Mangalore accident, Hejamady bus truck: ಹೆಜಮಾಡಿ ; ಹೆದ್ದಾರಿ ಗುಂಡಿ ನೋಡಿ ಬ್ರೇಕ್ ಹಾಕಿದ್ದ ಲಾರಿ ಚಾಲಕ, ಹಿಂದಿನಿಂದ ಗುದ್ದಿದ ಬಸ್ ಅಪ್ಪಚ್ಚಿ, ಚಾಲಕ ಸೇರಿ 15ಕ್ಕೂ ಹೆಚ್ಚು ಗಂಭೀರ

11-06-24 10:36 pm       Mangalore Correspondent   ಕರಾವಳಿ

ರಸ್ತೆ ಗುಂಡಿ ಇದೆಯೆಂದು ಕಂಟೇನರ್ ಲಾರಿ ಹಠಾತ್ ಬ್ರೇಕ್ ಹಾಕಿದ್ದು ಹೆಜಮಾಡಿ ಹೆದ್ದಾರಿಯಲ್ಲಿ ಸರಣಿ ಅಪಘಾತಕ್ಕೆ ಕಾರಣವಾಗಿದ್ದು, ಹಿಂದಿನಿಂದ ಅತಿ ವೇಗದಲ್ಲಿದ್ದ ಬಸ್ ಲಾರಿಗೆ ಡಿಕ್ಕಿಯಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಂಗಳೂರು, ಜೂನ್ 11: ರಸ್ತೆ ಗುಂಡಿ ಇದೆಯೆಂದು ಕಂಟೇನರ್ ಲಾರಿ ಹಠಾತ್ ಬ್ರೇಕ್ ಹಾಕಿದ್ದು ಹೆಜಮಾಡಿ ಹೆದ್ದಾರಿಯಲ್ಲಿ ಸರಣಿ ಅಪಘಾತಕ್ಕೆ ಕಾರಣವಾಗಿದ್ದು, ಹಿಂದಿನಿಂದ ಅತಿ ವೇಗದಲ್ಲಿದ್ದ ಬಸ್ ಲಾರಿಗೆ ಡಿಕ್ಕಿಯಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬಸ್ ಮತ್ತು ಲಾರಿ ಪಡುಬಿದ್ರೆ ಕಡೆಯಿಂದ ಮಂಗಳೂರಿನತ್ತ ಬರುತ್ತಿತ್ತು. ಹೆದ್ದಾರಿಯಲ್ಲಿ ಹೆಜಮಾಡಿ ತಲುಪುತ್ತಿದ್ದಂತೆ ಎದುರಿನಲ್ಲಿ ದೊಡ್ಡ ಗುಂಡಿ ಬಿದ್ದಿರುವುದನ್ನು ನೋಡಿ ಲಾರಿ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಉಡುಪಿ- ಮಂಗಳೂರು ಎಕ್ಸ್ ಪ್ರೆಸ್ ಬಸ್ ನೇರವಾಗಿ ಲಾರಿಗೆ ಡಿಕ್ಕಿಯಾಗಿದೆ. ಲಾರಿಗೆ ಗುದ್ದಿದ ರಭಸಕ್ಕೆ ಬಸ್ಸಿನ ಮುಂಭಾಗ ಪೂರ್ತಿ ಅಪ್ಪಚ್ಚಿಯಾಗಿದ್ದು ಲಾರಿಯ ಒಳಗೆ ಹೋಗಿತ್ತು.

ಬಸ್ಸಿನಲ್ಲಿದ್ದ ಚಾಲಕ ಸಹಿತ 15ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರ ಗಾಯಗೊಂಡಿದ್ದಾರೆ. ಪಡುಬಿದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆದ್ದಾರಿ ಟೋಲ್ ವಸೂಲಿ ಮಾಡುವ ರಸ್ತೆಯಲ್ಲಿ ಗುಂಡಿ ಬಿದ್ದ ಪರಿಣಾಮ ಭೀಕರ ಅಪಘಾತವಾಗಿದ್ದು, ಅಮಾಯಕರು ಗಾಯಗೊಂಡಿದ್ದಾರೆ.

A major accident occurred near the Hejamady toll plaza involving a private express bus and a trailer lorry, resulting in injuries to around 15 bus passengers. According to sources, the trailer lorry driver abruptly stopped the vehicle on the national highway after noticing a pothole. The bus, which was following closely behind, collided with the trailer.