Mangalore Dasara, Kudroli: ಕುದ್ರೋಳಿ ಕ್ಷೇತ್ರದಲ್ಲಿ ಅ.6ರಂದು ಮುದ್ದು ಶಾರದೆ, ನವದುರ್ಗೆಯರ ವೇಷ ಸ್ಪರ್ಧೆ

27-09-24 03:51 pm       Mangalore Correspondent   ಕರಾವಳಿ

ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ಶರಧಿ ಪ್ರತಿಷ್ಠಾನ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದಲ್ಲಿ ಅಕ್ಟೋಬರ್ 6ರಂದು ಬೆಳಗ್ಗೆ 10ರಿಂದ ಸಾಯಂಕಾಲ 7ರ ವರೆಗೆ ಮುದ್ದುಕೃಷ್ಣ ಮತ್ತು ನವದುರ್ಗೆಯರ ವೇಷ ಸ್ಪರ್ಧೆ ಆಯೋಜಿಸಲಾಗಿದೆ. 

ಮಂಗಳೂರು, ಸೆ.27 : ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ಶರಧಿ ಪ್ರತಿಷ್ಠಾನ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದಲ್ಲಿ ಅಕ್ಟೋಬರ್ 6ರಂದು ಬೆಳಗ್ಗೆ 10ರಿಂದ ಸಾಯಂಕಾಲ 7ರ ವರೆಗೆ ಮುದ್ದುಕೃಷ್ಣ ಮತ್ತು ನವದುರ್ಗೆಯರ ವೇಷ ಸ್ಪರ್ಧೆ ಆಯೋಜಿಸಲಾಗಿದೆ. 

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹೆಸರು ನೋಂದಾಯಿಸಲು ಬಿಜೈನಲ್ಲಿರುವ ಪುನೀಕ್ ಸ್ಟುಡಿಯೋವನ್ನು (8073214624, 7090777241) ಸಂಪರ್ಕಿಸಬಹುದು. ಹೆಸರು ನೋಂದಾವಣೆಗೆ ಅಕ್ಟೋಬರ್ 1 ಕೊನೆ ದಿನವಾಗಿದೆ. 

ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ. 1ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಮುದ್ದು ಶಾರದೆ ಮತ್ತು ನವದುರ್ಗೆಯರ ವೇಷ ಸ್ಪರ್ಧೆ ನಡೆಯಲಿದೆ. ಮಗುವಿಗೆ ಮುದ್ದು ಶಾರದೆ ಅಥವಾ ನವದುರ್ಗೆಯರ ಯಾವುದಾದರೂ ಒಂದು ವೇಷ ಧರಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಎರಡು ನಿಮಿಷ ಕಾಲಾವಕಾಶದಲ್ಲಿ ಸ್ತಬ್ಧಚಿತ್ರ, ನೃತ್ಯ, ಅಭಿನಯ, ಶ್ಲೋಕ, ಅಥವಾ ಹಾಡುಗಳನ್ನು ಸ್ಪರ್ಧಿಗಳು ಆಯ್ಕೆ ಮಾಡಿಕೊಳ್ಳಬಹುದು. ಪ್ರದರ್ಶನಕ್ಕೆ ಬೇಕಾದ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು.

October 6th Kudroli temple to hold mudu sharada in Mangalore from morning 10 to evening 7.