ಭರತ್ ಶೆಟ್ಟಿ ಗಂಡು ಮಗ ಆಗಿದ್ದರೆ ನಮ್ಮೊಬ್ಬ ಕಾರ್ಯಕರ್ತನ ಮೇಲೆ ಕೈಮಾಡಲಿ, ಆಮೇಲೆ ರಾಹುಲ್ ಬಗ್ಗೆ ಮಾತಾಡ್ಲಿ ; ರಮಾನಾಥ ರೈ ಕಿಡಿ 

09-07-24 05:30 pm       Mangalore Correspondent   ಕರಾವಳಿ

ಬಿಜೆಪಿ‌ ಶಾಸಕ ಭರತ್ ಶೆಟ್ಟಿ ಅವರು ಕಾಂಗ್ರೆಸ್ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಪಾಳಕ್ಕೆ ಹೊಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ಮಾಜಿ ಸಚಿವ ರಮಾನಾಥ ರೈ ಕಿಡಿಕಾರಿದ್ದಾರೆ.

ಮಂಗಳೂರು, ಜುಲೈ 9: ಬಿಜೆಪಿ‌ ಶಾಸಕ ಭರತ್ ಶೆಟ್ಟಿ ಅವರು ಕಾಂಗ್ರೆಸ್ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಪಾಳಕ್ಕೆ ಹೊಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ಮಾಜಿ ಸಚಿವ ರಮಾನಾಥ ರೈ ಕಿಡಿಕಾರಿದ್ದಾರೆ. ಭರತ್ ಶೆಟ್ಟಿ ಶಾಸಕನಾಗೋದಕ್ಕೆ ನಾಲಾಯಕ್.‌ ಯೋಗ್ಯತೆ ಇಲ್ಲದ ಮನುಷ್ಯ. ತಾಕತ್ತಿದ್ದರೆ ನಮ್ಮ ಸಾಮಾನ್ಯ ಕಾರ್ಯಕರ್ತನ ಮೇಲೆ ಕೈಮಾಡಿ ನೋಡಲಿ ಎಂದು ಸವಾಲು ಹಾಕಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಶಾಸಕರು ರಾಹುಲ್ ಗಾಂಧಿ ಮಾತನಾಡಿರೋದನ್ನು ಅಪಾರ್ಥ ಮಾಡುತ್ತಿದ್ದಾರೆ. ಹಿಂದುಗಳ ಬಗ್ಗೆ ಯಾವುದೇ ಮಾತು ಆಡಿಲ್ಲ. ಹಿಂದುಗಳು ಯಾರನ್ನೂ ದ್ವೇಷ ಮಾಡಲ್ಲ ಎಂದಿದ್ದಾರೆ. ಆದರೆ ಭರತ್ ಶೆಟ್ಟಿ ಲೋಕಸಭೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾನೆ. ರಾಹುಲ್ ಗಾಂಧಿ‌ ಅವರಿಗೆ ಕಪಾಳಕ್ಕೆ ಹೊಡಿಬೇಕು ಎಂದು ಹೇಳಿದ್ದಾನೆ.‌

ಭರತ್ ಶೆಟ್ಟಿ ಶಾಸಕನಾಗೋದಕ್ಕೆ ನಾಲಾಯಕ್.‌ ಅವನು ಯೋಗ್ಯತೆ ಇಲ್ಲದ ಮನುಷ್ಯ‌‌. ಅವನು ಮೊದಲು ನಮ್ಮ ಸಾಮಾನ್ಯ ಕಾರ್ಯಕರ್ತನ ಮೇಲೆ ಕೈ ಮಾಡಲಿ.‌ ತಾಕತ್ತು ಇದ್ರೆ ಅವ ಗಂಡು ಮಗ ಆಗಿದ್ರೆ ಕಾರ್ಯಕರ್ತನ ಮೇಲೆ ಕೈ ಹಾಕಲಿ. ಆಮೇಲೆ ಜಿಲ್ಲೆಯಲ್ಲಿ ಏನು ಆಗುತ್ತೆ ಎಂದು ನಾನು ನೋಡ್ತೇನೆ. 

ಬೆಳ್ತಂಗಡಿ ಶಾಸಕ‌ನೊಬ್ಬ ಅಧಿಕಾರಿಗಳ ಮೇಲೆ ಕೈ ಮಾಡಲು ಹೋಗ್ತಾನೆ. ಭರತ್ ಶೆಟ್ಟಿ ವಿರೋಧ ಪಕ್ಷದ ನಾಯಕನಿಗೆ ಕಪಾಳಕ್ಕೆ ಹೊಡಿಬೇಕು ಅಂತಾನೆ. ಅವನ ಮೇಲೆ ಪೊಲೀಸರು ಸುಮೋಟೊ ಕೇಸ್ ಹಾಕಬೇಕು. ರಾಹುಲ್ ಗಾಂಧಿ ಹುಚ್ಚ ಎಂದು ಹೇಳಿದವನನ್ನು ಹಾಗೇ ಬಿಡಬಾರದು. ಇಂತಹ ಮಾತುಗಳನ್ನು ನಾವು ಸಹಿಸಲು ಸಾಧ್ಯವಿಲ್ಲ. ನಾವು ಸಣ್ಣಪುಟ್ಟ ಮಾತನಾಡಿದ್ರೆ ದೊಡ್ಡ ರಂಪಾಟ ಮಾಡುತ್ತಾರೆ. ಇಂಥವರನ್ನು ಹಾಗೆಯೇ ಬಿಡಬಾರದು. ಇವರಿಗೆ ಸಾಮಾನ್ಯ ಜನರನ್ನು ಪ್ರಚೋದಿಸುವುದೇ ಕೆಲಸ ಎಂದು ಕಿಡಿಕಾರಿದರು.‌

ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ ಡಾ.ವೈ.ಭರತ್ ಶೆಟ್ಟಿ, ಹಿಂದುಗಳ ವಿರುದ್ಧ ಅವಾಚ್ಯ ಮಾತನಾಡಿರುವ ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ. ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ ಎಂದಿದ್ದರು‌. ಸಂಸತ್ ನಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದ್ದ ವೇಳೆ ಈ ಮಾತು ಆಡಿದ್ದಾರೆ.

Former minister Ramanath Rai criticized MLA Bharath Shetty during a press meet held at the Congress office in Mallikatte on Tuesday, July 9, over his slap remark about leader of opposition in the Lok Sabha, Rahul Gandhi.