ಬ್ರೇಕಿಂಗ್ ನ್ಯೂಸ್
28-07-24 06:37 pm Mangalore Correspondent ಕರಾವಳಿ
ಮಂಗಳೂರು, ಜುಲೈ 28: ಮೂಡಾ ಹಗರಣದ ಬಗ್ಗೆ ಮುಖ್ಯಮಂತ್ರಿಗಳು ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಿದ್ದಾರೆ. ವಿಚಾರಣೆ ಬಳಿಕ ಹಾಲು ಯಾವುದು, ನೀರು ಯಾವುದೆಂದು ಗೊತ್ತಾಗುತ್ತೆ. ಬಿಜೆಪಿ, ಜೆಡಿಎಸ್ ನವರಿಗೆ ಈ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಬೇರೆಯವರಿಗೆ ಕಲ್ಲು ಹೊಡೆಯುವ ಮೊದಲು ಅವರು ಗಾಜಿನ ಮನೆಯಲ್ಲಿದ್ದಾರೆಂದು ತಿಳಿದುಕೊಂಡ್ರೆ ಬಹಳ ಒಳ್ಳೇದು ಎಂದು ವಿಧಾನ ಪರಿಷತ್ ಸದಸ್ಯ, ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಹಗರಣ ಆಗಿದೆಯೋ ಗೊತ್ತಿಲ್ಲ, ಆದ್ರೆ ಆಪಾದನೆ ಮಾಡಿದ್ದಾರೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತೆ. ಸಿಬಿಐ, ಇಡಿ ಎಲ್ಲವು ವಿಚಾರಣೆಗೆ ಮುಂದೆ ಬಂದಿದೆ. ಅಂತಿಮವಾದ ನಿರ್ಣಯ ಬಂದ ಬಳಿಕ ಯಾರು ಎಲ್ಲಿದ್ದಾರೆಂದು ಗೊತ್ತಾಗುತ್ತೆ. ರಾಜ್ಯ ಸರ್ಕಾರಕ್ಕೆ ಮಸಿ ಬಳಿಯಬೇಕೆಂದು ನಿರಂತರ ಪ್ರಯತ್ನ ಆಗ್ತಿದೆ. ಬಿಜೆಪಿ, ಸಂಘಪರಿವಾರ, ಕಾಂಗ್ರೆಸ್ ಪಕ್ಷದ ವಿರೋಧಿಗಳು ಮಾಡ್ತಿದ್ದಾರೆ. ಇದೇನು ಹೊಸದೇನು ಅಲ್ಲ.
2ಜಿ, 3ಜಿ ಆಗಿ, ಹತ್ತು ವರ್ಷ ಆಯ್ತು. ಆ ಮಹಾನುಭಾವ ವಿಶ್ವಗುರು ಯಾರನ್ನಾದರೂ ಜೈಲಿಗೆ ಕಳುಹಿಸಿದ್ರಾ..? ನೀವು ತೊಳೆದುಕೊಂಡಿರಿ ಎಂದು ಮಸಿ ಬಳಿದು ಬಿಡೋದು. ಈ ನಾಟಕಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ಕಟ್ಟಿಟ್ಟು ಕೊಟ್ಟ ಬುತ್ತಿ ಹೇಳಿಕೊಟ್ಟ ಮಾತು ಬಹಳ ದೂರ ಬರೋದಿಲ್ಲ. ಸುಳ್ಳು ಬಹಳ ದಿವಸ ಇರೋದಿಲ್ಲ. ಕರ್ನಾಟಕದಲ್ಲಿ ಆಗಿರುವ ಘಟನೆಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದರು.
ಹೈಕಮಾಂಡ್ ಮುಖ್ಯಮಂತ್ರಿ, ಕೆ.ಪಿ.ಸಿ.ಸಿ ಅಧ್ಯಕ್ಷರನ್ನು ಕರೆಯೋದು ಸಂಪ್ರದಾಯ. ಯಾವ ವಿಚಾರ ಮಾತನಾಡ್ತಾರೆಂದು ನೋಡಬೇಕಾಗಿದೆ. ಭೂಮಿ ಅಂತ ಬಂದಾಗ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬಹಳಷ್ಟು ಜನ ಇರ್ತಾರೆ. ಅದರ ಬಗ್ಗೆ ಮಾತನಾಡಿ ಏನು ಪ್ರಯೋಜನ ಇಲ್ಲ. ಆತರ ಮಾಡಬೇಕಾದ್ರೆ ಬೇರೆ ರೀತಿಯ ವೇದಿಕೆ ಬೇಕಾಗುತ್ತೆ. ಮಾಡಿರುವ ಅಪಾದನೆಗೆ ತನಿಖೆ ವರದಿ ಬಂದ ಬಳಿಕ ನೋಡೋಣ ಎಂದರು. ಬಿಜೆಪಿಯ 40% ಕಮಿಷನ್ ಆರೋಪದ ಬಗ್ಗೆ ಕೇಳಿದ ತನಿಖೆ ಯಾಕೆ ಇನ್ನು ನಡೆದಿಲ್ಲ ಅಂತ ಸಿಎಂ , ಡಿಸಿಎಂ ಅವರನ್ನ ಕೇಳಬೇಕು. ಯಾಕೆ ತನಿಖೆ ಈವರೆಗೆ ಆಗಿಲ್ಲ ಅನ್ನೋದು ಅವರೇ ಉತ್ತರಿಸುತ್ತಾರೆ. ನಾನು ಸರಕಾರದ ಪರವಾಗಿ ಇರೋನು. ಆದರೆ ಸರಕಾರದಲ್ಲಿ ಇಲ್ಲ ಎಂದರು ಬಿಕೆ.
ನೀತಿ ಆಯೋಗದ ಸಭೆಗೆ ಸಿ.ಎಂ ಸಿದ್ದರಾಮಯ್ಯ ಗೈರು ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೀತಿ ಆಯೋಗ ಎಂಬುದು ಪ್ರಧಾನಮಂತ್ರಿಗಳು ಹೇಳಿದ್ದಕ್ಕೆ ತಾಳ ಹಾಕುವ ಹಾಗೆ ಮಾಡೋದಕ್ಕೆ ಇರೋದು. ನೀತಿ ಆಯೋಗ ಸರಿ ಇದ್ದಿದ್ರೆ ಬಜೆಟ್ ನಲ್ಲಿ ಅತೀ ಹೆಚ್ಚು ತೆರಿಗೆ ಮೂಲಕ ಖಜಾನೆ ತುಂಬಿಸುವ ರಾಜ್ಯಗಳಿಗೆ ಸಹಾಯ ಮಾಡಬೇಕಿತ್ತು. ರೋಗಗ್ರಸ್ತ ರಾಜ್ಯಗಳಿಗೆ ಹೆಚ್ಚಿನ ಹಣ ಕೊಟ್ಟಿದ್ದಾರೆ. ರಕ್ತ, ಬೆವರು ಸುರಿಸಿ ಟ್ಯಾಕ್ಸ್ ಕಟ್ಟೋದು ಅಭಿವೃದ್ಧಿ ಹೊಂದಿದ ರಾಜ್ಯಗಳು. ನಾವು ಬೇರೆಯವರಿಗೆ ಕೊಡಬೇಡಿ ಎಂದು ಹೇಳಲ್ಲ. ನಮ್ಮ ಶೇರ್ ನಮಗೆ ಕೊಡಿ ಎಂದು ಕೇಳಿದ್ರೆ ಕೊಟ್ಟಿಲ್ಲ. ಅದಕ್ಕೆ ನಾವು ನೀತಿ ಆಯೋಗವನ್ನು ಬಾಯ್ಕಾಟ್ ಮಾಡಿದ್ದೇವೆ.
ಪ್ಲ್ಯಾನಿಂಗ್ ಕಮೀಷನ್ ಹೆಸರಿಟ್ಟಿದ್ದು ಸಾವರ್ಕರ್ ಅಲ್ಲ
ಮಮತಾ ಬ್ಯಾನರ್ಜಿ ವಿರೋಧ ಮಾಡಿ ಹೋಗೋದು ಅದು ಅವರಿಗೆ ಬಿಟ್ಟಿರೋದು. ಪ್ಲ್ಯಾನಿಂಗ್ ಕಮೀಷನ್ ಅನ್ನೋದು ಸಾವರ್ಕರ್ ಹೆಸರಿಟ್ಟಿದ್ದು ಅಲ್ಲ. ದೇಶದ ಸ್ವತಂತ್ರ ಹೋರಾಟದ ಉತ್ತುಂಗ ನಾಯಕ ಸುಭಾಷ್ಚಂದ್ರ ಬೋಸ್. ಆ ಪ್ಲ್ಯಾನಿಂಗ್ ಕಮೀಷನ್ ಹೆಸರೇ ತೆಗಿತಾರೆ. ಮಹಾತ್ಮಗಾಂಧಿ, ನೆಹರು ಇಟ್ಟಿರೋದನ್ನು ಬದಲಾವಣೆ ಮಾಡ್ತಿದ್ದಾರೆ. ಸುಭಾಷ್ ಚಂದ್ರ ಬೋಸ್ ಮೇಲೆ ಇವರಿಗೇನು ಕೋಪ. ಪ್ಲ್ಯಾನಿಂಗ್ ಕಮೀಷನ್ ಹೆಸರಿಟ್ಟಿದ್ದು ಅವರು. ಅದನ್ನು ಯಾಕೆ ಬದಲಾವಣೆ ಮಾಡ್ತಿದ್ದಾರೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
The chief minister has ordered a probe by a retired judge into the Muda scam. After inquiry it will be known which is milk and which is water. BJP and JDS have no moral right to talk about this corruption says BK Hariprasad in Mangalore
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
29-07-25 09:56 pm
Mangalore Correspondent
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
29-07-25 08:54 pm
HK News Desk
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm