ಬ್ರೇಕಿಂಗ್ ನ್ಯೂಸ್
31-07-24 11:03 pm Mangalore Correspondent ಕರಾವಳಿ
ಮಂಗಳೂರು, ಜುಲೈ 31: ಹಂಪನಕಟ್ಟೆಯ ಹೃದಯಭಾಗದಲ್ಲಿ ಶತಮಾನ ಪೂರೈಸಿದ ಪಿರೇರಾ ಹೊಟೇಲ್ ಕೊನೆಗೂ ಬಾಗಿಲು ಹಾಕಿದೆ. ಒಂದು ಕಾಲದಲ್ಲಿ ಪೋರ್ಕ್ ಪೆಪ್ಪರ್ ಡ್ರೈ ಕಾರಣಕ್ಕೆ ಕೆಥೋಲಿಕ್ ಕ್ರಿಸ್ತಿಯನ್ನರ ಪಾಲಿನ ಅತ್ಯಂತ ನೆಚ್ಚಿನ ಮತ್ತು ಮಂಗಳೂರಿನ ಈ ರೀತಿಯ ಏಕೈಕ ಹೊಟೇಲ್ ಆಗಿದ್ದ ಪಿರೇರಾ ಮೊನ್ನೆ ಜುಲೈ 27ರಂದು ಕೊನೆಯ ಸರ್ವ್ ಮಾಡಿದೆ.
1921ರಲ್ಲಿ ಮಿಲಾಗ್ರಿಸ್ ಚರ್ಚ್ ಎದುರಿನ ಕಟ್ಟಡದಲ್ಲಿ ಆರಂಭಗೊಂಡಿದ್ದ ಪಿರೇರಾ ಹೊಟೇಲಿನ ಒಡೆತನ ನಾಲ್ಕನೇ ತಲೆಮಾರಿಗೆ ವಾಲಿಕೊಂಡಿತ್ತು. ದಿವಂಗತ ಇಗ್ನೇಶಿಯಸ್ ಪಿರೇರಾ ಈ ಹೊಟೇಲಿನ ಸ್ಥಾಪಕರಾಗಿದ್ದು, ಆನಂತರ ಅವರ ಮಗ, ಮೊಮ್ಮಗನೂ ಹೊಟೇಲನ್ನು ಒಳ್ಳೆಯ ರೀತಿ ನಡೆಸಿಕೊಂಡು ಬಂದಿದ್ದರು. ಸಾಮಾನ್ಯ ದರದಲ್ಲಿ ಸಿಗುತ್ತಿದ್ದ ಮೀನು ಊಟ ಪಿರೇರಾ ಹೊಟೇಲಿನ ಫೇಮಸ್ ಡಿಶ್ ಆಗಿತ್ತು. ಸಾಮಾನ್ಯ ದರಕ್ಕೆ ಅತ್ಯುತ್ತಮ ಊಟ ಸಿಗುತ್ತಿದ್ದ ಕಾರಣಕ್ಕೆ ಅತಿ ಹೆಚ್ಚು ಜನರು ಊಟಕ್ಕಾಗಿ ಪಿರೇರಾ ಹೊಟೇಲ್ ಹೋಗುತ್ತಿದ್ದರು.



ಮೂರನೇ ತಲೆಮಾರಿನ ಓಲಿವರ್ ಪಿರೇರಾ ಇತ್ತೀಚಿನ ವರೆಗೂ ಹೊಟೇಲನ್ನು ಹಳೆಯ ಶೈಲಿಯಲ್ಲೇ ನಡೆಸಿಕೊಂಡು ಬಂದಿದ್ದರು. ಹೊಟೇಲ್ ನಿಲ್ಲಿಸುತ್ತಿರುವುದಕ್ಕೆ ಅವರು ಕೊಟ್ಟ ಮೇಜರ್ ಕಾರಣ, ನಮ್ಮ ನಾಲ್ಕನೇ ತಲೆಮಾರಿನವರು ಹೊಟೇಲ್ ನಡೆಸುವುದಕ್ಕೆ ಆಸಕ್ತಿ ಹೊಂದಿಲ್ಲ ಎನ್ನೋದನ್ನು. ಎರಡನೇದಾಗಿ ಪಾರ್ಕಿಂಗ್ ಇಲ್ಲದ ಕಾರಣ ಜನರು ಇಲ್ಲಿಗೆ ಹೆಚ್ಚು ಬರುತ್ತಿಲ್ಲ. ಹೆಚ್ಚಿನವರು ತಮ್ಮದೇ ವಾಹನದಲ್ಲಿ ಹೊಟೇಲ್ ಬರುತ್ತಾರೆ. ಮತ್ತೊಂದು, ಈಗ ಒಳ್ಳೆ ಕುಕ್ ಸಿಗುತ್ತಿಲ್ಲ. ನಾನು ಸುದೀರ್ಘ ಕಾಲ ಹೊಟೇಲ್ ನಡೆಸಿಕೊಂಡು ಬಂದೆವು. ಇನ್ನೂ ಕಷ್ಟ ಪಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಮೊದಲಿಗೆ ಇಗ್ನೇಶಿಯಸ್ ಪಿರೇರಾ ಹೊಟೇಲ್ ಆರಂಭಿಸಿದ್ದರೂ, ಮಗ ವಿಲಿಯಂ ಪಿರೇರಾ ಕಾಲದಲ್ಲಿ ಹೊಟೇಲ್ ಮತ್ತಷ್ಟು ಉತ್ತಮವಾಗಿತ್ತು. ಆನಂತರ, ಮೊಮ್ಮಗ ಒಲಿವರ್ ಪಿರೇರಾ ಅವರು ಮತ್ತಷ್ಟು ಮೆನುಗಳನ್ನು ರೆಡಿ ಮಾಡಿಸಿ, ಮೀನು, ಮಾಂಸ ಪ್ರಿಯರನ್ನು ಹೊಟೇಲಿನತ್ತ ಆಕರ್ಷಿಸುವಂತೆ ಮಾಡಿದ್ದರು. ಸ್ವಂತ ಕಟ್ಟಡದಲ್ಲಿ ಹೊಟೇಲ್ ಮಾಡಿಸಿ, ಮೊದಲ ಮಹಡಿಯಲ್ಲಿ ಲಾಡ್ಜಿಂಗ್ ಮಾಡಿಸಿದ್ದರು. ಓಲಿವರ್ ಕ್ಯಾಟರಿಂಗ್ ಸೇವೆಯನ್ನೂ ಆರಂಭಿಸಿ, ಕೋವಿಡ್ ವರೆಗೂ ನಡೆಸಿಕೊಂಡು ಬಂದಿದ್ದರು. ಆನಂತರ, ಕೆಲಸಕ್ಕೆ ಜನ ಸಿಗದೆ ನಿಲ್ಲಿಸಿದ್ದರು.
ತಮ್ಮ ಕುಟುಂಬ ಬಿಟ್ಟು ಬೇರೆಯವರಿಗೆ ಹೊಟೇಲ್ ನಡೆಸುವುದಕ್ಕೆ ಬಿಟ್ಟುಕೊಡುತ್ತೀರಾ ಎಂಬ ಪ್ರಶ್ನೆಗೆ, ಒಂದೂ ತೋಚುತ್ತಿಲ್ಲ ಎನ್ನುತ್ತಾರೆ ಓಲಿವರ್. ಪಿರೇರಾ ಹೊಟೇಲ್ ಪ್ರಿಯರೆಲ್ಲ ಓಲಿವರ್ ಅವರಲ್ಲಿ ಏನು ಹೊಟೇಲ್ ನಿಲ್ಲಿಸ್ತೀರಾ ಎಂದು ಪ್ರಶ್ನೆ ಹಾಕುತ್ತಿದ್ದಾರೆ.
The iconic Pereira Hotel, affectionately known as Inasaam’s Hotel, located in the heart of the city at Hampankatta, served its final meal to customers on Saturday and closed its doors permanently, after 100 years of operation.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm