ಬ್ರೇಕಿಂಗ್ ನ್ಯೂಸ್
27-10-24 10:37 pm Udupi Correspondent ಕರಾವಳಿ
ಉಡುಪಿ, ಅ.27: ಜಾತಿ ಗಣತಿ ವಿಚಾರದಲ್ಲಿ ಪುಡಿ ರಾಜಕಾರಣಿಯಾಗಿ ಮಾತಾಡ್ತಿದ್ದಾರೆ, ಕಾವಿ ಬಟ್ಟೆ ತೊಟ್ಟಿದನ್ನು ಕಳಚಲಿ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಅವರಿಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಿದ್ದಾಗ ಈ ಮಾತು ಉಲ್ಲೇಖಿಸಿದ ಸ್ವಾಮೀಜಿ, ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಲೆಕ್ಕ ಯಾಕೆ ಬೇಕಾಗುತ್ತದೆ. ಒಂದೆಡೆ ಜಾತ್ಯತೀತರು ಎಂದು ಹೇಳುವುದು, ಇನ್ನೊಂದೆಡೆ ಅದನ್ನೇ ಎಲ್ಲ ವಲಯದಲ್ಲೂ ಪೋಷಿಸುತ್ತಿದ್ದಾರೆ. ಇದರ ಬಗ್ಗೆ ಲೋಕದ ವ್ಯವಸ್ಥೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, ಜಾತ್ಯತೀತ ವ್ಯವಸ್ಥೆಯಲ್ಲಿ ಜಾತಿ ಲೆಕ್ಕ ಯಾಕೆಂದು ಕೇಳಿದ್ದೇನೆ. ಇದರ ಹಿಂದಿನ ಲೆಕ್ಕ ಅರ್ಥವಾಗಿಲ್ಲ ಎಂದೂ ಹೇಳಿದ್ದೆ. ಹೀಗೆ ಹೇಳಿರುವುದು ತಪ್ಪಂತೆ, ಪುಡಿ ರಾಜಕಾರಣ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ.
ಹಾಗಾದರೆ, ಯಾವುದೇ ವಿಷಯದ ಬಗ್ಗೆ ಮಾತನಾಡಲು ರಾಜಕಾರಣಿಯೇ ಆಗಬೇಕೇ.. ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ, ಅಲ್ಲವೋ ಹೇಳಿ. ಹೌದು ಎಂದಾದರೆ ದೇಶದ ಸಾಮಾನ್ಯ ಪ್ರಜೆಗೂ ತನ್ನ ಅಭಿಪ್ರಾಯ ಹೇಳುವ ಹಕ್ಕು ಇದೆ. ಕಾವಿ ತೆಗೆದಿಟ್ಟು ರಾಜಕಾರಣಕ್ಕೆ ಬರಲಿ, ಉತ್ತರ ಕೊಡುತ್ತೇನೆ ಎಂದರೆ, ಏನರ್ಥ. ಸಮಾಜದಲ್ಲಿ ರಾಜಕಾರಣಿಗಳಿಗೆ ಮಾತ್ರ ಮಾತನಾಡುವ ಹಕ್ಕು ಇರುವುದು. ಪ್ರಜೆಗಳಿಗೆ ಮಾತನಾಡಲು ಅವಕಾಶ ಇಲ್ಲವೆಂದು ಹೇಳಿಬಿಡಲಿ. ಪೀಠಾಧಿಪತಿಗೆ ಅಲ್ಲ, ಸಾಮಾನ್ಯ ನಾಗರಿಕನಿಗೂ ಮಾತನಾಡುವ ಹಕ್ಕು ಇದೆ. ದೇವರೇ ಅವರಿಗೂ ಸದ್ಬುದ್ಧಿ ಕೊಡಲಿ ಎಂದು ಹೇಳುತ್ತೇನೆ ಎಂಬುದಾಗಿ ವಿಶ್ವಪ್ರಸನ್ನ ತೀರ್ಥ ಹೇಳಿದ್ದಾರೆ.
ವಾರದ ಹಿಂದೆ ಜಾತಿ ಗಣತಿ ವಿಚಾರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಸ್ವಾಮೀಜಿ ಜಾತಿ ಗಣತಿ ಯಾಕೆ ಬೇಕೆಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಮುಖಂಡ ಹರಿಪ್ರಸಾದ್, ಸ್ವಾಮೀಜಿ ತಮ್ಮ ಮಠದಲ್ಲೇ ಪಂಕ್ತಿ ಭೇದ ಮಾಡುವುದು, ಮಡೆಸ್ನಾನ ಮಾಡಿಸುವ ವಿಚಾರವನ್ನು ನೋಡಿಕೊಳ್ಳಲಿ. ಆಬಳಿಕ ಜಾತಿ ಗಣತಿ ಬಗ್ಗೆ ಹೇಳಲಿ. ಬಹಳಷ್ಟು ನಂಬಿಕೆ ಇಟ್ಟಿರುವ ಸ್ವಾಮೀಜಿ ಸ್ಥಾನದಲ್ಲಿರುವ ವ್ಯಕ್ತಿ ಪುಡಿ ರಾಜಕಾರಣಿ ರೀತಿ ಮಾತನಾಡಬಾರದು ಎಂದು ಕಿಡಿಕಾರಿದ್ದರು.
Expressing his dismay over recent comments made by a political leader regarding his views on the caste census, Sri Vishwaprasanna Teertha Swamiji of Pejawar Mutt questioned whether it is wrong to express one’s opinion in a democracy.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am