ಬ್ರೇಕಿಂಗ್ ನ್ಯೂಸ್
15-12-20 05:59 pm Mangalore Correspondent ಕರಾವಳಿ
ಮಂಗಳೂರು, ಡಿ.15: ರಸ್ತೆ ಬದಿ ಎಲ್ಲೆಂದರಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ವಾಹನದಲ್ಲಿ ಬರುವ ಪೊಲೀಸರು ಹೊತ್ತೊಯ್ಯುತ್ತಾರೆ. ಆದರೆ, ಹೀಗೆ ಟೋಯಿಂಗ್ ಮಾಡುವ ವಾಹನವೇ ಆರ್ ಟಿಓ ನಿಯಮಗಳನ್ನು ಉಲ್ಲಂಘಿಸಿದ್ದರೆ ಯಾರು ಅದಕ್ಕೆ ದಂಡ ಹಾಕಬೇಕು. ಮಂಗಳೂರಿನಲ್ಲಿ ಅಂಥದ್ದೇ ಪ್ರಕರಣ ಪತ್ತೆಯಾಗಿದ್ದು, ಸಾರ್ವಜನಿಕರ ಆಕ್ರೋಶ ಪೊಲೀಸರ ಟೋಯಿಂಗ್ ವಾಹನದ ವಿರುದ್ಧವೇ ತಿರುಗಿದೆ.
ಹತ್ತಾರು ವಾಹನಗಳನ್ನು ಏಕಕಾಲದಲ್ಲಿ ಹೊತ್ತೊಯ್ಯುವ ಟೋಯಿಂಗ್ ವಾಹನವೊಂದು ವಿಮೆ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸದೆ ನಿಯಮಗಳನ್ನು ಉಲ್ಲಂಘಿಸಿ ಒಂದು ವರ್ಷದಿಂದ ಕಾರ್ಯಾಚರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ರಸ್ತೆ ಬದಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿ ನಿಲ್ಲಿಸುವ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ವಾಹನಗಳಿಂದ ಕಷ್ಟಕ್ಕೆ ಒಳಗಾಗದವರೇ ಇಲ್ಲ ಎನ್ನಬಹುದು. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಟೋಯಿಂಗ್ ಕಾರಣದಿಂದಾಗಿ ಸ್ವಲ್ಪ ಹೊತ್ತಲ್ಲಿ ಮಾಯ ಆಗಿಬಿಡುತ್ತದೆ.
ಟೋಯಿಂಗ್ ವಾಹನದಿಂದ ಕಿರಿಕಿರಿ ಅನುಭವಿಸಿದ ದ್ವಿಚಕ್ರ ವಾಹನ ಸವಾರರೊಬ್ಬರು, ಇದೀಗ ಟೋಯಿಂಗ್ ವಾಹನದ ಜಾತಕ ಹೇಗಿದೆ ಎಂದು ಆರ್ ಟಿಓದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ವಾಹನದ ಇನ್ಶೂರನ್ಸ್ 2019ರ ಮೇ ತಿಂಗಳಲ್ಲಿ ಲ್ಯಾಪ್ಸ್ ಆಗಿರುವುದು ಗಮನಕ್ಕೆ ಬಂದಿದೆ. ಫಿಟ್ನೆಸ್ ಚೆಕ್ ಮಾಡಿದಾಗ, ಅದೂ ನವೀಕರಣ ಆಗಿರಲಿಲ್ಲ. ಹೀಗಾಗಿ ಈ ವಿಚಾರವನ್ನು ಟ್ರಾಫಿಕ್ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರ ಸೂಚನೆ ಮೇರೆಗೆ ಸದ್ರಿ ವಾಹನವನ್ನು ಕೆಲವು ದಿನಗಳಿಂದ ಟೋಯಿಂಗ್ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.
ಟೋಯಿಂಗ್ ಕರ್ತವ್ಯಕ್ಕೆ ಮಂಗಳೂರಿನಲ್ಲಿ ನಾಲ್ಕು ವಾಹನಗಳಿದ್ದು ಬೆಂಗಳೂರಿನ ವ್ಯಕ್ತಿ ಕಂಟ್ರಾಕ್ಟ್ ಪಡೆದಿದ್ದಾರೆ. ಅದರಲ್ಲಿ ಒಂದನ್ನು ಲಾಕ್ಡೌನ್ ಸಂದರ್ಭದಲ್ಲಿ ಫಿಟ್ನೆಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಿದ್ದು, ಅದಿನ್ನೂ ಮರಳಿ ಬಂದಿಲ್ಲ. ಮತ್ತೊಂದು ವಾಹನದಲ್ಲಿ ಕಳೆದ ಒಂದು ವರ್ಷದಿಂದ ವಿಮೆ ಮತ್ತು ಫಿಟ್ನೆಸ್ ಇಲ್ಲದೆ, ಆರ್ ಟಿಓ ನಿಯಮ ಉಲ್ಲಂಘಿಸಿ, ಪೊಲೀಸರೇ ಕರ್ತವ್ಯ ನಿಭಾಯಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿರುವುದರಿಂದ ನಿಯಮ ಉಲ್ಲಂಘಿಸಿದ ಟೋಯಿಂಗ್ ವಾಹನಕ್ಕೂ ದಂಡ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
It is gathered that the towing vehicle which carried the vehicles in Mangalore found violating traffic rules or parked in ‘No Parking’ zones away, itself did not have insurance and fitness certificates.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm