Mangalore suicide, Doctor: ಎಂಬಿಬಿಎಸ್ ಮುಗಿಸಿದ್ದ ವೈದ್ಯರೊಬ್ಬರು ಕೋಟೇಶ್ವರ ದೇವಸ್ಥಾನದ ಕೆರೆಗೆ ಬಿದ್ದು ಸಾವು 

20-09-24 02:27 pm       Mangalore Correspondent   ಕರಾವಳಿ

ಎಂಬಿಬಿಎಸ್ ಮುಗಿಸಿ ಉನ್ನತ ವಿದ್ಯಾಭ್ಯಾಸದ ತಯಾರಿ ನಡೆಸುತ್ತಿದ್ದ ವೈದ್ಯರೊಬ್ಬರು ಕೋಟೇಶ್ವರದ ದೇವಸ್ಥಾನದ ಕೆರೆಗೆ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ. 

ಕುಂದಾಪುರ, ಸೆ.20: ಎಂಬಿಬಿಎಸ್ ಮುಗಿಸಿ ಉನ್ನತ ವಿದ್ಯಾಭ್ಯಾಸದ ತಯಾರಿ ನಡೆಸುತ್ತಿದ್ದ ವೈದ್ಯರೊಬ್ಬರು ಕೋಟೇಶ್ವರದ ದೇವಸ್ಥಾನದ ಕೆರೆಗೆ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ. 

ಹಂಗಳೂರಿನ ಗೌರೀಶ್ ಬಿ.ಆರ್.(25) ಮೃತ ವಿದ್ಯಾರ್ಥಿ.  ಎಂಬಿಬಿಎಸ್ ಮುಗಿಸಿ ಉನ್ನತ ವಿದ್ಯಾಭ್ಯಾಸದ ಸಿದ್ಧತೆ ನಡೆಸುತ್ತಿದ್ದರು. ಬುಧವಾರ ಸಂಜೆ ಈಜುಕೊಳದಲ್ಲಿ ಈಜಲು ಹೋಗುವುದಾಗಿ ಮನೆಯಿಂದ ತೆರಳಿದ್ದು ಬಳಿಕ ನಾಪತ್ತೆಯಾಗಿದ್ದರು. ಹೀಗಾಗಿ ಮನೆಯವರು ಹುಡುಕಾಟ ನಡೆಸಿದ್ದರು. 

ಕೋಟೇಶ್ವರ ದೇವಸ್ಥಾನದ ಕೆರೆ ಸಮೀಪ ಅವರ ಬ್ಯಾಗ್, ಮೊಬೈಲ್ ಫೋನ್, ಚಪ್ಪಲಿ ಕಂಡು ಬಂದಿತ್ತು. ಬುಧವಾರ ಸಂಜೆ 5:30ರಿಂದ ರಾತ್ರಿ 11 ಗಂಟೆಯ ನಡುವೆ ಕೆರೆಗೆ ಕಾಲು ಜಾರಿ ಬಿದ್ದಿರಬಹುದು, ಅಥವಾ ಈಜಲು ಇಳಿದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಗುರುವಾರ ಬೆಳಗ್ಗೆ ಕೆರೆಯಲ್ಲಿ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮೃತ ಯುವಕನ ಸಹೋದರ ವಿಘ್ನೇಶ್ ಬಿ.ಆರ್. ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mangalore Mbbs doctor jumps into temple Lake in koteshwara and commits suicide. The deceased has been identified as Gowrish.