಾನೇಜ್ಮೆಂಟ್ ಮಾಡಿದವರು, ಇತರ ಗೆಳೆಯರು ಗೌರವ್ ಸಾವನ್ನಪ್ಪಿದ ವಿಷಯ ತಿಳಿದು ಶಾಕ್ ಆಗಿದ್ದಾರೆ.

Mangalore Kuntikan accident, tanker rams two wheeler, 29 year old killed on spot. The deceased has been identified as Gaurav Bolar. He was doing his management course at a private college in city.