ಬ್ರೇಕಿಂಗ್ ನ್ಯೂಸ್
01-08-24 02:36 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1: ಫಲ್ಗುಣಿ ನದಿಯ ಹರಿಯುವ ಉದ್ದಕ್ಕೂ ನಿನ್ನೆ ರಾತ್ರಿ ದಿಢೀರ್ ನೆರೆ ಬಂದಿದೆ. ವೇಣೂರು, ಹೊಸಂಗಡಿ, ಪೊಳಲಿ ಸಮೀಪದ ಅಮ್ಮುಂಜೆ, ಉಳಾಯಿಬೆಟ್ಟು ಆಸುಪಾಸಿನಲ್ಲಿ ರಾತ್ರೋರಾತ್ರಿ ನೀರು ಉಕ್ಕಿ ಬಂದಿದ್ದು, ಪರಿಸರದ ಹಲವಾರು ಮನೆಗಳಿಗೆ ನುಗ್ಗಿದೆ. ಇದರಿಂದಾಗಿ ಜನರು ಮನೆ ಬಿಟ್ಟು ಹೊರಬಂದು ಪರದಾಟ ಅನುಭವಿಸಿದ್ದಾರೆ.
ಇತ್ತ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಇಳಿಕೆಯಾದರೂ, ಫಲ್ಗುಣಿ ನದಿಯಲ್ಲಿ ಮಾತ್ರ ನೆರೆ ಬಂದಿರುವುದು ಹೇಗೆ ಎಂಬ ಪ್ರಶ್ನೆ ಬಂದಿದೆ. ಗುರುಪುರದಲ್ಲಿ ಹೊಸ ಹೆದ್ದಾರಿಗೆ ಅವೈಜ್ಞಾನಿಕ ರೀತಿ ಮತ್ತು ತರಾತುರಿಯಲ್ಲಿ ಕಟ್ಟಲಾಗುತ್ತಿರುವ ಅಣೆಕಟ್ಟು ಹಾಗೂ ಕುಳೂರಿನಲ್ಲಿ ಎರಡು ವರ್ಷಗಳಿಂದಲೂ ಅಣೆಕಟ್ಟು ಸಲುವಾಗಿ ನದಿಗೆ ಮಣ್ಣು ತುಂಬಿದ್ದರಿಂದ ಈ ರೀತಿಯ ನೆರೆ ಬಂದಿದೆ ಎನ್ನಲಾಗುತ್ತಿದೆ.
ಹೊಸಂಗಡಿ, ವೇಣೂರಿನಲ್ಲಿ ಈ ರೀತಿ ನೆರೆ ಬಂದಿದ್ದು ಭಾರೀ ಕಡಿಮೆ. ಅಲ್ಲದೆ, ಪೊಳಲಿ ಆಸುಪಾಸಿನಲ್ಲಿಯೂ ನೆರೆ ಬಂದದ್ದಿಲ್ಲ. ಉಳಾಯಿಬೆಟ್ಟು ಪರಿಸರದಲ್ಲಿ ಹೆಚ್ಚು ಮಳೆಯಾದರೆ ಈ ಹಿಂದೆಯೂ ನೀರು ಉಕ್ಕಿ ಕೃಷಿಗೆ ನುಗ್ಗಿದ್ದಿದೆ. ಆದರೆ, ಫಲ್ಗುಣಿ ನದಿ ಹರಿಯುವ ಎಲ್ಲ ಕಡೆಯೂ ಈ ಬಾರಿ ನೆರೆ ಬಂದಿದೆ. ಅದ್ಯಪಾಡಿ ಬಳಿಯ ಮುಗೇರಕುದ್ರು ಎನ್ನುವ ಪ್ರದೇಶವಂತೂ ಒಂದು ತಿಂಗಳಿನಿಂದ ಮುಳುಗಡೆಯಾಗಿದೆ. ಅದಕ್ಕೆ ಅಲ್ಲಿನ ಅವೈಜ್ಞಾನಿಕ ಅಣೆಕಟ್ಟು ಕಾರಣವಾದರೆ, ಬೇರೆಲ್ಲ ಕಡೆ ದಿಢೀರ್ ನೆರೆ ನೀರು ಉಕ್ಕುವುದಕ್ಕೆ ಮಳೆ ಎಷ್ಟು ಕಾರಣವೋ, ಸೇತುವೆಯ ಕಾರಣಕ್ಕೆ ನದಿಗೆ ಮಣ್ಣು ತುಂಬಿಸಿರುವುದೂ ಅಷ್ಟೇ ಕಾರಣ.
ಪೊಳಲಿ, ಉಳಾಯಿಬೆಟ್ಟು ಪ್ರದೇಶದಲ್ಲಿ ರಾತ್ರಿ ವೇಳೆ ಮನೆಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ವೇಣೂರು, ಹೊಸಂಗಡಿ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳು ಮಹಿಳೆಯರು, ಮಕ್ಕಳು ನಿದ್ದೆ ಬಿಟ್ಟು ರಸ್ತೆಗೆ ಬಂದು ನಿಂತುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದೇ ಏರಿಯಾದಲ್ಲಿ ರಸ್ತೆಗೆ ನೀರು ನುಗ್ಗಿದ್ದರಿಂದ ಬಸ್ ತೆರಳಲು ಸಾಧ್ಯವಾಗದೆ, ಸ್ಥಳೀಯರು ಅದರಲ್ಲಿದ್ದ ಜನರನ್ನು ಇಳಿಸಿ ಇನ್ನೊಂದು ಕಡೆಗೆ ದಾಟಿಸಿದ್ದಾರೆ. ಗುರವಾರ ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಎಂದಿನ ರೀತಿಯಲ್ಲೇ ಪರಿಹಾರದ ಮಾತುಗಳನ್ನಾಡಿ ಬಂದಿದ್ದಾರೆ.
Mangalore heavy rain, palguni river water overflows, houses and tempele flooded with water. The water level of the Gurpur Phalguni river rose to dangerous levels due to the incessant rains lashing the city since Wednesday. Water gushed into the house of Arbee Didpe in Sanjeev early Thursday morning. Fire service personnel from Pandeshwar rushed to the spot.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm