ಬ್ರೇಕಿಂಗ್ ನ್ಯೂಸ್
23-08-24 03:24 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.23: ಬಾಂಗ್ಲಾ ಪರ ಹೇಳಿಕೆ ನೀಡಿದ್ದಕ್ಕಾಗಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಬಿಜೆಪಿಗರು ಪಟ್ಟು ಹಿಡಿದಿದ್ದರೆ, ಇತ್ತ ಮಂಗಳೂರಿನ ಕಾಂಗ್ರೆಸಿಗರು ಐವಾನ್ ಡಿಸೋಜ ಪರವಾಗಿ ಧ್ವನಿ ಎತ್ತಿದ್ದಾರೆ. ಇಂದು ಬೆಳಗ್ಗೆ ವೆಲೆನ್ಸಿಯಾದ ಐವಾನ್ ಡಿಸೋಜ ಮನೆಯಿಂದ ಕಂಕನಾಡಿ ವರೆಗೆ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಬಂದು ಪ್ರತಿಭಟನಾ ಸಭೆ ನಡೆಸಿದ್ದಾರೆ. ಇದೇ ವೇಳೆ, ಬಿಜೆಪಿಗರು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಬಿಜೆಪಿ ಕಚೇರಿಯ ಮೆಟ್ಟಿಲಲ್ಲಿ ಕುಳಿತು ನಿಮಗೆ ಕಲ್ಲು ಹೊಡೆಯುವುದಲ್ಲ, ಇಲ್ಲಿಗೆ ಬಂದರೆ ಚಪ್ಪಲಲ್ಲಿ ಹೊಡೀತೇವೆ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು, ಬಿಜೆಪಿ ಶಾಸಕರ ಹೊಡಿ ಬಡಿ ಹೇಳಿಕೆಯನ್ನು ಖಂಡಿಸಿದರಲ್ಲದೆ, ನಿಮ್ಮ ಉಗ್ರವಾದವನ್ನು ಬದಿಗೊತ್ತಿ ಕರಾವಳಿಯಲ್ಲಿ ಶಾಂತಿಯ ಅಂಗಡಿ ತೆರೆಯುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ವಕ್ತಾರ ಎಂಜಿ ಹೆಗ್ಡೆ ಮಾತನಾಡಿ, ನಮ್ಮದು ಗಾಂಧೀಜಿಯ ನಿಲುವು. ಕರಾವಳಿಯಲ್ಲಿ ಗಾಂಧಿವಾದವೇ ಗೆಲ್ಲುವಂತೆ ಮಾಡುತ್ತೇವೆ. ಬಿಜೆಪಿಯ ಗೋಡ್ಸೆ ವಾದವನ್ನು ಹಿಮ್ಮೆಟ್ಟಿಸುತ್ತೇವೆ. ಭರತ್ ಶೆಟ್ಟಿ ರೌಡಿಯಂತೆ ಮಾತನಾಡುತ್ತಾರೆ, ಅವರಿಗೆ ರೌಡಿಯೇ ಆಗಬೇಕೆಂದಿದ್ದರೆ, ಶಾಸಕ ಸ್ಥಾನ ಬಿಟ್ಟು ಒಂದೆರಡು ಕೊಲೆಗಳನ್ನು ಮಾಡಲಿ. ರೌಡಿ ಪಟ್ಟ ತಾನಾಗಿಯೇ ಬರುತ್ತದೆ ಎಂದು ವ್ಯಂಗ್ಯವಾಡಿದರು.
ಐವಾನ್ ಡಿಸೋಜ ಮಾತನಾಡಿ, ತನ್ನ ವಿವಾದಿತ ಮಾತುಗಳನ್ನು ಉಲ್ಲೇಖಿಸುತ್ತಾ ನಾನೇನು ಬಾಂಗ್ಲಾ ರೀತಿ ಮಾಡುತ್ತೇವೆ ಎಂದು ಹೇಳಿಲ್ಲ. ಈ ರೀತಿ ವರ್ತಿಸಿದರೆ, ಅಂತಹ ಸ್ಥಿತಿ ಬರಬಹುದು ಎಂದಿದ್ದಷ್ಟೇ. ಇವರಿಗೆ ಬಾಂಗ್ಲಾ ಮುಸ್ಲಿಂ ರಾಷ್ಟ್ರ ಅಂತ ಸಹಿಸಲು ಆಗಲಿಲ್ಲ. ನನಗೆ ಬಾಂಗ್ಲಾನೂ ಒಂದೇ, ಲಂಕಾ, ಅಮೆರಿಕ, ಇಂಡೋನೇಷ್ಯಾ ಎಲ್ಲ ಒಂದೇ ರೀತಿಯದು. ಗಾಂಧಿಯನ್ನು ಕೊಂದವರನ್ನು ಪೂಜಿಸುವವರು ನೀವು. ಈಗ ಕಲ್ಲು ಹೊಡೆದಿರೋದು ಐವಾನ್ ಮನೆಗಲ್ಲ, ಕಾಂಗ್ರೆಸ್ ಮನೆಗೆ ಕಲ್ಲು ಹೊಡಿದಿದ್ದೀರಿ. ಇದರಿಂದ ಕೊಲೆ, ಗಲಭೆಗಳಾದರೆ ಲಾಭ ಆಗತ್ತೆ ಅಂತ ಅನ್ಕೊಂಡಿದ್ದಾರೆ. ನಾವೆಂದು ಇದಕ್ಕೆ ಬಗ್ಗಲ್ಲ. ನೀವು ಕಲ್ಲು ಹೊಡೆಯುತ್ತೀರಿ ಅಂತ ಯಾವ ಕಾಂಗ್ರೆಸ್ ಕಾರ್ಯಕರ್ತನೂ ಜಗ್ಗೋದೂ ಇಲ್ಲ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜೆ.ಆರ್ ಲೋಬೊ, ಪಿವಿ ಮೋಹನ್, ದೇವಿಪ್ರಸಾದ್ ಶೆಟ್ಟಿ ಮತ್ತಿತರರಿದ್ದರು.
ಇತ್ತ ಕಾಂಗ್ರೆಸಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕೋದನ್ನು ಕೈಬಿಟ್ಟಿದ್ದಾರೆ ಎಂದು ತಿಳಿಯುತ್ತಲೇ ಪಿವಿಎಸ್ ವೃತ್ತದ ಬಳಿಯ ಬಿಜೆಪಿ ಕಚೇರಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಕಾರ್ಯಕರ್ತರು ಸೇರಿದ್ದು ಕಾಂಗ್ರೆಸ್ ಮತ್ತು ಐವಾನ್ ಡಿಸೋಜ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಅಲ್ಲದೆ, ಹಳೆ ಚಪ್ಪಲಿ ರಾಶಿ ಹಾಕಿ ಮೆಟ್ಟಿಲಲ್ಲಿ ಕುಳಿತಿದ್ದಾರೆ. ಐವಾನ್ ಡಿಸೋಜ ಮತ್ತು ಅವರ ಬೆಂಬಲಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಬೇಕಿದ್ದರೆ ಇನ್ನೊಂದು ಜನ್ಮ ಎತ್ತಿ ಬರಬೇಕು ಎಂದು ಸವಾಲು ಹಾಕಿದ ಕಾಮತ್, ಧೈರ್ಯ ಇದ್ದರೆ ಇಲ್ಲಿಗೆ ಬರಲಿ. ನಾವು ಕಲ್ಲು ಎಸೆಯುವುದಿಲ್ಲ. ಕಲ್ಲನ್ನು ಆರಾಧಿಸುವವರು. ನೀವು ಮುತ್ತಿಗೆ ಹಾಕಲು ಬಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಐವಾನ್ ಡಿಸೋಜ ಮನೆಯಿಂದ ಬಿಜೆಪಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ, ಮುತ್ತಿಗೆ ಹಾಕುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗ್ಡೆ ಹೇಳಿದ್ದರು. ಆದರೆ, ಇದರಿಂದ ಗಲಾಟೆಗೆ ಕಾರಣವಾಗುತ್ತದೆ ಎಂದು ಹೇಳಿ ಮುತ್ತಿಗೆಯಿಂದ ಕಾಂಗ್ರೆಸ್ ಹಿಂದೆ ಸರಿದಿತ್ತು.
Mangalore Congress protests stone pelting on MLC Ivan DSouza, BJP members gather at office. Congress supporters organized a procession from the residence of MLC Ivan D’Souza in Valencia to Kankanady, condemning the stone pelting incident on his house by unidentified miscreants.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm