Udupi Accident, Koteshwara: ಉಡುಪಿ ; ಪಾದಚಾರಿಗಳ ಮೇಲೆ ಹರಿದ ಟಿಪ್ಪರ್ ಲಾರಿ, ಚಕ್ರದ ಕೆಳಗೆ ಸಿಲುಕಿ ಸಾವನಪ್ಪಿದ ವಿದ್ಯಾರ್ಥಿ

01-10-24 07:29 pm       Udupi Correspondent   ಕರಾವಳಿ

ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ವಿದ್ಯಾರ್ಥಿಗೆ ಟಿಪ್ಪರ್ ಲಾರಿ ಗುದ್ದಿರುವ ಭಯಾನಕ ಘಟನೆ ಕೋಟೇಶ್ವರ ಹಾಲಾಡಿ ರೋಡ್‌ನ ಕಾಗೇರಿ ಕ್ರಾಸ್ ಬಳಿ ನಡೆದಿದೆ.

ಉಡುಪಿ, ಅ.1: ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ವಿದ್ಯಾರ್ಥಿಗೆ ಟಿಪ್ಪರ್ ಲಾರಿ ಗುದ್ದಿರುವ ಭಯಾನಕ ಘಟನೆ ಕೋಟೇಶ್ವರ ಹಾಲಾಡಿ ರೋಡ್‌ನ ಕಾಗೇರಿ ಕ್ರಾಸ್ ಬಳಿ ನಡೆದಿದೆ. ನಡೆದು ಹೋಗುತ್ತಿರುವ ವಿದ್ಯಾರ್ಥಿ ಮೇಲೆ ಟಿಪ್ಪರ್ ಚಕ್ರ ಹರಿದಿದೆ. ಭೀಕರ ಅಪಘಾತದಲ್ಲಿ ಧನುಷ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾರೆ.

ಕಾಗೇರಿ ಕ್ರಾಸ್ ಬಳಿ ಟಿಪ್ಪರ್ ಚಾಲಕ ಅಡಲಾಗಿ ಬಂದ ಕಾರು ತಪ್ಪಿಸಲು ಹೋಗಿದ್ದಾನೆ. ಪಾದಚಾರಿ ವಿದ್ಯಾರ್ಥಿಗೆ ಟಿಪ್ಪರ್ ಗುದ್ದಿದ್ದು ಯುವಕ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಧನುಷ್ ಪಕ್ಕದಲ್ಲೇ ಉಳಿದ ಇಬ್ಬರು ವಿದ್ಯಾರ್ಥಿಗಳು ಜಂಪ್ ಮಾಡಿ ಬಚಾವ್ ಆಗಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೃತ ವಿದ್ಯಾರ್ಥಿ ಕೋಟೇಶ್ವರ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷ ಡಿಗ್ರಿ ಓದುತ್ತಿದ್ದ. ಈ ಅಪಘಾತ ನಡೆಯುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Udupi koteshwara haladi accident, degree student killed after truck rams him. The deceased has been identified as Dhanush.