Mangalore Accident, Adyar, Valachil: ಕುಡಿದು ಟೈಟ್ ಆಗಿ ವಾಹನ ಚಲಾಯಿಸಿದ ಯುವಕ ; ಅಡ್ಯಾರ್ ನಲ್ಲಿ ಅಪಘಾತ, ಡಿವೈಡರ್ ಬಡಿದು ಲೈಟ್ ಕಂಬ ಬಿದ್ದರೂ ಚಾಲಕ ಅಪಾಯದಿಂದ ಪಾರು ! 

27-05-24 11:13 pm       Mangalore Correspondent   ಕರಾವಳಿ

ಕುಡಿದು ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಪಡೀಲ್ ಅಡ್ಯಾರ್ ನಲ್ಲಿ ಅವಾಂತರ ಸೃಷ್ಟಿಸಿದ್ದಾನೆ. ರಾತ್ರಿ ಹತ್ತು ಗಂಟೆ ವೇಳೆಗೆ ಪಂಪ್ವೆಲ್ ಕಡೆಯಿಂದ ಬಂಟ್ವಾಳ ಕಡೆಗೆ ತೆರಳುತ್ತಿದ್ದಾಗ ಅಡ್ಯಾರ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್ ಡಿಕ್ಕಿಯಾಗಿ ಇನ್ನೊಂದು ರಸ್ತೆಯಲ್ಲಿ ಹೋಗಿ ನಿಂತಿದೆ. 

ಮಂಗಳೂರು, ಮೇ 27: ಕುಡಿದು ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಪಡೀಲ್ ಅಡ್ಯಾರ್ ನಲ್ಲಿ ಅವಾಂತರ ಸೃಷ್ಟಿಸಿದ್ದಾನೆ. ರಾತ್ರಿ ಹತ್ತು ಗಂಟೆ ವೇಳೆಗೆ ಪಂಪ್ವೆಲ್ ಕಡೆಯಿಂದ ಬಂಟ್ವಾಳ ಕಡೆಗೆ ತೆರಳುತ್ತಿದ್ದಾಗ ಅಡ್ಯಾರ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್ ಡಿಕ್ಕಿಯಾಗಿ ಇನ್ನೊಂದು ರಸ್ತೆಯಲ್ಲಿ ಹೋಗಿ ನಿಂತಿದೆ. 

ಪಡೀಲಿನಿಂದ ಅಡ್ಯಾರ್ ಕಡೆಗೆ ಹೋಗುತ್ತಿದ್ದ ಗ್ರಾಂಡ್ ಐ10 ಕಾರು ನೇರವಾಗಿ ರಸ್ತೆ ಮಧ್ಯದ ಡಿವೈಡರ್ ನಲ್ಲಿದ್ದ ಬೀದಿ ದೀಪದ ಕಂಬಕ್ಕೆ ಡಿಕ್ಕಿಯಾಗಿದ್ದು ತುಂಡಾಗಿ ಬಿದ್ದ ಕಂಬದ ಮೇಲೆ ಹೋಗಿ ನಿಂತಿದೆ. ಅದೃಷ್ಟವಶಾತ್ ಇನ್ನೊಂದು ಬದಿಯ ರಸ್ತೆಯಲ್ಲಿ ಯಾವುದೇ ವಾಹನ ಬಾರದೇ ಇರುವುದರಿಂದ ದೊಡ್ಡ ಅವಘಡ ತಪ್ಪಿದೆ. 

ಕಾರಿನ ಮುಂಭಾಗ ಅಪ್ಪಚ್ಚಿಯಾಗಿ ನೇರವಾಗಿಯೇ ರಸ್ತೆ ಮೇಲೆ ಕಾರು ನಿಂತಿದೆ. ಕುಡಿದು ಟೈಟ್ ಆಗಿದ್ದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಶೇಷ ಅಂದ್ರೆ, ಆತನಿಗೆ ಯಾವುದೇ ಗಾಯ ಆಗಿರಲಿಲ್ಲ.

Mangalore drink and drive Accident at Adyar Valachil highway, Hyundai I10 car rams pole and goes the other side of the highway. But the driver escape unhurt as there was no other vehicles coming from the other side. The police have taken the driver into custody.