ಬ್ರೇಕಿಂಗ್ ನ್ಯೂಸ್
07-08-24 11:08 am Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 7: ರಾಜ್ಯದ 31 ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯಲ್ಲಿ ಜೂನ್, ಜುಲೈ ತಿಂಗಳಲ್ಲಿ ಮಳೆ ಪ್ರಮಾಣ 3400 ಮಿಮೀ ಗಡಿ ದಾಟಿದ್ದು, ಅತಿ ಹೆಚ್ಚು ಮಳೆ ಕಂಡ ಜಿಲ್ಲೆಯಾಗಿ ಈ ಸಲ ದಾಖಲೆ ಸೇರಿದೆ.
ಜುಲೈ ತಿಂಗಳ ವಾಡಿಕೆ ಮಳೆ 1448 ಮಿಮೀ ಆಗಿದ್ದರೆ, ಈ ಬಾರಿ 2049 ಮಿಮೀ ಮಳೆಯಾಗಿದೆ. ಇದು ಕಳೆದೊಂದು ದಶಕದಲ್ಲಿ ಬಿದ್ದ ಅತ್ಯಧಿಕ ಮಳೆಯಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಸಹಿತ ಮಲೆನಾಡು ಜಿಲ್ಲೆಗಳಿಗೆ ಹೋಲಿಸಿದರೆ ಕಳೆದೊಂದು ದಶಕದಿಂದ ಉಡುಪಿ ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತಿರುವುದು ಕಂಡುಬಂದಿದೆ. ಉಡುಪಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೇ.24 ಹೆಚ್ಚು ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಜೂನ್, ಜುಲೈ ತಿಂಗಳಲ್ಲಿ 3427 (ವಾಡಿಕೆ- 2766ಮಿಮೀ), ದಕ್ಷಿಣ ಕನ್ನಡ 2819 ಮಿಮೀ (2347), ಕೊಡಗು 1844 (1513 ಮಿಮೀ), ಶಿವಮೊಗ್ಗ 1686 (ವಾಡಿಕೆ 1356), ಉತ್ತರ ಕನ್ನಡ 2676 (1835) ಮಳೆಯಾಗಿದೆ.
ದಕ್ಷಿಣ ಕನ್ನಡದಲ್ಲಿ ಶೇ. 20, ಕೊಡಗಿನಲ್ಲಿ ಶೇ.22, ಶಿವಮೊಗ್ಗದಲ್ಲಿ ಶೇ.24 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.46ಕ್ಕೂ ಹೆಚ್ಚು ಮಳೆ ಬಿದ್ದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಜೂನ್, ಜುಲೈ ನಲ್ಲಿ ರಾಜ್ಯದಲ್ಲೇ ಅತಿ ಕಡಿಮೆ(146 ಮಿಮೀ) ಮಳೆಯಾಗಿರುವ ವರದಿ ಇದೆ. ವಾಡಿಕೆಯ ಮಳೆಗೆ (119 ಮಿಮೀ) ಹೋಲಿಸಿದರೆ, ಹಿಂದಿಗಿಂತ ಈ ಬಾರಿ ಹೆಚ್ಚು ಬಿದ್ದಿದೆ. ರಾಯಚೂರು ಜಿಲ್ಲೆಯಲ್ಲಿ 189 ಮಿಮೀ ಮಳೆಯಾಗಿದ್ದು, ವಾಡಿಕೆಯಲ್ಲಿ ಶೇ.3 ಕೊರತೆಯಾಗಿದೆ. ಯಾದಗಿರಿ 219 ಮಿಮೀ ಮಳೆಯಾಗಿದ್ದು, ಶೇ.10ರಷ್ಟು ಕೊರತೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾದರೂ ನೆರೆ ರಾಜ್ಯಗಳ ಅಣೆಕಟ್ಟಿನಿಂದ ನೀರು ಬಿಟ್ಟ ಕಾರಣ ಬಾಗಲಕೋಟ(218 ಮಿಮೀ), ರಾಯಚೂರು(189), ಬೆಳಗಾವಿ (588ಮಿಮೀ), ಯಾದಗಿರಿಯಲ್ಲಿ (219 ಮಿಮೀ) ನೆರೆ ಸಮಸ್ಯೆಯೂ ತಲೆದೋರಿತ್ತು.
Highest rain fall seen in Udupi with 3427 mm. Very heavy rainfall in some areas on the foothills of the Western Ghats in Udupi district triggered floods throwing life out of gear in the southern parts
20-09-25 10:57 pm
HK News Desk
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm