ಬ್ರೇಕಿಂಗ್ ನ್ಯೂಸ್

Satish Kumpala, Mangalore: ಉಸ್ತುವಾರಿ ಸಚಿವರು ಎಲ್ಲಿ ನಿದ್ದೆ ಮಾಡುತ್ತಿದ್ದಾರೆ, ಕಿಡಿಗೇಡಿ ಸವಾಲು ಹಾಕಿದ್ದನ್ನು ಪ್ರಶ್ನಿಸಿದರೆ ಎಫ್ಐಆರ್ ದಾಖಲಿಸುತ್ತಾರೆ, ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ರೆ ಕೇಸು ಮಾಡಲ್ಲ, ಶರಣ್ ಪಂಪ್ವೆಲ್ ಮಾತಾಡಿದ್ದರಲ್ಲಿ ತಪ್ಪೇನಿದೆ ? ಸತೀಶ್ ಕುಂಪಲ ಪ್ರಶ್ನೆ    |    Brijesh Chowta, Msez, JBF: ಎಂಎಸ್ಇಝೆಡ್‌ ಗೆ ಭೂಮಿ ಕೊಟ್ಟಿದ್ದ ಜೆಬಿಎಫ್ ಕಂಪೆನಿ ಕುಟುಂಬಸ್ಥರಿಗೆ ಕೊನೆಗೂ ಜಿಎಂಪಿಎಲ್‌ ನಲ್ಲಿ ಉದ್ಯೋಗ ; ಸಂಸದ ಕ್ಯಾ.ಚೌಟ ಮನವಿಗೆ ತುರ್ತು ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ    |    Udupi, Sunil Kumar, Kota srinivas, CM: ರಾಜ್ಯ ಸರ್ಕಾರದಿಂದ ಕರಾವಳಿ ಜಿಲ್ಲೆಗಳ ನಿರ್ಲಕ್ಷ್ಯ ; ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುತ್ತೇವೆ, ಎರಡು ಜಿಲ್ಲೆಗಳಲ್ಲಿ ಜನಾಂದೋಲನಕ್ಕೆ ನಿರ್ಧಾರ    |   

Mangalore artist Zuber Khan kudla, MF Husain award: ಮಂಗಳೂರಿನ ಕಲಾವಿದ ಝುಬೇರ್ ಖಾನ್ ಗೆ ಪಶ್ಚಿಮ ಬಂಗಾಳದ ಎಂ.ಎಫ್ ಹುಸೈನ್ ಅವಾರ್ಡ್ 

12-09-24 08:12 pm       Mangalore Correspondent   ಕರಾವಳಿ

ಕೇಂದ್ರ ಸರಕಾರ ಪ್ರಾಯೋಜಿತ ಪಶ್ಚಿಮ ಬಂಗಾಳದ ಬೀರೇಂದ್ರ ಮೆಮೋರಿಯಲ್ ಫೈನ್ ಆಟ್ಸ್ ಎಂಡ್ ಕಲ್ಚರಲ್ ಸಂಸ್ಥೆಯವರ ಇಂಟರ್‌ನ್ಯಾಶನಲ್ ಲೆಜೆಂಡ್ ಆರ್ಟಿಸ್ಟ್ ಅವಾರ್ಡ್ ಶೋ 2024 ಇದರಲ್ಲಿ ಮಂಗಳೂರಿನ ಕಲಾವಿದ ಝುಬೇರ್ ಖಾನ್ ಕುಡ್ಲರಿಗೆ ಎಮ್.ಎಫ್ ಹುಸೈನ್ ಪ್ರಶಸ್ತಿ ಲಭಿಸಿದೆ. 

ಮಂಗಳೂರು, ಸೆ.12: ಕೇಂದ್ರ ಸರಕಾರ ಪ್ರಾಯೋಜಿತ ಪಶ್ಚಿಮ ಬಂಗಾಳದ ಬೀರೇಂದ್ರ ಮೆಮೋರಿಯಲ್ ಫೈನ್ ಆಟ್ಸ್ ಎಂಡ್ ಕಲ್ಚರಲ್ ಸಂಸ್ಥೆಯವರ ಇಂಟರ್‌ನ್ಯಾಶನಲ್ ಲೆಜೆಂಡ್ ಆರ್ಟಿಸ್ಟ್ ಅವಾರ್ಡ್ ಶೋ 2024 ಇದರಲ್ಲಿ ಮಂಗಳೂರಿನ ಕಲಾವಿದ ಝುಬೇರ್ ಖಾನ್ ಕುಡ್ಲರಿಗೆ ಎಮ್.ಎಫ್ ಹುಸೈನ್ ಪ್ರಶಸ್ತಿ ಲಭಿಸಿದೆ. 

ಜುಬೇರ್ ಕುಡ್ಲ ಅವರ ಬುದ್ಧ ಕಲಾಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಮಾಜಿ ರಾಷ್ಟ್ರಪತಿ ಡಾ॥ ಎ.ಪಿ.ಜೆ ಅಬ್ದುಲ್ ಕಲಾಂ ಇವರಿಂದ ಮೆಚ್ಚುಗೆ ಪತ್ರ ಪಡೆದಿರುವ ಇವರು ಹಲವಾರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿರುತ್ತಾರೆ. ಝುಬೇರ್ ಇವರಿಗೆ ಗ್ಲೋಬಲ್ ಪೀಸ್ ಯುನಿರ್ವಸಿಟಿ ಕಲಾಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. 

ಮಂಗಳೂರು ಮಹಾನಗರ ಪಾಲಿಕೆ ನಿವೃತ್ತ ಉದ್ಯೋಗಿ ಆದಂ ಖಾನ್-  ಫಾತಿಮಾ ದಂಪತಿಯ ಪುತ್ರರಾಗಿರುವ ಇವರು ಮಂಗಳೂರಿನ ಪ್ರೆಸಿಡೆನ್ಸಿ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Mangalore artist Zuber Khan kudla gets MF Husain award. Zuber is working as arts teacher in presidency school.