ಬ್ರೇಕಿಂಗ್ ನ್ಯೂಸ್
27-09-24 09:41 pm Mangalore Correspondent ಕರಾವಳಿ
ಮಂಗಳೂರು, ಸೆ.27: ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯ ವಿರುದ್ಧ ಮತ್ತೆ ಕೆಥೋಲಿಕ್ ಸಭಾ ನೇತೃತ್ವದಲ್ಲಿ ಜನರು ಘರ್ಜನೆ ಮೊಳಗಿಸಿದ್ದಾರೆ. ಬಲ್ಮಠದ ಸಿಎಸ್ಐ ಚರ್ಚ್ ಕಡೆಯಿಂದ ಮಿನಿ ವಿಧಾನಸೌಧ ವರೆಗೆ ಸಾವಿರಾರು ಜನರು ಪ್ಲೇಕಾರ್ಡ್ ಹಿಡಿದು ಮೆರವಣಿಗೆ ನಡೆಸಿದ್ದು, ಬಳಿಕ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಂಗಳೂರಿನಲ್ಲಿ ಮರಳು ದಂಧೆಯಲ್ಲಿ ತೊಡಗಿಕೊಂಡವರಿಗೆ ಧರ್ಮ ಭೇದ ಇಲ್ಲ. ಸರ್ವಧರ್ಮದ, ಸರ್ವಪಕ್ಷಗಳವರು ಇದ್ದಾರೆ. ಹೀಗಾಗಿ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರಿಗೆ ಅಕ್ರಮ ನಿಲ್ಲಿಸುವ ಧಮ್ ಇಲ್ಲದಾಗಿದೆ. ರಾತ್ರಿ ಅಕ್ರಮ ಮರಳುಗಾರಿಕೆ ನಡೆಸುವವರೇ ಮರುದಿನ ಶಾಸಕ, ಸಂಸದರ ಜೊತೆಗೆ ಬಿಳಿ ಕೋಟಿನಲ್ಲಿ ಮಿಂಚುತ್ತಾರೆ. ಪೊಲೀಸರೇ ಮಾಮೂಲಿ ಪಡೆದು ಮರಳು ದಂಧೆಕೋರರಿಗೆ ಬೆಂಬಲಕ್ಕೆ ನಿಂತಿದ್ದಾರೆ.












ಮರಳುಗಾರಿಕೆ ಬಗ್ಗೆ ದೂರು ಹೇಳಿದ ವ್ಯಕ್ತಿಯ ಬಗ್ಗೆ ಪೊಲೀಸರೇ ದಂಧೆಕೋರರಿಗೆ ಮಾಹಿತಿ ನೀಡುತ್ತಾರೆ. ಯಾರಾದ್ರೂ ದೂರು ಹೇಳಿದರೆ, ಅದು ಗಣಿ ಇಲಾಖೆಗೆ ಬರುತ್ತದೆ, ನಮ್ಮ ವ್ಯಾಪ್ತಿಗೆ ಬರಲ್ಲ ಅಂತಾರೆ. ಆದರೆ ಅಕ್ರಮ ದಂಧೆಕೋರರಿಗೆ ರಾತ್ರಿ ಪೊಲೀಸರೇ ಎಸ್ಕಾರ್ಟ್ ನೀಡುತ್ತಾರೆ. ಇವರಿಗೆ ಜನರ ಬದುಕು, ದ್ವೀಪದ ಬಗ್ಗೆ ಕಾಳಜಿ ಇಲ್ಲ. ಅಲ್ಲಿ ಸಿಗುವ ಮಾಮೂಲಿ ಹಣದ ಮೇಲಷ್ಟೇ ಕಾಳಜಿ. ಶಾಸಕರು, ಉಸ್ತುವಾರಿ ಸಚಿವರು ಮನಸ್ಸು ಮಾಡಿದರೆ, 24 ಗಂಟೆಯಲ್ಲಿ ಅಕ್ರಮವನ್ನು ನಿಲ್ಲಿಸಬಹುದು. ಇಲ್ಲಿನ ದಂಧೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡಬೇಕಾಗಿದೆ ಎಂದು ಹೇಳಿದರು.
ಎರಡು ತಿಂಗಳ ಹಿಂದೆ ಗಣಿ ಇಲಾಖೆಯವರು ಅಧ್ಯಯನ ನೆಪದಲ್ಲಿ ಸ್ಥಳಕ್ಕೆ ಬಂದಿದ್ದರು. ಆದರೆ, ಮರಳು ದಂಧೆಕೋರರ ದೋಣಿಯಲ್ಲೇ ಸ್ಥಳಕ್ಕೆ ಬಂದು ಏನೂ ಆಗಿಯೇ ಇಲ್ಲ ಎಂದು ಉಲ್ಟಾ ವರದಿ ನೀಡಿದ್ದಾರೆ. ಗಣಿ ಇಲಾಖೆ ಅಧಿಕಾರಿಗಳು ಇರೋದೇ ದಂಧೆಕೋರರ ಪರ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಮಾಧ್ಯಮ ಮಂದಿ, ಸಮಾನ ಮನಸ್ಕ ಸಂಘಟನೆಗಳು ಅಲ್ಲಿ ಹೋಗಿದ್ದಾಗಲೇ ಗಣಿ ಇಲಾಖೆ ತಂಡ ದಂಧೆಕೋರರ ಜೊತೆಗೆ ಸಾಗಿದ್ದನ್ನು ನೋಡಿದ್ದೇವೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಸಾಮಾಜಿಕ ಕಾರ್ಯಕರ್ತ ರಾಯ್ ಕ್ಯಾಸ್ಟಲಿನೋ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ದ್ವೀಪಗಳನ್ನು ಪ್ರವಾಸಿ ತಾಣಗಳನ್ನಾಗಿ ಬೆಳೆಸಲಾಗಿದೆ. ಇದು ಮಂಗಳೂರಿನಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ, ಮರಳು ದಂಧೆಗೆ ಯಾಕೆ ಬಲಿ ಕೊಡುತ್ತಿದ್ದಾರೆ ಎಂಬುದು ಗಂಭೀರ ಪ್ರಶ್ನೆ. ಅಡ್ಯಾರಿನಲ್ಲಿ ಈಗಾಗಲೇ ಅಣೆಕಟ್ಟು ಕಟ್ಟಿದ್ದು, ಅಲ್ಲಿ ನೀರು ನಿಲ್ಲಿಸಲು ಮುಂದಾದರೆ ಪಾವೂರು ಉಳಿಯ ದ್ವೀಪ ಮುಳುಗಲಿದೆ. ಇದೇ ಉದ್ದೇಶದಲ್ಲಿ ದ್ವೀಪದ ಸುತ್ತ ಅಗೆದು ಮರಳು ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನಾ ಸಭೆಯಲ್ಲಿ ಕೆಥೋಲಿಕ್ ಕ್ರಿಸ್ತಿಯನ್ ಮಹಿಳೆಯರು, ಪುರುಷರ ಜೊತೆಗೆ ಸಮಾನ ಮನಸ್ಕ ಸಂಘಟನೆಯ ಸದಸ್ಯರು, ಪಾವೂರು ಉಳಿಯ ದ್ವೀಪದ ಜನರು ಭಾಗವಹಿಸಿದ್ದರು.
Like-minded groups, including Catholic Sabha, ICYM, YCS, and Mother Theresa Vichara Vedike, staged a massive protest against illegal sand mining in the district and the administration’s apathy towards the issue on Friday, September 27, in front of Mini Vidhana Soudha in Mangaluru.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm