ಬ್ರೇಕಿಂಗ್ ನ್ಯೂಸ್
04-06-24 05:57 pm Mangalore Correspondent ಕರಾವಳಿ
ಮಂಗಳೂರು, ಜೂನ್ 4: ಪೈಪೋಟಿ ನಿರೀಕ್ಷೆ ಮಾಡಿದ್ದ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನಿರಾಯಾಸ ಗೆಲುವು ಸಾಧಿಸಿದ್ದಾರೆ. 19ನೇ ಸುತ್ತು ಮತ ಎಣಿಕೆ ಮುಕ್ತಾಯದಲ್ಲಿ ಬ್ರಿಜೇಶ್ ಚೌಟ 7,64,132 ಮತಗಳನ್ನು ಪಡೆದಿದ್ದಾರೆ. ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸಿನ ಪದ್ಮರಾಜ್ ಪೂಜಾರಿ 6,12,103 ಮತಗಳನ್ನು ಪಡೆದಿದ್ದಾರೆ. ಆಮೂಲಕ 1,49,208 ಮತಗಳಿಂದ ಬ್ರಿಜೇಶ್ ಚೌಟ ಗೆಲುವಿನ ನಗೆ ಬೀರಿದ್ದಾರೆ.
ಸೌಜನ್ಯಾ ಪರ ಹೋರಾಟಗಾರರ ಅಭಿಯಾನದ ಹೆಸರಿನಲ್ಲಿ ನೋಟಾಗೆ 23515 ಮತಗಳು ಬಿದ್ದಿವೆ. ಉಳಿದಂತೆ ಅಭ್ಯರ್ಥಿ ಕ್ರಮ ಸಂಖ್ಯೆಯಲ್ಲಿ ಮೊದಲ ಸಾಲಿನಲ್ಲಿದ್ದ ಬಹುಜನ ಸಮಾಜ ಪಾರ್ಟಿಯ ಕಾಂತಪ್ಪ ಆಲಂಗಾರ್ 4202 ಮತಗಳನ್ನು ಪಡೆದಿದ್ದಾರೆ. ಅಂಚೆ ಮತಗಳ ಪೈಕಿ ಬಿಜೆಪಿ ಪರವಾಗಿ 4002, ಕಾಂಗ್ರೆಸ್ ಪರವಾಗಿ 2821 ಮತಗಳು ಬಿದ್ದಿವೆ. ಸರಕಾರಿ ನೌಕರರು ಕೂಡ ನೋಟಾ ಪರವಾಗಿ 61 ಮತಗಳನ್ನು ಚಲಾಯಿಸಿದ್ದು ವಿಶೇಷ.
ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ 101408, ಕಾಂಗ್ರೆಸಿಗೆ 78101 ಮತ ಬಿದ್ದಿದೆ. ಮೂಡುಬಿದ್ರೆ ಕ್ಷೇತ್ರದಲ್ಲಿ ಬಿಜೆಪಿಗೆ 92496, ಕಾಂಗ್ರೆಸಿಗೆ 64308 ಮತ ಬಿದ್ದಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ 108137, ಕಾಂಗ್ರೆಸಿಗೆ 76716 ಮತ ಬಿದ್ದಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ 95531, ಕಾಂಗ್ರೆಸಿಗೆ 71187 ಮತ ಬಿದ್ದಿದೆ. ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಬಿಜೆಪಿಗೆ 64870, ಕಾಂಗ್ರೆಸಿಗೆ 97933 ಮತ ಸಿಕ್ಕಿದೆ. ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಗೆ 94679, ಕಾಂಗ್ರೆಸಿಗೆ 88686 ಮತ ಬಿದ್ದಿದೆ. ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಗೆ 100247, ಕಾಂಗ್ರೆಸ್ ಪರವಾಗಿ 71557 ಮತಗಳು ಬಿದ್ದಿವೆ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಗೆ 1,02762, ಕಾಂಗ್ರೆಸಿಗೆ 63615 ಮತ ಬಿದ್ದಿದೆ.
ಮತದಾನದ ಅಂಕಿ ಅಂಶಗಳನ್ನು ನೋಡಿದರೆ, ಕೇಸರಿ ಭದ್ರಕೋಟೆ ಸುಳ್ಯದಲ್ಲಿ ಬಿಜೆಪಿಗೆ ಕುಸಿತವಾಗಿಲ್ಲ. ಅಲ್ಲಿ ಅತಿ ಹೆಚ್ಚು ಇರುವ ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್ ಆಗಿರುವ ಗೌಡ ಸಮುದಾಯದ ಮತಗಳು ಸೌಜನ್ಯಾ ಹೆಸರಲ್ಲಿ ಚದುರಿ ಹೋಗುತ್ತವೆ ಎನ್ನುವ ಮಾತು ಕೇಳಿಬಂದಿತ್ತು. ಪುತ್ತೂರಿನಲ್ಲೂ ಬಿಜೆಪಿಗೆ ಮತ ಪ್ರಮಾಣ ಕಡಿಮೆಯಾಗಿಲ್ಲ. ನೋಟಾ ಪರವಾಗಿ ಬಿಜೆಪಿ ಮತ್ತು ಕಾಂಗ್ರೆಸಿನ ಮತಗಳೂ ಬಿದ್ದಿರುವುದು ಈ ಫಲಿತಾಂಶದಿಂದ ಕಂಡುಬರುತ್ತಿದೆ. 2019ರಲ್ಲಿ ಗೆಲುವಿನ ಅಂತರ 2.70 ಲಕ್ಷ ಇದ್ದರೆ, ಈ ಬಾರಿ ಅದರಲ್ಲುಳಿದ 1.20 ಲಕ್ಷದಷ್ಟು ಮತಗಳು ಕಾಂಗ್ರೆಸ್ ಪರ ಬಿದ್ದಿದೆ.
BJP emerges winner in Lok Sabha Elections 2024, Brijesh Chowta turns MP of Dakshina Kannada. BJP candidate Brijesh Chowta won the Lok Sabha election from Dakshina Kannada constituency on Tuesday, defeating Congress candidate Padmaraj R by nearly 1.5 lakh votes, although he is yet to be declared winner by the returning officer.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 03:23 pm
HK News Desk
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
04-08-25 10:58 pm
Mangalore Correspondent
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm