ಬ್ರೇಕಿಂಗ್ ನ್ಯೂಸ್
16-11-24 12:03 pm Mangalore Correspondent ಕರಾವಳಿ
ಮಂಗಳೂರು, ನ.16: ಕಳೆದ ಬಾರಿ ಭಾರೀ ವಿವಾದಕ್ಕೀಡಾಗಿದ್ದ ಗುರುಪುರ ಸಮೀಪದ ಮಳಲಿಯ ಮಸೀದಿ ವಕ್ಫ್ ಆಸ್ತಿಯೆಂದು ಮುಸ್ಲಿಂ ಕಡೆಯವರು ವಾದಿಸಿದ್ದರು. ಅದೇ ಕಾರಣಕ್ಕೆ ಮಸೀದಿ ಕುರಿತ ವ್ಯಾಜ್ಯವನ್ನು ಮಂಗಳೂರಿನ ಕೋರ್ಟಿನಲ್ಲಿ ನಡೆಸಲು ಅನುಮತಿ ಇಲ್ಲ, ವಕ್ಫ್ ಟ್ರಿಬ್ಯುನಲ್ ನಲ್ಲಿಯೇ ಮಾಡಬೇಕೆಂದು ವಾದ ಮಾಡಿದ್ದರು. ಆದರೆ, ಅದು ವಕ್ಫ್ ಆಸ್ತಿಯಲ್ಲ, ಕಲಂ 9ರಲ್ಲಿ ಸರಕಾರಿ ಜಾಗ ಅಂತಲೇ ಇದೆ. ಇದೇನಿದ್ದರೂ ಅಲ್ಲಿ ಉತ್ಖನನ ಮಾಡಲು ಅವಕಾಶ ನೀಡಬೇಕೆಂದು ವಿಶ್ವ ಹಿಂದು ಪರಿಷತ್ ಕಡೆಯಿಂದ ವಾದಿಸಲಾಗಿತ್ತು.
ಈಗ ರಾಜ್ಯದಲ್ಲಿ ವಕ್ಫ್ ವಿವಾದ ಜೋರಾಗಿದ್ದು, ಹಲವು ಜಿಲ್ಲೆಗಳಲ್ಲಿ ಖಾಸಗಿ ಜಮೀನಿಗೂ ವಕ್ಫ್ ನೋಟೀಸ್ ನೀಡಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಮಳಲಿ ಮಸೀದಿ ಕುರಿತ ಜಾಗವನ್ನೂ ವಕ್ಫ್ ಕಾಯ್ದೆಯಡಿ ಕಂದಾಯ ದಾಖಲೆಯಲ್ಲಿ ಬದಲಾವಣೆ ತರುವ ಸಾಧ್ಯತೆಯಿದೆ ಎನ್ನುವ ಸಂಶಯ ವಿಶ್ವ ಹಿಂದು ಪರಿಷತ್ತಿಗೆ ಉಂಟಾಗಿದೆ. ಹೀಗಾಗಿ ಮಂಗಳೂರಿನ ಸಹಾಯಕ ಕಮಿಷನರ್ ಕೋರ್ಟಿನಲ್ಲಿ ಇತ್ತೀಚೆಗೆ ಆಕ್ಷೇಪ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಆಕ್ಷೇಪದ ಅರ್ಜಿಯನ್ನು ಸಹಾಯಕ ಕಮಿಷನರ್ ವಜಾ ಮಾಡಿದ್ದು ವಿಶ್ವ ಹಿಂದು ಪರಿಷತ್ತಿನ ಸಂಶಯ ಬಲಗೊಳಿಸಿತ್ತು.
ಇದರ ಬೆನ್ನಲ್ಲೇ ಹೈಕೋರ್ಟಿನಲ್ಲಿ ಅಪೀಲು ಹೋಗಿದ್ದು, ಯಾವುದೇ ಕಾರಣಕ್ಕೂ ಮಳಲಿ ಮಸೀದಿ ಕುರಿತ ವ್ಯಾಜ್ಯ ಕೋರ್ಟಿನಲ್ಲಿ ಇರುವುದರಿಂದ ಅಲ್ಲಿನ ಜಾಗದ ಕುರಿತಾಗಿ ದಾಖಲೆ ಬದಲಾವಣೆ ಮಾಡಕೂಡದು ಎಂದು ಮಂಗಳೂರು ಸಹಾಯಕ ಕಮಿಷನರ್ ಗೆ ನಿರ್ದೇಶನ ನೀಡುವಂತೆ ಮಾಡಲಾಗಿದೆ. ವಿಎಚ್ ಪಿ ಕಡೆಯ ವಕೀಲ ಚಿದಾನಂದ ಕೆದಿಲಾಯ ಪ್ರಕಾರ, ಈ ಕುರಿತು ಹೈಕೋರ್ಟಿನಿಂದಲೂ ಸ್ಟೇ ತರಲಾಗಿದೆ. ಇದರ ಜೊತೆಗೆ, ಮಳಲಿ ಮಸೀದಿ ಕುರಿತಾಗಿ ಕೋರ್ಟಿನಲ್ಲಿ ವ್ಯಾಜ್ಯ ಇರುವುದರಿಂದ ಕಂದಾಯ ದಾಖಲೆ ಬದಲಾವಣೆ ಮಾಡಲಾಗದು ಎಂದಿದ್ದಾರೆ.
ಸದ್ಯ ವಕ್ಫ್ ಕಾಯ್ದೆಯಡಿ ಯಾವುದೇ ಖಾಸಗಿ ಆಸ್ತಿಯನ್ನೂ ವಕ್ಫ್ ಆಸ್ತಿಯೆಂದು ನೋಟಿಫೈ ಮಾಡುವುದಕ್ಕೆ ಸಾಧ್ಯವಿದೆ. ಹೀಗಾಗಿ ರಾಜ್ಯದೆಲ್ಲೆಡೆ ವಕ್ಫ್ ನೋಟೀಸ್ ಕುರಿತು ಭಾರೀ ಆತಂಕ ವ್ಯಕ್ತವಾಗಿದೆ. ಇದೇ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭಾರೀ ವಿವಾದಕ್ಕೀಡಾಗಿದ್ದ ಮಳಲಿ ಮಸೀದಿ ಕುರಿತ ವ್ಯಾಜ್ಯ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ. ಕಲಂ 11ರಲ್ಲಿ ವಕ್ಫ್ ಆಸ್ತಿಯೆಂದು ಉಲ್ಲೇಖ ಇದ್ದರೂ, ಹಕ್ಕುಗಳನ್ನು ಸೂಚಿಸುವ ಕಲಂ 9ರಲ್ಲಿ ಸರಕಾರಿ ಜಾಗ ಎಂದೇ ಇದೆ ಎಂದು ವಿಎಚ್ ಪಿ ಪರ ವಕೀಲರು ಹೇಳುತ್ತಿದ್ದಾರೆ. ಇತ್ತೀಚೆಗೆ, ರಾಜ್ಯದ ಮುಖ್ಯ ಕಾರ್ಯದರ್ಶಿಯವರೇ ಕಂದಾಯ ಇಲಾಖೆಯಲ್ಲಿ ವಕ್ಫ್ ಆಸ್ತಿಗಳ ಖಾತೆ ಬದಲಾವಣೆ ಮಾಡಬೇಕೆಂದು ಸೂಚಿಸಿರುವುದರಿಂದ ಮಳಲಿ ಮಸೀದಿಯದ್ದೂ ಬದಲಾವಣೆ ಆಗುವ ಸಾಧ್ಯತೆಯಿದೆ ಎನ್ನುವ ಸಂಶಯ ಇವರಲ್ಲಿದೆ.
Malali mosque row, VHP alleges of Mangalore administration trying to convert land into Waqf property. Vhp has appealed the additional court not to convert the land to waqf property. The mosque had filed a plea with the court stating that the place belongs to the Waqf board and that the civil court should not hear the plea. Now, the civil court admitted the VHP's plea and proceedings will continue at Mangalore civil court.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm