ಬ್ರೇಕಿಂಗ್ ನ್ಯೂಸ್
21-10-24 08:38 pm Mangalore Correspondent ಕರಾವಳಿ
ಮಂಗಳೂರು, ಅ.21: ಕೊಬ್ಬರಿ, ತೆಂಗಿನ ಕಾಯಿಗೆ ಈ ಬಾರಿ ಉತ್ತಮ ದರ ಸಿಗುವ ನಿರೀಕ್ಷೆ ಇದೆ. ದೀಪಾವಳಿ ನಂತರ ಇನ್ನೂ ಬೆಲೆ ಹೆಚ್ಚಲಿದ್ದು ತೆಂಗಿನ ಕಾಯಿ ಕೇಜಿಗೆ 60 ರಿಂದ 70 ರೂಪಾಯಿಗೆ ಏರಲಿದೆ. ಬೆಳೆಗಾರರು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಬೆಲೆ ಪಡೆಯಲಿದ್ದಾರೆ ಎಂದು ದಕ್ಷಿಣ ಕನ್ನಡ ತೆಂಗು ಉತ್ಪಾದಕ ಮಾರಾಟ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ ತಿಳಿಸಿದ್ದಾರೆ.
ಈ ಬಾರಿ ಮಳೆ ಹೆಚ್ಚಿದ್ದರಿಂದ ತೆಂಗು ಕೃಷಿ ಇಳುವರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಹೀಗಾಗಿ ಬೆಳೆಯೂ ಕಡಿಮೆಯಾಗಿದ್ದು ಇದರ ಪರಿಣಾಮ ಖಚಿತವಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಈಗಾಗಲೇ ಎಳನೀರಿಗೆ 60 ರೂ.ನಷ್ಟು ದರ ಏರಿದ್ದು ಬೆಳೆಗಾರರಿಂದ 40-50 ರೂ.ಗೆ ಖರೀದಿಯಾಗುತ್ತಿದೆ. ಇದರಿಂದಾಗಿ ಎಳನೀರನ್ನು ಕೂಡ ಹೆಚ್ಚಾಗಿ ರೈತರು ಮಾರಾಟ ಮಾಡುತ್ತಿದ್ದಾರೆ. ಅಧಿಕ ಪೋಷಕಾಂಶ ಇರುವ ಎಳನೀರಿಗೆ ದರ ಏರಿಕೆಯಾಗುತ್ತಿರುವುದು ಮತ್ತು ಎಳನೀರು ಮಾರಾಟಕ್ಕೆ ರೈತರು ಒಲವು ತೋರುತ್ತಿರುವುದು ಮಾರುಕಟ್ಟೆ ದೃಷ್ಟಿಯಿಂದ ಉತ್ತಮ ಲಕ್ಷಣ. ಇದು ತೆಂಗು ಕೃಷಿಯಲ್ಲಿ ಆಗಿರುವ ಉತ್ತಮ ಬೆಳವಣಿಗೆಯೂ ಹೌದು. ತೆಂಗು ಕೂಡ ಪರ್ಯಾಯ ಆಹಾರ ಬೆಳೆಯಾಗುತ್ತಿದ್ದು ಇದೆಲ್ಲದರ ಪರಿಣಾಮ ಕೃಷಿಕರ ಪಾಲಿಗೆ ಲಾಭದಾಯಕ ಆಗಲಿದೆ. ಇದರಿಂದ ತೆಂಗು ಮತ್ತು ಕೊಬ್ಬರಿ ಕೇಜಿಗೆ ಬೆಲೆ ಹೆಚ್ಚುವುದು ಖಚಿತ.
ದೀಪಾವಳಿ ನಂತರ ತೆಂಗಿನಕಾಯಿ ಕೆಜಿಗೆ 60ರಿಂದ 70 ರೂ.ನಷ್ಟು ಆಗುವ ಸಾಧ್ಯತೆಯಿದೆ. ಈಗಲೇ ಸಗಟು ಮಾರುಕಟ್ಟೆಯಲ್ಲಿ 55-60 ರು. ತೆಂಗಿನ ಕಾಯಿ ದರ ಇದೆ. ತೆಂಗು ಉತ್ಪಾದಕ ಸಂಸ್ಥೆಯಿಂದ ಬೆಳೆಗಾರರಿಂದ 40-45 ರೂ.ಗೆ ತೆಂಗಿನ ಕಾಯಿ ಖರೀದಿ ಮಾಡಲಾಗುತ್ತಿದೆ. ಈ ದರ ಖಚಿತವಾಗಿಯೂ ದೀಪಾವಳಿ ಬಳಿಕ ಹೆಚ್ಚಲಿದೆ. ಹೀಗಾಗಿ ತೆಂಗು ಬೆಳೆಗಾರರು ದುಡುಕದೆ ಉತ್ತಮ ಇಳುವರಿ ಬರುವ ವರೆಗೆ ತಾಳ್ಮೆ ವಹಿಸಬೇಕು. ತೆಂಗು ದರ ಏರಿಕೆಯಾದರೆ ಕೃಷಿಕರ ದೃಷ್ಠಿಯಿಂದ ಉತ್ತಮ ಬೆಳವಣಿಗೆ ಎಂದು ಕುಸುಮಾಧರ ಅವರು ಪ್ರಕಟಣೆಯಲ್ಲಿ ರೈತರಿಗೆ ಸಲಹೆ ಮಾಡಿದ್ದಾರೆ.
Coconut price to increase from 60 to 70 rupees per kg says Coconut Producers Association President Kusumadhar in Mangalore.
10-06-26 10:40 pm
HK News Desk
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 10:03 pm
HK News Staffer
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
10-06-26 01:48 pm
HK News Staffer
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm