Mangalore, Krishna prasad bus, ambulance: ಬಸ್ಸಿನಲ್ಲಿ ಕುಸಿದು ಬಿದ್ದ ಯುವತಿ ; ತುರ್ತು ಸ್ಪಂದಿಸಿದ ಸಿಬಂದಿ, ಆಂಬುಲೆನ್ಸ್ ರೀತಿ ಆಸ್ಪತ್ರೆಯತ್ತ ಬಸ್ ಒಯ್ದ ಚಾಲಕ, ನಿರ್ವಾಹಕರ ಕೆಲಸಕ್ಕೆ ಪ್ರಶಂಸೆ

31-07-24 08:38 pm       Mangalore Correspondent   ಕರಾವಳಿ

ಬಸ್ಸಿನಲ್ಲಿ ತೆರಳುತ್ತಿದ್ದ ಯುವತಿ ದಿಢೀರ್ ಕುಸಿದು ಬಿದ್ದ ಸಂದರ್ಭದಲ್ಲಿ ಖಾಸಗಿ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ಆಂಬುಲೆನ್ಸ್ ರೀತಿಯಲ್ಲಿ ಅತಿವೇಗದಲ್ಲಿ ಚಲಾಯಿಸಿ ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದ ಘಟನೆ ನಗರದಲ್ಲಿ ನಡೆದಿದ್ದು, ಬಸ್ ಸಿಬಂದಿಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಮಂಗಳೂರು, ಜುಲೈ.31: ಬಸ್ಸಿನಲ್ಲಿ ತೆರಳುತ್ತಿದ್ದ ಯುವತಿ ದಿಢೀರ್ ಕುಸಿದು ಬಿದ್ದ ಸಂದರ್ಭದಲ್ಲಿ ಖಾಸಗಿ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ಆಂಬುಲೆನ್ಸ್ ರೀತಿಯಲ್ಲಿ ಅತಿವೇಗದಲ್ಲಿ ಚಲಾಯಿಸಿ ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದ ಘಟನೆ ನಗರದಲ್ಲಿ ನಡೆದಿದ್ದು, ಬಸ್ ಸಿಬಂದಿಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಮಂಗಳವಾರ ಸಂಜೆ ಕುಂಜತ್ತ್ ಬೈಲ್- ಮಂಗಳಾದೇವಿ ನಡುವೆ ಸಂಚರಿಸುವ 13- ಎಫ್ ನಂಬರಿನ ಖಾಸಗಿ ಬಸ್ಸಿನಲ್ಲಿ ಘಟನೆ ನಡೆದಿದೆ. ಸಂಜೆ ವೇಳೆಗೆ ಕುಳೂರಿನಿಂದ ಜ್ಯೋತಿಯತ್ತ ಬರುತ್ತಿದ್ದ ಯುವತಿಗೆ ಲೇಡಿಹಿಲ್ ತಲುಪಿದಾಗ ಅಸ್ವಸ್ಥತೆ ಉಂಟಾಗಿತ್ತು. ಪಿವಿಎಸ್ ತಲುಪಿದಾಗ ಕುಸಿದು ಬಿದ್ದಿದ್ದು, ಬಂಟ್ಸ್ ಹಾಸ್ಟೆಲ್, ಜ್ಯೋತಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಇದ್ದರೂ ಅಲರ್ಟ್ ಸೈರನ್ ಮೊಳಗಿಸುತ್ತಾ ಬಸ್ಸನ್ನು ನೇರವಾಗಿ ಕಂಕನಾಡಿಯತ್ತ ನುಗ್ಗಿಸಿದ್ದಾರೆ.

ಎಲ್ಲಿಯೂ ಪಿಕಪ್ ಮಾಡದೆ ಇಳಿಯುವುದಕ್ಕೆ ಮಾತ್ರ ಅವಕಾಶ ಕೊಟ್ಟು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯತ್ತ ಒಯ್ದು ಅಲ್ಲಿ ಯುವತಿಯನ್ನು ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಾರೆ. ಬಸ್ ಚಾಲಕ ಗಜೇಂದ್ರ ಕುಂದರ್ ಮತ್ತು ನಿರ್ವಾಹಕ ಮಹೇಶ್ ಪೂಜಾರಿ ಅವರ ಕೆಲಸಕ್ಕೆ ಸಾರ್ವಜನಿಕರು ಶಹಭಾಷ್ ಹೇಳಿದ್ದಾರೆ. ತುರ್ತಾಗಿ ಯುವತಿಯನ್ನು ಆಸ್ಪತ್ರೆಗೆ ಒಯ್ದಿದ್ದರಿಂದ ಆಕೆ ಬದುಕುಳಿದಿದ್ದಾಳೆ ಎಂದು ತಿಳಿದುಬಂದಿದೆ.

Mangalore Krishna prasad city bus turns into ambulance, rushes medical emergency student to hospital. The bus on Route 13F was plying from Kunjathbail to Mangaladevi temple. Gajendra Kundar was driving while Mahesh Poojary was the conductor. Suresh, another driver who had to take over from Kundar, was also in the bus. The video of this has gone viral on social media