ಬ್ರೇಕಿಂಗ್ ನ್ಯೂಸ್
16-01-25 12:58 pm Mangalore Correspondent ಕರಾವಳಿ
ಉಳ್ಳಾಲ, ಜ.16: ಎಲ್ಲರನ್ನೂ ಒಂದಾಗಿ ಕೊಂಡೋಗುತ್ತಿದ್ದೇನೆಂದು ಹೇಳುತ್ತಿರುವ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರೇ ದನದ ಕೆಚ್ಚಲನ್ನ ಕಡಿದ ಪ್ರಕರಣ ಮತ್ತು ವಿಧಾನಸಭೆಯ ಒಳಗಡೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ಬಗೆಗೆ ನಿಮ್ಮ ನಿಲುವೇನು? ಉಳ್ಳಾಲದಲ್ಲಿ ಬಿಜೆಪಿ ಸೋತಿದೆ ಹೌದು, ಆದರೆ ಬಿಜೆಪಿಗರ ಮತಗಳೇನು ಕಡಿಮೆ ಆಗಿಲ್ಲ. ಕತ್ತಲು ಕವಿದಿದೆಯೆಂದು ದೀಪ ಹಚ್ಚೋದನ್ನ ನಿಲ್ಲಿಸಬೇಡಿ. ಮತದಾರರಿಗೋಸ್ಕರವಾದರೂ ಬಣ, ಗುಂಪುಗಾರಿಕೆ ಬಿಟ್ಟು ಒಂದಾಗಿ ಎಂದು ಸಂಸದ ಬ್ರಿಜೇಶ್ ಚೌಟ ಅವರು ಬಣ, ಗುಂಪುಗಾರಿಕೆಯಿಂದ ನಲುಗಿರುವ ಉಳ್ಳಾಲ ಬಿಜೆಪಿ ಪಾಳಯಕ್ಕೆ ಶಕ್ತಿ ಮದ್ದು ನೀಡುವ ಮಾತುಗಳನ್ನಾಡಿದ್ದಾರೆ.
ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರ ವತಿಯಿಂದ ಅಸೈಗೋಳಿಯ ಬಂಟರ ಭವನದಲ್ಲಿ ಬುಧವಾರ ನಡೆದ ಸಂಘಟನಾ ಪರ್ವ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಉಳ್ಳಾಲ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕೇರಳ-ತಲಪಾಡಿ ಗಡಿ ಪ್ರದೇಶವು ಹಿಂದೂ ಸಮಾಜ ವಿರೋಧಿ ಚಟುವಟಿಕೆಯ ಜಿಹಾದಿ ಶಕ್ತಿಗಳ ಕೇಂದ್ರವಾಗುತ್ತಿರುವ ಆತಂಕ ಇದೆ. ಇದಕ್ಕೆ ಕ್ಷೇತ್ರದ ಶಾಸಕರೇ ವಿಶೇಷವಾದ ಪ್ರೋತ್ಸಾಹ ನೀಡುತ್ತಿದ್ದಾರೆ. ಉಳ್ಳಾಲದ ಬಿಜೆಪಿ ಕಾರ್ಯಕರ್ತರು ಈ ಸವಾಲನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯದ ರಾಜಧಾನಿಯಲ್ಲೇ ಪೂಜನೀಯ ಗೋಮಾತೆಯ ಕೆಚ್ಚಲನ್ನ ಕಡಿಯುವ ಸ್ಥಿತಿ ಎದುರಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರವು ಇಂತಹ ಜಿಹಾದಿ ಮಾನಸಿಕತೆಯನ್ನೇ ಪೋಷಿಸುತ್ತಿದೆ. ವಿಧಾನ ಸಭೆಯೊಳಗೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದರೆ ಸಮಜಾಯಿಷಿ ಕೊಡುತ್ತಾರೆ. ದನದ ಕೆಚ್ಚಲನ್ನೇ ಕಡಿದ ವ್ಯಕ್ತಿಗೆ ಗೃಹಸಚಿವರು ಸಮಜಾಯಿಷಿ ಕೊಡುತ್ತಾರೆ. ಎಲ್ಲರನ್ನೂ ಜತೆಯಲ್ಲಿ ಕೊಂಡೋಗುತ್ತೇನೆಂದು ಹೇಳುವ ಸ್ಪೀಕರ್ ಖಾದರ್ ಅವರೇ ಪಾಕಿಸ್ತಾನಕ್ಕೆ ಜೈ, ದನದ ಕೆಚ್ಚಲನ್ನು ಕಡಿದ ಬಗ್ಗೆ ನಿಮ್ಮ ನಿಲುವೇನೆಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಉಳ್ಳಾಲ ಕ್ಷೇತ್ರವನ್ನ ಸವಾಲಾಗಿ ತಗೊಳ್ಳುವ ಅನಿವಾರ್ಯತೆ ಇದೆ. ಆ ದೊಡ್ಡ ಜವಾಬ್ದಾರಿ ಬಿಜೆಪಿ ಕ್ಷೇತ್ರಾಧ್ಯಕ್ಷರಾಗಿ ಮರು ಆಯ್ಕೆಗೊಂಡ ಜಗದೀಶ ಆಳ್ವರ ಮೇಲಿದೆ. ವೈಯಕ್ತಿಕ ದ್ವೇಷಗಳನ್ನ ಬದಿಗಿರಿಸಿ ಹಿಂದುತ್ವ, ರಾಷ್ಟ್ರೀಯವಾದಕ್ಕಾಗಿ ಒಂದಾಗಿ ಒಗ್ಗಟ್ಟಾಗೋಣ. ಉಳ್ಳಾಲ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಈಗಲೂ ಬಿಜೆಪಿ ಮತದಾರರಿದ್ದಾರೆ. ನಾನಂತೂ ಉಳ್ಳಾಲ ಕ್ಷೇತ್ರಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತೇನೆಂದು ಬ್ರಿಜೇಶ್ ಚೌಟ ಹೇಳಿದರು.
ಜಿಲ್ಲೆಯ ಸಹ ಚುನಾವಣಾಧಿಕಾರಿ ವಿಕಾಸ್ ಪುತ್ತೂರು ಅವರು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಮೂರು ವರುಷಗಳ ಅವಧಿಗೆ ಅಧ್ಯಕ್ಷರಾಗಿ ಜಗದೀಶ್ ಆಳ್ವರವರ ಹೆಸರನ್ನು ಘೋಷಣೆ ಮಾಡಿದರು.
ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮತ್ತು ಕ್ಷೇತ್ರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಆಳ್ವ ಕುವೆತ್ತಬೈಲ್ ಅವರನ್ನು ಅಭಿನಂದಿಸಲಾಯಿತು. ಸ್ಥಳೀಯ ಸಂಸ್ಥೆಗಳಿಗೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾರ್ಯಕರ್ತರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮೊದಲಾದವರು ಉಪಸ್ಥಿತರಿದ್ದರು.
slashing udders of 3 cows, what is UT khader opinions asks MP Brijesh Chowta in Mangalore during the meeting held by BJP at Bantara bavana.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm