ಬ್ರೇಕಿಂಗ್ ನ್ಯೂಸ್
27-07-24 02:09 pm Mangalore Correspondent ಕರಾವಳಿ
ಮಂಗಳೂರು, ಜುಲೈ.27: ಸಕಲೇಶಪುರ ಬಳಿಯ ಎಡಕುಮೇರಿ- ಕಡಗರವಳ್ಳಿ ಮಧ್ಯೆ ರೈಲು ಹಳಿಗೆ ಭೂಕುಸಿತ ಆಗಿರುವುದರಿಂದ ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದಂತೆಯೇ ಈ ಹಾದಿಯಲ್ಲಿ ಸಾಗುವ ಜುಲೈ 29ರ ವರೆಗಿನ ಎಂಟು ರೈಲುಗಳನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ದಕ್ಷಿಣ ರೈಲ್ವೇಯ ಪಿಆರ್ ಓ ದೇವದಾನಂ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಜುಲೈ 27ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ವಿಜಯಪುರಕ್ಕೆ ತೆರಳಬೇಕಿದ್ದ ಸ್ಪೆಷಲ್ ಎಕ್ಸ್ ಪ್ರೆಸ್ ರೈಲನ್ನು (ಸಂಖ್ಯೆ 07378) ರದ್ದುಪಡಿಸಲಾಗಿದೆ. ಜುಲೈ 28ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಬೆಂಗಳೂರು ಯಶವಂತಪುರಕ್ಕೆ ತೆರಳಬೇಕಿದ್ದ ಪ್ಯಾಸೆಂಜರ್ ರೈಲು (ಸಂಖ್ಯೆ 16540) ರದ್ದಾಗಿದೆ. ರೈಲು ಸಂಖ್ಯೆ 07377 ವಿಜಯಪುರದಿಂದ ಮಂಗಳೂರು ಸೆಂಟ್ರಲ್ ನಿಲ್ದಾಣ ಮಧ್ಯೆ ಜುಲೈ 27ರಂದು ಓಡಾಟ ನಡೆಸಬೇಕಿದ್ದ ರೈಲನ್ನೂ ರದ್ದುಪಡಿಸಲಾಗಿದೆ.
ಜುಲೈ 28ರಂದು ಬೆಂಗಳೂರಿನಿಂದ ಕಾರವಾರಕ್ಕೆ ತೆರಳುವ ಸ್ಪೆಷಲ್ ಎಕ್ಸ್ ಪ್ರೆಸ್ (ಸಂಖ್ಯೆ 06567) ರೈಲನ್ನೂ ರದ್ದು ಮಾಡಲಾಗಿದೆ. ಜುಲೈ 27ರಂದು ಕಾರವಾರದಿಂದ ಬೆಂಗಳೂರು ತೆರಳಬೇಕಿದ್ದ 06568 ನಂಬರಿನ ರೈಲನ್ನೂ ರದ್ದುಪಡಿಸಲಾಗಿದೆ. ಜುಲೈ 27ರಂದು ಎಸ್ಎಂವಿಟಿ ಬೆಂಗಳೂರು- ಮುರುಡೇಶ್ವರ ಮಧ್ಯೆ ಓಡಾಟ ನಡೆಸಬೇಕಿದ್ದ ಎಕ್ಸ್ ಪ್ರೆಸ್ (ಸಂಖ್ಯೆ 16585) ರೈಲನ್ನು ರದ್ದು ಮಾಡಲಾಗಿದೆ. ಜುಲೈ 28ರಂದು ಮುರುಡೇಶ್ವರದಿಂದ ಬೆಂಗಳೂರು ತೆರಳಬೇಕಿದ್ದ 16586 ನಂಬರಿನ ರೈಲನ್ನೂ ರದ್ದು ಮಾಡಲಾಗಿದೆ. ಜುಲೈ 28ರಂದು ಯಶವಂತಪುರ- ಮಂಗಳೂರು ಜಂಕ್ಷನ್ ಮಧ್ಯೆ ಸಂಚರಿಸುವ (ಸಂಖ್ಯೆ 16575) ರೈಲನ್ನೂ ರದ್ದುಪಡಿಸಲಾಗಿದೆ. ಜುಲೈ 29ರಂದು ಸಂಚರಿಸುವ ಮಂಗಳೂರು ಜಂಕ್ಷನ್ – ಯಶವಂತಪುರ ಜಂಕ್ಷನ್ ನಡುವಿನ ರೈಲನ್ನೂ ರದ್ದು ಮಾಡಲಾಗಿದೆ.
Train services between Karwar-Mangaluru and Bengaluru were affected after a landslip between Yadakumari and Kadagaravalli (Western Ghats section) of South Western Railway at 6.56 p.m. on Friday. A release from South Western Railway said that train No. 06568 Karwar – SMVT Bengaluru Special Express was cancelled and seven other trains had been diverted as a result.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
29-07-25 09:56 pm
Mangalore Correspondent
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
29-07-25 08:54 pm
HK News Desk
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm