Mangalore, Talapady Suicide; ಪ್ರೇಮ ವೈಫಲ್ಯ ಶಂಕೆ; ಯುವಕ ನೇಣು ಬಿಗಿದು ಆತ್ಮಹತ್ಯೆ, ತಲಪಾಡಿ ಮರಿಯಾಶ್ರಮ ಚರ್ಚ್ ಬಳಿ ಘಟನೆ 

24-07-24 12:28 pm       Mangaluru Correspondent   ಕರಾವಳಿ

ಯುವಕನೋರ್ವನು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತಲಪಾಡಿಯ ಮರಿಯಾಶ್ರಮ ಚರ್ಚ್ ಬಳಿ ನಡೆದಿದ್ದು, ಘಟನೆಗೆ ಪ್ರೇಮ ವೈಫಲ್ಯವೇ ಕಾರಣವೆಂದು ಹೇಳಲಾಗುತ್ತಿದೆ.

ಮಂಜೇಶ್ವರ, ಜು.24: ಯುವಕನೋರ್ವನು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತಲಪಾಡಿಯ ಮರಿಯಾಶ್ರಮ ಚರ್ಚ್ ಬಳಿ ನಡೆದಿದ್ದು, ಘಟನೆಗೆ ಪ್ರೇಮ ವೈಫಲ್ಯವೇ ಕಾರಣವೆಂದು ಹೇಳಲಾಗುತ್ತಿದೆ.

ತಲಪಾಡಿ ಮಾರಿಯಾಶ್ರಮ ಚರ್ಚ್ ಬಳಿಯ ನಿವಾಸಿ ಬ್ರಾಯನ್ ಪಿಂಟೋ (20) ನಿನ್ನೆ ಬೆಳಗ್ಗೆ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಲಪಾಡಿ ರಿಕ್ಷಾ ತಂಗುದಾಣದಲ್ಲಿ ರಿಕ್ಷಾ ಚಾಲಕರಾಗಿರುವ ಬೆನೆಟ್ ಪಿಂಟೋರ ಪುತ್ರನಾಗಿರುವ ಬ್ರಾಯನ್ ಪಿಂಟೋ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಮೊನ್ನೆ ರಾತ್ರಿ ಮನೆಯಲ್ಲಿದ್ದ ಬ್ರಾಯನ್ ನಿನ್ನೆ ಬೆಳಗ್ಗೆ ಮನೆಯಲ್ಲಿ ಇರಲಿಲ್ಲ.  ಮನೆಯ ಪಕ್ಕದಲ್ಲೇ ಬೆನೆಟ್ ಅವರಿಗೆ ಸೇರಿರುವ ಮತ್ತೊಂದು ಮನೆಯಿದ್ದು ಆ ಮನೆಯ ಪಕ್ಕಾಸಿಗೆ ಬ್ರಾಯನ್ ಪಿಂಟೊ ಶಾಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಿಸರದಲ್ಲಿ ವಾಕಿಂಗ್ ಹೋಗುವವರು ಘಟನೆಯನ್ನು  ಕಂಡು ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡಿನ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಇಂದು ಸಂಜೆ ಮನೆಗೆ ತರಲಾಗುವುದು. ಬಳಿಕ ತಲಪಾಡಿ ಮರಿಯಾಶ್ರಮ ಚರ್ಚ್ ನಲ್ಲಿ ಧಪನ ಕಾರ್ಯಕ್ರಮ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತಪಟ್ಟ ಬ್ರಾಯನ್ ಪಿಂಟೋ ತಂದೆ, ತಾಯಿ ಈನೆಟ್ ಪಿಂಟೋ, ಸಹೋದರಿ ಬ್ರಿಯೊನ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

A twenty-year-old boy kills himself in Talpady, Mangalore. Bryan Pinto has been identified as the dead. He's been having suicide thoughts due to certain issues in his relationship. Manjeshwar police has the case lodged.