ಬ್ರೇಕಿಂಗ್ ನ್ಯೂಸ್
07-12-24 01:20 pm Mangalore Correspondent ಕರಾವಳಿ
ಮಂಗಳೂರು, ಡಿ.7: ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ನೇರವಾಗಿ ಉಳ್ಳಾಲದ ಕೋಟೆಪುರಕ್ಕೆ ಸೇತುವೆ ನಿರ್ಮಿಸಬೇಕು. ಆಮೂಲಕ ಬಂದರಿಗೆ ಬರುವ ಸರಕು ವಾಹನಗಳು ಮಂಗಳೂರು ನಗರಕ್ಕೆ ಬರದೆ, ನೇರವಾಗಿ ಉಳ್ಳಾಲದ ಮೂಲಕ ಕೇರಳದ ಕಡೆಗೆ ಸಾಗುವಂತಾಗಬೇಕು ಎನ್ನುವುದು ಉಳ್ಳಾಲ ಕ್ಷೇತ್ರದ ಶಾಸಕ ಯುಟಿ ಖಾದರ್ ಕನಸಾಗಿತ್ತು. ಬೋಳಾರದಿಂದ ಉಳ್ಳಾಲದ ಕೋಟೆಪುರಕ್ಕೆ ಸೇತುವೆ ನಿರ್ಮಿಸುವ ಖಾದರ್ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಹೊಸತೊಂದು ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಸುಮಾರು 200 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಚಿವ ಸಂಪುಟ ಅನುಮತಿ ನೀಡಿದ್ದು, ಆಮೂಲಕ ಈ ಭಾಗದ ಜನರ ದಶಕದ ಬೇಡಿಕೆಗೆ ಅಸ್ತು ಸಿಕ್ಕಿದೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನಮೊಗರು- ಆಡಂಕುದ್ರು ಮಧ್ಯೆ ಸೇತುವೆ ಇದೆ. ಹಿಂದೆ ಒಂದೇ ಸೇತುವೆ ಇದ್ದ ಜಾಗದಲ್ಲಿ 2012ರ ವೇಳೆಗೆ ಮತ್ತೊಂದು ಸೇತುವೆ ರಚಿಸಿ, ಹೋಗುವುದಕ್ಕೆ ಬರುವುದಕ್ಕೆ ಪ್ರತ್ಯೇಕ ರಸ್ತೆ ಮಾಡಲಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ಬಹುತೇಕ ಟ್ರಾಫಿಕ್ ಜಾಮ್ ಕಡಿಮೆಯಾಗಿತ್ತು. ಇದೀಗ ಮಂಗಳೂರಿನ ಮೀನುಗಾರಿಕಾ ಬಂದರು ಇರುವ ಬೋಳಾರ ಅಳಿವೆಬಾಗಿಲಿನ ಸಮೀಪದಲ್ಲೇ ಉಳ್ಳಾಲದ ಕೋಟೆಪುರಕ್ಕೆ ಸಂಪರ್ಕಿಸಲು ಸೇತುವೆ ರಚಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ. ಕೋಟೆಪುರ- ಬೋಳಾರ ಮಧ್ಯೆ 1400 ಮೀಟರ್ ಉದ್ದಕ್ಕೆ ಸೇತುವೆ ರಚನೆಯಾಗಲಿದೆ.
ಈ ಭಾಗದಲ್ಲಿ ಹೊಸ ಸೇತುವೆ ರಚನೆಯಾದರೆ ಮಂಗಳೂರು ನಗರಕ್ಕೆ ಬಹುತೇಕ ಸರಕು ವಾಹನಗಳ ಎಂಟ್ರಿ ತಪ್ಪಲಿದೆ. ಬಂದರಿಗೆ ಕೇರಳ ಭಾಗದಿಂದ ಬಹಳಷ್ಟು ವಾಹನಗಳು ಬರುತ್ತಿದ್ದು, ಅವೆಲ್ಲ ಹೊಸ ಸೇತುವೆಯಿಂದ ಉಳ್ಳಾಲದ ಮೂಲಕ ಕೇರಳ ಕಡೆಗೆ ಸಾಗಲಿವೆ. ಮಂಗಳೂರು ನಗರಕ್ಕೆ ಎಂಟ್ರಿಯಾಗದೆ ಅಲ್ಲಿನ ಟ್ರಾಫಿಕ್ ಜಾಮ್ ತಪ್ಪಲಿದೆ ಎನ್ನುವುದು ದೂರದೃಷ್ಟಿಯ ಯೋಜನೆ. ಇದರಿಂದ ಉಳ್ಳಾಲ ಪೇಟೆಯ ಅಭಿವೃದ್ಧಿಗೂ ಒತ್ತು ಸಿಗಲಿದ್ದು, ಉಳ್ಳಾಲ – ಮಂಗಳೂರು ಮತ್ತಷ್ಟು ಹತ್ತಿರವಾಗುತ್ತದೆ. ಸಮುದ್ರದಿಂದ ಹತ್ತಿರದಲ್ಲೇ ಈ ಸೇತುವೆ ಇರುವುದರಿಂದ ಪ್ರವಾಸಿಗರು ಕೂಡ ಈ ಸೇತುವೆಯತ್ತ ಆಕರ್ಷಿಸುವ ಸಾಧ್ಯತೆಯಿದೆ. ಇದಲ್ಲದೆ, ಮಂಗಳೂರು- ಉಳ್ಳಾಲದ ನಡುವೆ ರಿಂಗ್ ರೋಡ್ ಆಗಿಯೂ ಹೊಸ ಖದರ್ ಮೂಡಿಸಲಿದೆ.
Approval for construction of another bridge to Netravati from Bunder to Kotepura Ullal says Khader. The cost of this project is estimated to 200 crores.
09-02-26 07:20 pm
Bangalore Correspondent
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
09-02-26 10:25 pm
HK News Desk
ಜಾಗತಿಕ ಷೇರು ಮಾರುಕಟ್ಟೆಯಲ್ಲಿ 'ಆಂಥ್ರೋಪಿಕ್' AI ಬಿ...
09-02-26 12:27 pm
ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ, ಸ್ವಯಂಸೇವಕ...
08-02-26 10:18 pm
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
09-02-26 11:20 pm
HK News Desk
Mangalore Accident, Bus: ನಂತೂರಿನಲ್ಲಿ ಅಪಘಾತಕ್ಕ...
09-02-26 08:02 pm
ಕೆಪಿಟಿ ಜಂಕ್ಷನ್ ಬಳಿಯ ಹೆದ್ದಾರಿ ಡಿವೈಡರ್ ಮುಚ್ಚಿದ್...
09-02-26 02:50 pm
ಸೌಜನ್ಯಾ ಕೊಲೆ ಪ್ರಕರಣ ; ದೋಷಪೂರಿತ ತನಿಖೆ ನಡೆಸಿದ ಅ...
08-02-26 11:17 pm
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
09-02-26 02:04 pm
HK News Desk
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am
Mangalore Jail Raid: ಮಂಗಳೂರು ಜೈಲಿನಲ್ಲಿ ಬರ್ಕೆ...
08-02-26 02:07 pm
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm