ಬ್ರೇಕಿಂಗ್ ನ್ಯೂಸ್
24-08-24 05:10 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.24: ಗುರುಪುರ ಗ್ರಾಮದ ಅಡ್ಡೂರನ್ನು ಮಿನಿ ಪಾಕಿಸ್ತಾನ ಎಂದು ಹೇಳಿದ ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ಕೆಪಿಸಿಸಿ ವಕ್ತಾರ ಎಂ.ಜಿ. ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದು ಮಂಗಳೂರು ನಗರದ ಒಳಗೆ ಒಂದು ಮಿನಿ ಪಾಕಿಸ್ತಾನ ಇದೆಯಂತಾದ್ರೆ ಕಾರಣ ಯಾರು.? ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆ ವೈಫಲ್ಯ ಎಂದಾಯ್ತಲ್ಲ? ದೇಶದ ಒಳಗೆ ಮಿನಿ ಪಾಕಿಸ್ತಾನ ಆಗಿದೆ ಎಂದ್ರೆ ದೇಶದ ಸೈನ್ಯ, ಸರ್ಕಾರಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ದೇಶದ ಪ್ರಧಾನಿ, ರಕ್ಷಣಾ ಮಂತ್ರಿ, ಭಾರತೀಯರಿಗೆ ಭರತ್ ಶೆಟ್ಟಿ ಅವಮಾನ ಮಾಡಿದ್ದಾರೆ. ಇವ್ರು ನೀಡಿದ್ದು ಬಾಳಿಶ ಹೇಳಿಕೆಯಾಗಿದ್ರೆ ಭರತ್ ಶೆಟ್ಟಿ ಭಾರತೀಯರ ಮುಂದೆ ಕ್ಷಮೆ ಯಾಚಿಸಲಿ. ಮರಳುಗಾರಿಕೆ, ಗಣಿಗಾರಿಕೆ ಬಗ್ಗೆ ನಿಮ್ಮ ಸರ್ಕಾರದ ಅವಧಿಯಲ್ಲಿ 50 ಕೋಟಿ ರೂಪಾಯಿ ಹಸಿರು ಪೀಠ ದಂಡ ಹಾಕಿದೆ, ಅದು ಯಾರಿಗೆ ಹಾಕಿದ್ದು ಶಾಸಕರೇ.? ಅದ್ರ ಗುತ್ತಿಗೆದಾರ ಯಾರು.? ಕಟೀಲಿನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ದೂರು ನೀಡಲಾಗಿದೆ, ಅದು ಯಾರದ್ದು ಶಾಸಕರೇ...? ಗುರುಪುರ ಸೇತುವೆ ಎರಡು ಭಾಗದಲ್ಲಿ ಅಕ್ರಮ ಮರಳು ಶೇಖರಣೆ ಇದೆ, ಅದು ಯಾರದ್ದು...? ಎಂದು ಪ್ರಶ್ನೆ ಮಾಡಿದರು.
ಇದರ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡ್ತಾ ಇದೆ. ಶಾಸಕರೇ ಹೀಗೆ ಮಾತನಾಡ್ತಾ ಹೋದ್ರೆ ಕತ್ತಿ ಕಾಳಗಕ್ಕೆ ಹೋಗ್ತದೆ. ಆಗಾ ಯಾರು ಹೋಗ್ತಾರೆ, ನಾನು ಹೋಗಲ್ಲ ಇಲ್ಲಿ ಕೂತೋರು ಹೋಗಲ್ಲ, ನೀವು ಹೋಗಲ್ಲ...! ಯಾರೋ ಅಮಾಯಕ ಯುವಕರು ಕತ್ತಿಕಾಳಗಕ್ಕೆ ಹೋಗ್ತಾರೆ. ಯಾರದ್ದೋ ಜೀವ ಹೋಗುತ್ತೆ, ನೀವು ಬೇಳೆ ಬೇಯಿಸಿಕೊಳ್ತೀರಿ ಎಂದು ಹೇಳಿದರು. ಅಡ್ಡೂರು ಮಿನಿ ಪಾಕಿಸ್ತಾನ ಆಗಿದೆ ಅಂತೀರಾದ್ರೆ, ಈ ಬಗ್ಗೆ ಸರ್ಕಾರ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆಯೇ.? ಅಡ್ಡೂರಿನಲ್ಲಿ ನಾಲ್ಕು ಬೂತ್ ಇದೆ, ಅಲ್ಲಿ ಭರತ್ ಶೆಟ್ಟಿ ಅವರೇ ಒಂದು ಸಾವಿರ ಮತ ಪಡೆದಿದ್ದೀರಿ. ಹಾಗಿದ್ರೆ ನೀವು ಪಡೆದಿದ್ದು ಪಾಕಿಸ್ತಾನದ ಮತನಾ...? ಎಂದು ಕೇಳಿದರು.
ಮಂಗಳೂರು ನಗರ, ಮಂಗಳೂರು ಉತ್ತರ ಎರಡು ಶಾಸಕರು ಮಾತ್ರ ಒಟ್ಟಾರೆ ಮಾತನಾಡ್ತಾ ಇದ್ದಾರೆ...? ಅವರು ಹೀಗೆ ಮಾತನಾಡಿ ತಮ್ಮ ಅಸ್ತಿತ್ವ ತೋರಿಸ್ತ ಇದ್ದಾರೆ. ಇಲ್ಲಿ ಎಂಪಿ ಜೊತೆ ಹೊಸ ಕ್ಯಾಂಡಿಟೇಟ್ ತಿರುಗಾಟ ಆರಂಭಿಸಿದ್ದಾರೆ. ಮಂಗಳೂರು ಉತ್ತರದಲ್ಲಿ ಶೆಟ್ಟಿ ಮಹಿಳೆಯೊಬ್ಬರು ಇದ್ದಾರೆ. ಅದಕ್ಕೆ ನಾವೂ ಇದ್ದೇವೆ ಎಂಬುದನ್ನು ತೋರಿಸಲು ಮುಸ್ಲಿಮರ ಮೇಲೆ ಬೀಳ್ತಿದಾರೆ. ಕರ್ನಾಟಕ ಸರ್ಕಾರದ ಗೃಹ ಇಲಾಖೆ ಶಾಸಕರನ್ನು ವಿಚಾರಣೆ ಮಾಡಬೇಕು. ಮಿನಿ ಪಾಕಿಸ್ತಾನ ಹೇಗೆ ಆಗಿದೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಿ. ಬಿಜೆಪಿಗೆ ಬ್ಯಾರಿಗಳು ಜೈ ಹಾಕಿದ್ರೆ ಭಾರತೀಯ, ದೇಶಭಕ್ತರು. ಕಾಂಗ್ರೆಸ್ಗೆ ಜೈ ಹೇಳಿದ್ರೆ ಆಯೆ ಬ್ಯಾರಿಯಾ.. ಎಂದು ಹೇಳುತ್ತಾರೆ. ಅಯ್ಯೋಧ್ಯೆ ಜನ ಮತ ನೀಡಿಲ್ಲ ಎಂದು ಅಯೋಧ್ಯೆಯನ್ನೇ ದೂರಿದ್ದರು ಬಿಜೆಪಿ ಮಂದಿ. ಇವರ ಮನಸ್ಸು ಮತ್ತು ದೇಹಕ್ಕೆ ಕಂಟ್ರೋಲ್ ತಪ್ಪಿದೆ ಎಂದರು.
ಬಿಜೆಪಿಯವರು ಯಾರಾದ್ರೂ ಕಾಮತ್ ಮತ್ತು ಭರತ್ ಅವರಿಗೆ ಸಲಹೆ ಕೊಡಲಿ. ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಲು ಸಲಹೆ ಕೊಡಿ ಎಂದು ಕಾಂಗ್ರೆಸ್ ವಕ್ತಾರ ಎಂಜಿ ಹೆಗ್ಡೆ ಸಲಹೆ ನೀಡಿದ್ದಾರೆ. ಗುರುಪುರ ಬ್ಲಾಕ್ ಕಾಂಗ್ರೆಸಿನ ರವೀಂದ್ರ ಕಂಬಳಿ ಮತ್ತಿತರರು ಇದ್ದರು.
Mg Hedge slams MLA Bharath shetty over remarks on Addur in Mangalore.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm