ಬ್ರೇಕಿಂಗ್ ನ್ಯೂಸ್
08-08-24 07:16 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.8: ಎಡಕುಮೇರಿ- ಕಡಗರವಳ್ಳಿ ನಡುವೆ ಭೂಕುಸಿತದಿಂದ ಮಂಗಳೂರು- ಬೆಂಗಳೂರು ನಡುವೆ ರೈಲು ಸಂಚಾರಕ್ಕೆ ತೊಡಕಾಗಿತ್ತು. ಎರಡು ವಾರಗಳ ಸತತ ಪ್ರಯತ್ನದ ಬಳಿಕ ಭೂಕುಸಿತ ಪ್ರದೇಶದಲ್ಲಿ ರೈಲು ಹಳಿಯನ್ನು ಸರಿಪಡಿಸಲಾಗಿದ್ದು, ಆಗಸ್ಟ್ 8ರಿಂದ ಎಂದಿನಂತೆ ರೈಲುಗಳ ಸಂಚಾರಕ್ಕೆ ತೆರೆದುಕೊಂಡಿದೆ. ಅತ್ತ ಶಿರಾಡಿ ಹೆದ್ದಾರಿ ಓಪನ್ ಆದ ಬೆನ್ನಲ್ಲೇ ರೈಲು ಸಂಚಾರವೂ ಆರಂಭಗೊಂಡಂತಾಗಿದ್ದು, ಬಸ್ಸುಗಳ ಮಿತಿಮೀರಿದ ದರದಿಂದಾಗಿ ದಣಿದಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಸುಬ್ರಹ್ಮಣ್ಯ – ಸಕಲೇಶಪುರದ ರೈಲು ಹಳಿಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಜುಲೈ 26ರ ಬಳಿಕ ಈ ಹಾದಿಯಲ್ಲಿ ರೈಲು ಸಂಚಾರವನ್ನು ನಿಲ್ಲಿಸಲಾಗಿತ್ತು. ದಕ್ಷಿಣ ರೈಲ್ವೇ ಮತ್ತು ಮೈಸೂರು ವಿಭಾಗದ ರೈಲ್ವೇ ಅಧಿಕಾರಿಗಳ ಜಂಟಿ ಪ್ರಯತ್ನ, ದಿನದಲ್ಲಿ 200ಕ್ಕೂ ಹೆಚ್ಚು ಸಿಬಂದಿಗಳ ಕಾರ್ಯಾಚರಣೆಯ ಬಳಿಕ ಗುಡ್ಡ ಕುಸಿತ ಆಗಿರುವಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಅಲ್ಲದೆ, ಹಳಿಯ ಬದಿಗೆ ಹೆಚ್ಚುವರಿಯಾಗಿ ಕಾಂಕ್ರೀಟ್ ಸ್ಲಾಬ್ ಗಳನ್ನು ಜೋಡಿಸಲಾಗಿದೆ. ಆಗಸ್ಟ್ 4ರಂದು ಬಹುತೇಕ ಕೆಲಸ ಮುಗಿದಿದ್ದು, ಗೂಡ್ಸ್ ರೈಲು ಸಾಗುವುದಕ್ಕೆ ರೈಲ್ವೇ ಅಧಿಕಾರಿಗಳು ಹಸಿರು ನಿಶಾನೆ ನೀಡಿದ್ದರು. ಆನಂತರ, ಭಾರದ ಎಂಜಿನಗಳನ್ನು ಆ ದಾರಿಯಲ್ಲಿ ಸಾಗಿಸಲಾಗಿತ್ತು.
ಆಗಸ್ಟ್ 6ರಂದು ಫುಲ್ ಲೋಡ್ ಆಗಿದ್ದ ಗೂಡ್ಸ್ ರೈಲೊಂದನ್ನು ಇದೇ ಹಾದಿಯಲ್ಲಿ ಸಾಗಿಸಲಾಗಿದ್ದು, ಮಳೆಯ ನಡುವೆಯೂ ಯಶಸ್ವಿಯಾಗಿ ಹಳಿಯಲ್ಲಿ ಸಾಗಿ ಹೋಗಿದೆ. ಮುಂಜಾಗ್ರತಾ ಕ್ರಮವಾಗಿ ರೈಲಿನ ವೇಗವನ್ನು ಗಂಟೆಗೆ 15 ಕಿಮೀಗೆ ಇಳಿಸಲಾಗಿತ್ತು. ಆಗಸ್ಟ್ 8ರ ಗುರುವಾರ ಮಧ್ಯಾಹ್ನ ಯಶವಂತಪುರ- ಮಂಗಳೂರು ಜಂಕ್ಷನ್ ರೈಲು ಸಕಲೇಶಪುರ ಹಳಿಯ ಮೂಲಕ ಸಾಗಿದ್ದು, ಪ್ಯಾಸೆಂಜರ್ ರೈಲು ಸಾಗುವುದಕ್ಕೆ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದಿನಿಂದ ಎಲ್ಲ ನಿಗದಿತ ರೈಲುಗಳು ಎಂದಿನಂತೆ ಮಂಗಳೂರು – ಬೆಂಗಳೂರು ಮಧ್ಯೆ ಸಂಚಾರ ಆರಂಭಿಸಲಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇಯ ಚೀಫ್ ಪಬ್ಲಿಕ್ ರಿಲೇಶನ್ ಆಫೀಸರ್ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
The South Western Railway (SWR) on Thursday (August 8, 2024), resumed passenger train services on the Bengaluru-Mangaluru sector by safely passing Train No. 16575 Yeshwantpur-Mangaluru Junction Gomateshwara tri-weekly Express, after restoring the landslip-affected stretch on Sakelshpur-Subrahmanya Road Ghat section.
20-09-25 10:57 pm
HK News Desk
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm