ಬ್ರೇಕಿಂಗ್ ನ್ಯೂಸ್
02-07-24 11:05 pm Mangalore Correspondent ಕರಾವಳಿ
ಮಂಗಳೂರು, ಜುಲೈ.2: ಮಂಗಳೂರು ನಗರವನ್ನು ಹಾದು ಹೋಗುವ ಹೆದ್ದಾರಿಯ ಅಲ್ಲಲ್ಲಿ ಮಳೆಯಿಂದಾಗಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಸಂಚಾರಕ್ಕೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ನಗರದ ಕೆಪಿಟಿ ವೃತ್ತದಲ್ಲಿ ಎರಡು ದಿನಗಳ ಹಿಂದೆ ಹೆದ್ದಾರಿ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರನೊಬ್ಬ ಗಾಯಗೊಂಡಿದ್ದ. ಇದನ್ನು ನೋಡಿ ಮನ ಕರಗಿದ ಟ್ರಾಫಿಕ್ ಪೊಲೀಸರು ಆ ಗುಂಡಿಗೆ ಸಿಮೆಂಟ್ ಹಾಕಿ ಮುಚ್ಚುವ ಕೆಲಸ ಮಾಡಿದ್ದಾರೆ.
ಕದ್ರಿ ಸಂಚಾರಿ ಠಾಣೆಯ ಇನ್ ಸ್ಪೆಕ್ಟರ್, ಮೈಸೂರು ಮೂಲದ ಈಶ್ವರ್ ಸ್ವಾಮಿ ಸ್ವತಃ ಹಾರೆ ಹಿಡಿದು ಗುಂಡಿಗೆ ಸಿಮೆಂಟ್ ತುಂಬಿಸುವ ಕೆಲಸ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರ ಈ ಕೆಲಸ ಶ್ಲಾಘನೆಗೆ ಪಾತ್ರವಾಗಿದೆ. ಕೆಪಿಟಿ ವೃತ್ತದ ಬಳಿಯಲ್ಲೇ ಹೆದ್ದಾರಿಯಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರಿಗೆ ಸಂಕಷ್ಟ ತಂದಿತ್ತು. ಹಾಗಿದ್ದರೂ, ಅಲ್ಲಿ ನಿಂತಿದ್ದ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ನಿಲ್ಲಿಸಿ ಫೈನ್ ಹಾಕುತ್ತಿದ್ದರೇ ವಿನಾ ಗುಂಡಿ ಮುಚ್ಚುವುದಕ್ಕಾಗಲೀ, ಹೆದ್ದಾರಿ ಇಲಾಖೆಗೆ ಹೇಳಿ ಕೆಲಸ ಮಾಡಿಸುವುದಾಗಲೀ ಮಾಡಿರಲಿಲ್ಲ.
ಮೊನ್ನೆ ಸ್ಕೂಟರ್ ಸವಾರನೊಬ್ಬ ಅದೇ ಗುಂಡಿಗೆ ಬಿದ್ದು ಮೈಕೈಗೆ ಗಾಯ ಮಾಡಿಕೊಂಡಿದ್ದ. ಟ್ರಾಫಿಕ್ ಪೊಲೀಸರು ನಿಲ್ಲುವ ಜಾಗದಲ್ಲೇ ಈ ಘಟನೆ ನಡೆದಿತ್ತು. ಇದನ್ನು ನೋಡಿದ್ದ ಟ್ರಾಫಿಕ್ ಇನ್ಸ್ ಪೆಕ್ಟರ್ ಈಶ್ವರ್ ಸ್ವಾಮಿ ಮಂಗಳವಾರ ಎಲ್ಲಿಂದಲೋ ಸಿಮೆಂಟ್ ಮಿಕ್ಸರ್ ತಂದು ಸುರಿದಿದ್ದಾರೆ. ಅಷ್ಟಾದರೂ ಗುಂಡಿ ಮುಚ್ಚಲಿ ಎಂದು ಸಾರ್ವಜನಿಕರ ಸೇವೆ ಮಾಡಿದ್ದಾರೆ. ಪುಣ್ಯಕ್ಕೆ ಸಂಜೆಯ ವರೆಗೆ ಮಳೆ ಬಿಟ್ಟಿದ್ದರಿಂದ ಸಿಮೆಂಟ್ ಸ್ವಲ್ಪ ಗಟ್ಟಿ ಆಗುವಂತೆ ಉಳಿದುಬಿಟ್ಟಿದೆ. ಪಣಂಬೂರು, ಬೈಕಂಪಾಡಿ, ಕುಳೂರು ಹೆದ್ದಾರಿ ಉದ್ದಕ್ಕೂ ಗುಂಡಿ ಬಿದ್ದಿದ್ದು, ಹೆದ್ದಾರಿ ಅಧಿಕಾರಿಗಳು ಇದನ್ನು ಮುಚ್ಚುವ ಗೊಡವೆಗೆ ಮುಂದಾಗಿಲ್ಲ.
Mangalore kadri traffic police inspector eshwar Swami and policeman fix potholes at KPT as authorities neglect duty. Eshwar Swamy, who works at the east traffic police station, along with contributions from traffic staff and auto-rickshaw drivers, managed to fix the pothole.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 01:40 pm
Ocean Pearl
Forensic Expert Dr Mahabala Shetty, Dharmasth...
01-08-25 10:02 pm
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm