ಬ್ರೇಕಿಂಗ್ ನ್ಯೂಸ್

Satish Kumpala, Mangalore: ಉಸ್ತುವಾರಿ ಸಚಿವರು ಎಲ್ಲಿ ನಿದ್ದೆ ಮಾಡುತ್ತಿದ್ದಾರೆ, ಕಿಡಿಗೇಡಿ ಸವಾಲು ಹಾಕಿದ್ದನ್ನು ಪ್ರಶ್ನಿಸಿದರೆ ಎಫ್ಐಆರ್ ದಾಖಲಿಸುತ್ತಾರೆ, ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ರೆ ಕೇಸು ಮಾಡಲ್ಲ, ಶರಣ್ ಪಂಪ್ವೆಲ್ ಮಾತಾಡಿದ್ದರಲ್ಲಿ ತಪ್ಪೇನಿದೆ ? ಸತೀಶ್ ಕುಂಪಲ ಪ್ರಶ್ನೆ    |    Brijesh Chowta, Msez, JBF: ಎಂಎಸ್ಇಝೆಡ್‌ ಗೆ ಭೂಮಿ ಕೊಟ್ಟಿದ್ದ ಜೆಬಿಎಫ್ ಕಂಪೆನಿ ಕುಟುಂಬಸ್ಥರಿಗೆ ಕೊನೆಗೂ ಜಿಎಂಪಿಎಲ್‌ ನಲ್ಲಿ ಉದ್ಯೋಗ ; ಸಂಸದ ಕ್ಯಾ.ಚೌಟ ಮನವಿಗೆ ತುರ್ತು ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ    |    Udupi, Sunil Kumar, Kota srinivas, CM: ರಾಜ್ಯ ಸರ್ಕಾರದಿಂದ ಕರಾವಳಿ ಜಿಲ್ಲೆಗಳ ನಿರ್ಲಕ್ಷ್ಯ ; ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುತ್ತೇವೆ, ಎರಡು ಜಿಲ್ಲೆಗಳಲ್ಲಿ ಜನಾಂದೋಲನಕ್ಕೆ ನಿರ್ಧಾರ    |   

House Collapsed, Bejai Mangalore: ಹಳೆ ಮನೆ ಕೆಡವುತ್ತಿದ್ದಾಗ ಮನೆ ಮಾಲೀಕನೇ ಸಾವು, ಕರಂಗಲ್ಪಾಡಿಯಲ್ಲಿ ಘಟನೆ, ಕಾಂಕ್ರೀಟ್ ಬೀಮ್ ಬಿದ್ದು ಇಬ್ಬರ ಜೀವ ಆಹುತಿ 

12-09-24 04:57 pm       Mangaluru Correspondent   ಕರಾವಳಿ

ಹಳೆ ಮನೆಯನ್ನು ಒಡೆಯುತ್ತಿದ್ದಾಗ ಕಾಂಕ್ರೀಟ್ ಬೀಮ್ ಕುಸಿದು ಬಿದ್ದು ಮನೆ ಮಾಲೀಕ ಸೇರಿ ಇಬ್ಬರು ಸಾವನ್ನಪ್ಪಿದ ಘಟನೆ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಕರಂಗಲ್ಪಾಡಿಯಲ್ಲಿ ನಡೆದಿದೆ. 

ಮಂಗಳೂರು, ಸೆ.12: ಹಳೆ ಮನೆಯನ್ನು ಒಡೆಯುತ್ತಿದ್ದಾಗ ಕಾಂಕ್ರೀಟ್ ಬೀಮ್ ಕುಸಿದು ಬಿದ್ದು ಮನೆ ಮಾಲೀಕ ಸೇರಿ ಇಬ್ಬರು ಸಾವನ್ನಪ್ಪಿದ ಘಟನೆ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಕರಂಗಲ್ಪಾಡಿಯಲ್ಲಿ ನಡೆದಿದೆ. 

ಮನೆ ಮಾಲೀಕ ಎಡ್ವಿನ್ ಹೆರಾಲ್ಡ್ ಮಾಬೇನ್ (54) ಮತ್ತು ಪಕ್ಕದ ಮನೆಯ ಜೇಮ್ಸ್ ಜತ್ತಣ್ಣ (56)  ಮೃತಪಟ್ಟವರು. ಕರಂಗಲ್ಪಾಡಿಯ ಸಿ.ಜೆ ಕಾಮತ್ ರಸ್ತೆಯ ಮಿಷನ್ ಕಂಪೌಂಡ್ ನಲ್ಲಿ ಹಳೆ ಮನೆಯೊಂದನ್ನು ಜೆಸಿಬಿಯಲ್ಲಿ ಕೆಡವುತ್ತಿದ್ದಾಗ ಘಟನೆ ನಡೆದಿದೆ.‌

ಜೆಸಿಬಿಯಿಂದ ಮನೆ ಕೆಡವುತ್ತಿದ್ದಾಗ ಅಲ್ಲಿಯೇ ಇವರು ಕೆಳಗೆ ನಿಂತು ನೋಡುತ್ತಿದ್ದರು. ಈ ವೇಳೆ, ಕಾಂಕ್ರೀಟ್ ಬೀಮ್ ಕುಸಿದು ಇವರ ಮೈಮೇಲೆ ಬಿದ್ದಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Old House collapsed in Bejai karangalpady, two killed dead on the spot in Mangalore. The deceased have been identified as James Jathanna and Edwin Jerald Maben. As they were renovating the house, the wall collapsed, which has resulted in the deaths of two persons.