ಬ್ರೇಕಿಂಗ್ ನ್ಯೂಸ್
21-10-24 08:38 pm Mangalore Correspondent ಕರಾವಳಿ
ಮಂಗಳೂರು, ಅ.21: ಕೊಬ್ಬರಿ, ತೆಂಗಿನ ಕಾಯಿಗೆ ಈ ಬಾರಿ ಉತ್ತಮ ದರ ಸಿಗುವ ನಿರೀಕ್ಷೆ ಇದೆ. ದೀಪಾವಳಿ ನಂತರ ಇನ್ನೂ ಬೆಲೆ ಹೆಚ್ಚಲಿದ್ದು ತೆಂಗಿನ ಕಾಯಿ ಕೇಜಿಗೆ 60 ರಿಂದ 70 ರೂಪಾಯಿಗೆ ಏರಲಿದೆ. ಬೆಳೆಗಾರರು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಬೆಲೆ ಪಡೆಯಲಿದ್ದಾರೆ ಎಂದು ದಕ್ಷಿಣ ಕನ್ನಡ ತೆಂಗು ಉತ್ಪಾದಕ ಮಾರಾಟ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ ತಿಳಿಸಿದ್ದಾರೆ.
ಈ ಬಾರಿ ಮಳೆ ಹೆಚ್ಚಿದ್ದರಿಂದ ತೆಂಗು ಕೃಷಿ ಇಳುವರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಹೀಗಾಗಿ ಬೆಳೆಯೂ ಕಡಿಮೆಯಾಗಿದ್ದು ಇದರ ಪರಿಣಾಮ ಖಚಿತವಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಈಗಾಗಲೇ ಎಳನೀರಿಗೆ 60 ರೂ.ನಷ್ಟು ದರ ಏರಿದ್ದು ಬೆಳೆಗಾರರಿಂದ 40-50 ರೂ.ಗೆ ಖರೀದಿಯಾಗುತ್ತಿದೆ. ಇದರಿಂದಾಗಿ ಎಳನೀರನ್ನು ಕೂಡ ಹೆಚ್ಚಾಗಿ ರೈತರು ಮಾರಾಟ ಮಾಡುತ್ತಿದ್ದಾರೆ. ಅಧಿಕ ಪೋಷಕಾಂಶ ಇರುವ ಎಳನೀರಿಗೆ ದರ ಏರಿಕೆಯಾಗುತ್ತಿರುವುದು ಮತ್ತು ಎಳನೀರು ಮಾರಾಟಕ್ಕೆ ರೈತರು ಒಲವು ತೋರುತ್ತಿರುವುದು ಮಾರುಕಟ್ಟೆ ದೃಷ್ಟಿಯಿಂದ ಉತ್ತಮ ಲಕ್ಷಣ. ಇದು ತೆಂಗು ಕೃಷಿಯಲ್ಲಿ ಆಗಿರುವ ಉತ್ತಮ ಬೆಳವಣಿಗೆಯೂ ಹೌದು. ತೆಂಗು ಕೂಡ ಪರ್ಯಾಯ ಆಹಾರ ಬೆಳೆಯಾಗುತ್ತಿದ್ದು ಇದೆಲ್ಲದರ ಪರಿಣಾಮ ಕೃಷಿಕರ ಪಾಲಿಗೆ ಲಾಭದಾಯಕ ಆಗಲಿದೆ. ಇದರಿಂದ ತೆಂಗು ಮತ್ತು ಕೊಬ್ಬರಿ ಕೇಜಿಗೆ ಬೆಲೆ ಹೆಚ್ಚುವುದು ಖಚಿತ.
ದೀಪಾವಳಿ ನಂತರ ತೆಂಗಿನಕಾಯಿ ಕೆಜಿಗೆ 60ರಿಂದ 70 ರೂ.ನಷ್ಟು ಆಗುವ ಸಾಧ್ಯತೆಯಿದೆ. ಈಗಲೇ ಸಗಟು ಮಾರುಕಟ್ಟೆಯಲ್ಲಿ 55-60 ರು. ತೆಂಗಿನ ಕಾಯಿ ದರ ಇದೆ. ತೆಂಗು ಉತ್ಪಾದಕ ಸಂಸ್ಥೆಯಿಂದ ಬೆಳೆಗಾರರಿಂದ 40-45 ರೂ.ಗೆ ತೆಂಗಿನ ಕಾಯಿ ಖರೀದಿ ಮಾಡಲಾಗುತ್ತಿದೆ. ಈ ದರ ಖಚಿತವಾಗಿಯೂ ದೀಪಾವಳಿ ಬಳಿಕ ಹೆಚ್ಚಲಿದೆ. ಹೀಗಾಗಿ ತೆಂಗು ಬೆಳೆಗಾರರು ದುಡುಕದೆ ಉತ್ತಮ ಇಳುವರಿ ಬರುವ ವರೆಗೆ ತಾಳ್ಮೆ ವಹಿಸಬೇಕು. ತೆಂಗು ದರ ಏರಿಕೆಯಾದರೆ ಕೃಷಿಕರ ದೃಷ್ಠಿಯಿಂದ ಉತ್ತಮ ಬೆಳವಣಿಗೆ ಎಂದು ಕುಸುಮಾಧರ ಅವರು ಪ್ರಕಟಣೆಯಲ್ಲಿ ರೈತರಿಗೆ ಸಲಹೆ ಮಾಡಿದ್ದಾರೆ.
Coconut price to increase from 60 to 70 rupees per kg says Coconut Producers Association President Kusumadhar in Mangalore.
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm