ಬ್ರೇಕಿಂಗ್ ನ್ಯೂಸ್
15-12-20 04:51 pm Mangalore Correspondent ಕರಾವಳಿ
ಮಂಗಳೂರು, ಡಿ.15: ಕುಲಶೇಖರದ ಕೆಎಂಎಫ್ ಹಾಲಿನ ಡೈರಿಯಲ್ಲಿ ಟ್ಯಾಂಕ್ ಕ್ಲೀನಿಂಗ್ ನಡೆಸುತ್ತಿದ್ದ ವೇಳೆ ಕೆಮಿಕಲ್ ಬ್ಲಾಸ್ಟ್ ಆಗಿ ಒಬ್ಬ ಕಾರ್ಮಿಕನ ದೇಹ ಪೂರ್ತಿ ಸುಟ್ಟುಹೋದ ಘಟನೆ ನಡೆದಿದೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗುತ್ತಿಗೆ ನೌಕರ, ಸುಳ್ಯ ಮೂಲದ ಸತೀಶ್ (21) ಎಂಬಾತ ಟ್ಯಾಂಕ್ ಮತ್ತು ಟ್ಯೂಬ್ ಕ್ಲೀನ್ ಮಾಡಲೆಂದು ಕುದಿಯುತ್ತಿದ್ದ ನೀರಿಗೆ ಕೆಮಿಕಲ್ ಸುರಿದಾಗ ನೀರು ಒಮ್ಮೆಲೇ ಹೊರಗೆಸೆಯಲ್ಪಟ್ಟು ಘಟನೆ ನಡೆದಿದೆ. ಸೂಕ್ತ ಮುಂಜಾಗ್ರತೆ ಮತ್ತು ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ನಡೆದಿದ್ದು, ಸತೀಶ್ ದೇಹ ಬಿಸಿ ನೀರು ಮೈಗೆ ಬಿದ್ದು ಸುಟ್ಟು ಹೋಗಿದೆ.
ಇತರೇ ನೌಕರರು ಸೇರಿ ಕೂಡಲೇ ಸತೀಶ್ ನನ್ನು ನಗರದ ಎಜೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೆಎಂಎಫ್ ಡೈರಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದರೂ, ಇವರಿಗೆ ಇಎಸ್ಐ ಸೌಲಭ್ಯ ಇರುತ್ತದೆ. ಆದರೆ, ಆಸ್ಪತ್ರೆಯಲ್ಲಿ ಇಎಸ್ಐ ಸೌಲಭ್ಯ ಕೇಳಿದರೆ ಬೆಡ್ ಇಲ್ಲ ಎಂದು ಸಬೂಬು ಹೇಳುತ್ತಿದ್ದಾರೆಂದು ಜೊತೆಗಿದ್ದ ಕಾರ್ಮಿಕರು ದೂರಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಇಎಸ್ಐ ಸೌಲಭ್ಯ ಸಿಗದಿದ್ದರೆ ಗುತ್ತಿಗೆ ಕಂಪನಿಯವರೇ ದುಡ್ಡು ಕೊಡಬೇಕು ಎನ್ನುತ್ತಿದ್ದಾರೆ.
ಕೆಎಂಎಫ್ ಡೈರಿಯಲ್ಲಿ ಪ್ರೊಡಕ್ಷನ್ ವಿಭಾಗದಲ್ಲಿ 350 ಜನರು ಕಾರ್ಮಿಕರಿದ್ದು, ಎಲ್ಲರೂ ಗುತ್ತಿಗೆ ಕಾರ್ಮಿಕರು. ಬೆಂಗಳೂರಿನ ಕ್ರಿಯೇಟಿವಿಟಿ ಎನ್ನುವ ಕಂಪನಿ ಉಪ ಗುತ್ತಿಗೆ ಪಡೆದು ಕಾರ್ಮಿಕರ ಮೂಲಕ ಕೆಲಸ ಮಾಡಿಸುತ್ತಿದೆ. ಹೀಗಾಗಿ ದುರ್ಘಟನೆ ನಡೆದರೂ, ಕೆಎಂಎಫ್ ಡೈರಿ ಪ್ರಮುಖರು ತಮಗೇನು ಸಂಬಂಧವೇ ಇಲ್ಲ ಎಂದು ವರ್ತಿಸುತ್ತಿದ್ದಾರೆ. ಬ್ಲಾಸ್ಟ್ ಆಗಿ ಸುಟ್ಟ ಗಾಯ ಆಗಿದ್ದರೂ ಆಸ್ಪತ್ರೆಗೆ ಒಯ್ಯುವುದಕ್ಕೂ ವಾಹನ ನೀಡಿಲ್ಲ ಎಂದು ಕಾರ್ಮಿಕರು ಅಲವತ್ತುಕೊಂಡಿದ್ದಾರೆ.
Chemical blast in KMF (Karnataka Milk Federation) one staff seriously injured has been admitted to A.J hospital. The negligence of the authorities has resulted in the blast it is said.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm