ಬ್ರೇಕಿಂಗ್ ನ್ಯೂಸ್
31-08-24 05:19 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.31: ಪ್ರೀತಿ ಮಾಯೆ ಅಂತಾರೆ, ಪ್ರೀತಿಗೆ ಬಿದ್ದೋರು ಜಗತ್ತನ್ನೇ ಮರೆಯುತ್ತಾರೆ ಎನ್ನೋದನ್ನು ಕೇಳಿದ್ದೇವೆ. ಇಲ್ಲೊಬ್ಬಳು ಹುಡುಗಿ ಪ್ರೀತಿಯ ಬಲೆಗೆ ಬಿದ್ದು ಕೊನೆಗೆ ವಿದೇಶದಲ್ಲಿ ಉದ್ಯೋಗ ಸಿಕ್ಕಿದೆ ಎಂಬ ನೆಪ ಹೇಳಿ ಹೆತ್ತವರು, ಗೆಳತಿಯರನ್ನೆಲ್ಲ ಯಮಾರಿಸಿ ಅನ್ಯಕೋಮಿನ ಪ್ರಿಯಕರನ ಜೊತೆಗೆ ಪರಾರಿಯಾಗಲು ಯತ್ನಿಸಿದ್ದು ಪೊಲೀಸರ ಸಕಾಲಿಕ ಪ್ರಯತ್ನದಿಂದ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ.
ಲವರ್ ಜೊತೆ ಎಸ್ಕೇಪ್ ಆಗುವುದಕ್ಕಾಗಿ ತನ್ನನ್ನು ನಂಬಿದ್ದ ಹೆತ್ತವರನ್ನೇ ಯುವತಿ ಮೋಸ ಮಾಡಿರುವುದು ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವತಿ, ಸವಣೂರಿನ ಕಾಲೇಜಿನಲ್ಲಿ ಇದೇ ವರ್ಷ ಪಿಯುಸಿ ತೇರ್ಗಡೆಯಾಗಿದ್ದಳು. ಬಡತನದಲ್ಲಿಯೇ ಬೆಳೆದಿದ್ದ ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕಿರುವ ಸುದ್ದಿಕೇಳಿ ಹೆತ್ತವರು ಸಂಭ್ರಮಿಸಿದ್ದರು. ಬೆಂಗಳೂರಿನಲ್ಲಿ ಇಬ್ಬರು ಗೆಳತಿಯರಿದ್ದಾರೆಂದು ಮನೆಯವರಿಗೆ ಹೇಳಿ, ಅವರ ಜೊತೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಳು. ಏರ್ಪೋರ್ಟ್ ವರೆಗೆ ಗೆಳತಿಯರು ಜೊತೆಗೆ ತೆರಳಿದ್ದು ಅಲ್ಲಿ ಆಕೆಗೆ ಟಾಟಾ ಮಾಡಿ ಹಿಂತಿರುಗಿದ್ದರು ಎನ್ನಲಾಗಿದೆ.
ವಿದೇಶಕ್ಕೆ ತೆರಳುವ ನೆಪವೊಡ್ಡಿದ 18ರ ಯುವತಿ ಮನೆಯಲ್ಲಿ ಪೋಷಕರನ್ನು ನಂಬಿಸಿ ಆಗಸ್ಟ್ 25 ರಂದು ಮನೆ ಬಿಟ್ಟಿದ್ದಳು. ದೀಕ್ಷಾ ತಂದೆ, ತಾಯಿ ಅವಿದ್ಯಾವಂತರಾಗಿದ್ದು ಮಗಳು ಹೇಳಿದ್ದ ಕತೆಯನ್ನು ನಿಜವೆಂದೇ ನಂಬಿದ್ದರು. ಆದರೆ ಆಕೆಯನ್ನು ಕೆಲವರು ಬೆಂಗಳೂರು - ಧರ್ಮಸ್ಥಳ ಬಸ್ಸಿನಲ್ಲಿ ನೋಡಿದ್ದಾಗಿ ಹೇಳಿದ್ದರಿಂದ ಮನೆಯವರು ಅನುಮಾನಗೊಂಡಿದ್ದರು. ಅಲ್ಲದೆ, ಆಕೆಯ ಫೋನ್ ಕೂಡ ರಿಂಗ್ ಆಗುತ್ತಿದ್ದುದರಿಂದ ಸಂಶಯ ಬಲವಾಗಿತ್ತು. ಅನುಮಾನದಲ್ಲೇ ಸುಬ್ರಹ್ಮಣ್ಯ ಪೋಲಿಸರನ್ನು ಸಂಪರ್ಕಿಸಿದ್ದ ಹೆತ್ತವರು, ನಾಪತ್ತೆ ವಿಷಯ ತಿಳಿಸಿದ್ದರು. ಯುವತಿ ಮೊಬೈಲ್ ಲೊಕೇಷನ್ ನೋಡಿದಾಗ, ಬೆಂಗಳೂರಿನ ಹೊರವಲಯದಲ್ಲಿ ಇರುವ ಬಗ್ಗೆ ತಿಳಿದುಬಂದಿತ್ತು.
ಸುಬ್ರಹ್ಮಣ್ಯ ಪೊಲೀಸರ ಸಲಹೆಯಂತೆ ಬೆಂಗಳೂರಿಗೆ ತೆರಳಿದ ಯುವತಿ ಪೋಷಕರು ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ 28ರಂದು ದೂರು ನೀಡಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೋಲಿಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಸವಣೂರು ಮೂಲದ ಮುಸ್ಲಿಂ ಯುವಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸಕ್ಕಿದ್ದು ಆತನ ಜೊತೆಗೆ ಯುವತಿ ಪರಾರಿಯಾಗಲು ವಿದೇಶಿ ಉದ್ಯೋಗದ ಕತೆ ಕಟ್ಟಿದ್ದಳು ಎನ್ನುವ ಅಂಶ ಬಯಲಾಗಿದೆ. ಸದ್ಯಕ್ಕೆ ಯುವತಿಯನ್ನು ಸುಬ್ರಹ್ಮಣ್ಯ ಠಾಣೆಗೆ ಕರೆತಂದು ಮಾತುಕತೆ ನಡೆಸಲಾಗಿದೆ.
Mangalore Sullia Hindu Girl flees with muslim youth, both caught by police in Bangalore. Girl had stated that she has got a job abroad and flee with her muslim boy friend to Bangalore.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm