ಬ್ರೇಕಿಂಗ್ ನ್ಯೂಸ್
08-08-24 07:16 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.8: ಎಡಕುಮೇರಿ- ಕಡಗರವಳ್ಳಿ ನಡುವೆ ಭೂಕುಸಿತದಿಂದ ಮಂಗಳೂರು- ಬೆಂಗಳೂರು ನಡುವೆ ರೈಲು ಸಂಚಾರಕ್ಕೆ ತೊಡಕಾಗಿತ್ತು. ಎರಡು ವಾರಗಳ ಸತತ ಪ್ರಯತ್ನದ ಬಳಿಕ ಭೂಕುಸಿತ ಪ್ರದೇಶದಲ್ಲಿ ರೈಲು ಹಳಿಯನ್ನು ಸರಿಪಡಿಸಲಾಗಿದ್ದು, ಆಗಸ್ಟ್ 8ರಿಂದ ಎಂದಿನಂತೆ ರೈಲುಗಳ ಸಂಚಾರಕ್ಕೆ ತೆರೆದುಕೊಂಡಿದೆ. ಅತ್ತ ಶಿರಾಡಿ ಹೆದ್ದಾರಿ ಓಪನ್ ಆದ ಬೆನ್ನಲ್ಲೇ ರೈಲು ಸಂಚಾರವೂ ಆರಂಭಗೊಂಡಂತಾಗಿದ್ದು, ಬಸ್ಸುಗಳ ಮಿತಿಮೀರಿದ ದರದಿಂದಾಗಿ ದಣಿದಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಸುಬ್ರಹ್ಮಣ್ಯ – ಸಕಲೇಶಪುರದ ರೈಲು ಹಳಿಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಜುಲೈ 26ರ ಬಳಿಕ ಈ ಹಾದಿಯಲ್ಲಿ ರೈಲು ಸಂಚಾರವನ್ನು ನಿಲ್ಲಿಸಲಾಗಿತ್ತು. ದಕ್ಷಿಣ ರೈಲ್ವೇ ಮತ್ತು ಮೈಸೂರು ವಿಭಾಗದ ರೈಲ್ವೇ ಅಧಿಕಾರಿಗಳ ಜಂಟಿ ಪ್ರಯತ್ನ, ದಿನದಲ್ಲಿ 200ಕ್ಕೂ ಹೆಚ್ಚು ಸಿಬಂದಿಗಳ ಕಾರ್ಯಾಚರಣೆಯ ಬಳಿಕ ಗುಡ್ಡ ಕುಸಿತ ಆಗಿರುವಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಅಲ್ಲದೆ, ಹಳಿಯ ಬದಿಗೆ ಹೆಚ್ಚುವರಿಯಾಗಿ ಕಾಂಕ್ರೀಟ್ ಸ್ಲಾಬ್ ಗಳನ್ನು ಜೋಡಿಸಲಾಗಿದೆ. ಆಗಸ್ಟ್ 4ರಂದು ಬಹುತೇಕ ಕೆಲಸ ಮುಗಿದಿದ್ದು, ಗೂಡ್ಸ್ ರೈಲು ಸಾಗುವುದಕ್ಕೆ ರೈಲ್ವೇ ಅಧಿಕಾರಿಗಳು ಹಸಿರು ನಿಶಾನೆ ನೀಡಿದ್ದರು. ಆನಂತರ, ಭಾರದ ಎಂಜಿನಗಳನ್ನು ಆ ದಾರಿಯಲ್ಲಿ ಸಾಗಿಸಲಾಗಿತ್ತು.
ಆಗಸ್ಟ್ 6ರಂದು ಫುಲ್ ಲೋಡ್ ಆಗಿದ್ದ ಗೂಡ್ಸ್ ರೈಲೊಂದನ್ನು ಇದೇ ಹಾದಿಯಲ್ಲಿ ಸಾಗಿಸಲಾಗಿದ್ದು, ಮಳೆಯ ನಡುವೆಯೂ ಯಶಸ್ವಿಯಾಗಿ ಹಳಿಯಲ್ಲಿ ಸಾಗಿ ಹೋಗಿದೆ. ಮುಂಜಾಗ್ರತಾ ಕ್ರಮವಾಗಿ ರೈಲಿನ ವೇಗವನ್ನು ಗಂಟೆಗೆ 15 ಕಿಮೀಗೆ ಇಳಿಸಲಾಗಿತ್ತು. ಆಗಸ್ಟ್ 8ರ ಗುರುವಾರ ಮಧ್ಯಾಹ್ನ ಯಶವಂತಪುರ- ಮಂಗಳೂರು ಜಂಕ್ಷನ್ ರೈಲು ಸಕಲೇಶಪುರ ಹಳಿಯ ಮೂಲಕ ಸಾಗಿದ್ದು, ಪ್ಯಾಸೆಂಜರ್ ರೈಲು ಸಾಗುವುದಕ್ಕೆ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದಿನಿಂದ ಎಲ್ಲ ನಿಗದಿತ ರೈಲುಗಳು ಎಂದಿನಂತೆ ಮಂಗಳೂರು – ಬೆಂಗಳೂರು ಮಧ್ಯೆ ಸಂಚಾರ ಆರಂಭಿಸಲಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇಯ ಚೀಫ್ ಪಬ್ಲಿಕ್ ರಿಲೇಶನ್ ಆಫೀಸರ್ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
The South Western Railway (SWR) on Thursday (August 8, 2024), resumed passenger train services on the Bengaluru-Mangaluru sector by safely passing Train No. 16575 Yeshwantpur-Mangaluru Junction Gomateshwara tri-weekly Express, after restoring the landslip-affected stretch on Sakelshpur-Subrahmanya Road Ghat section.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm