ಬ್ರೇಕಿಂಗ್ ನ್ಯೂಸ್
18-01-25 09:27 pm Mangalore Correspondent ಕರಾವಳಿ
ಮಂಗಳೂರು, ಜ.18: ನಗರದ ತಣ್ಣೀರುಬಾವಿ ಬೀಚ್ ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದ್ದು ಕುದುರೆ, ಹುಲಿಗಳು, ಯಕ್ಷಗಾನ, ಕಥಕ್ಕಳಿ ಸೇರಿದಂತೆ ನೂರಾರು ಬಗೆಬಗೆಯ ಗಾಳಿಪಟಗಳು ಗಮನ ಸೆಳೆದವು. ಟೀಮ್ ಮಂಗಳೂರು, ಹವ್ಯಾಸಿ ಗಾಳಿಪಟ ತಂಡವು 'ಕರಾವಳಿ ಉತ್ಸವ'ದ ಅಂಗವಾಗಿ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಈ ಸಲ ಎಂಟನೇ ಬಾರಿಗೆ ಅಂತಾರಾಷ್ಟ್ರೀಯ ಕೈಟ್ ಫೆಸ್ಟ್ ಆಯೋಜಿಸಿದೆ.
ಜನವರಿ 18 ಮತ್ತು 19 ರಂದು ಅಂತಾರಾಷ್ಟ್ರೀಯ ಗಾಳಿಪಟ ನಡೆಯುತ್ತಿದ್ದು ಇಂಗ್ಲೆಂಡ್, ಜರ್ಮನಿ, ನೆದರ್ಲ್ಯಾಂಡ್, ಕ್ಲೋವೆನಿಯಾ, ಇಟೆಲಿ, ಸ್ವೀಡನ್, ಇಂಡೋನೇಶಿಯಾ, ಪೊರ್ಚುಗಲ್ ದೇಶಗಳಿಂದ ಗಾಳಿಪಟ ತಂಡಗಳು ಆಗಮಿಸಿವೆ. ಒಡಿಶಾ, ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ರಾಜ್ಯಗಳಿಂದಲೂ ಗಾಳಿಪಟ ತಂಡಗಳು ಉತ್ಸವದಲ್ಲಿ ಪಾಲ್ಗೊಂಡಿವೆ.
ಟೀಮ್ ಮಂಗಳೂರು ತಂಡವು ಕರಾವಳಿಯ ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ, ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ರಚಿಸಿದ್ದು ಬಾನೆತ್ತರದಲ್ಲಿ ಕಮಾನು ಸೃಷ್ಟಿಸಿದೆ. ಈ ಬಾರಿ 'ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ' ಎಂಬ ಧ್ಯೇಯ ವಾಕ್ಯ ಮುಂದಿಟ್ಟು ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಏರೋ ಫಾಯ್ಸ್ ಗಾಳಿಪಟಗಳು ಜನರ ಗಮನಸೆಳೆದಿದೆ. ಮಧ್ಯಾಹ್ನ ಹೊತ್ತಿಗೆ ಶುರುವಾದರೆ ರಾತ್ರಿ 9ರ ವರೆಗೂ ಬಾನಂಗಳದಲ್ಲಿ ಗಾಳಿಪಟಗಳು ಚಿತ್ತಾರ ಮೂಡಿಸಿ ಹಾರಾಡುತ್ತಿದ್ದು ಜನರನ್ನು ಆಕರ್ಷಿಸಿದೆ.
ಕುದುರೆ, ಐಸ್ ಕ್ರೀಂ, ಮೀನು, ಅಕ್ಟೋಪಸ್, ಹುಲಿ, ಗಣಪತಿ, ಕಥಕ್ಕಳಿ, ಸನ್ ಫ್ಲವರ್, ಏರೋಪ್ಲೇನ್, ಚಿರತೆ, ಟೆಡ್ಡಿಬೇರ್ ರೂಪದ ಗಾಳಿಪಟಗಳು ಗಮನ ಸೆಳೆಯುತ್ತಿದೆ. ಇದರಲ್ಲಿ ಪಿನಾಕಿಯೋ ಕಾರ್ಟೂನ್ ಅತೀ ದೊಡ್ಡದಾಗಿದ್ದು, ಆಕರ್ಷಕವಾಗಿದೆ.
ಗಾಳಿಪಟ ಉತ್ಸವದಲ್ಲಿ ಹಲವಾರು ವಿದೇಶಿಗರು ಸಂತಸದಿಂದ ಭಾಗಿಯಾಗಿದ್ದಾರೆ. ಹಲವರು ಪ್ರತಿ ವರ್ಷವೂ ಭಾರತಕ್ಕೆ ಬಂದು ತಮ್ಮ ಕೈಚಳಕ ತೋರುತ್ತಾರೆ. ನಾವೇ ಗಾಳಿಪಟ ತಯಾರಿಸಿ, ನಾವೇ ಹಾರಿಸುತ್ತೇವೆ. ಇಲ್ಲಿ ಸನ್ ಫ್ಲವರ್, ಕ್ರಿಕೆಟ್, ಪಿನಾಕಿಯೊ, ಬೌಲ್ ಹಾರಿಸಿದ್ದೇವೆ. ಮಂಗಳೂರಿನಲ್ಲಿ ಗಾಳಿಪಟ ಹಾರಾಟಕ್ಕೆ ಉತ್ತಮ ವಾತಾವರಣ ಇದೆ ಎಂದು ರಷ್ಯಾ ಮೂಲದ ದಂಪತಿ ಸಂತಸ ವ್ಯಕ್ತಪಡಿಸಿದರು. ಈ ಬಾರಿ 11 ದೇಶಗಳಿಂದ 22 ವಿದೇಶಿಯರು ಬಂದಿದ್ದಾರೆ. ನಮ್ಮ ದೇಶದ ವಿವಿಧ ಭಾಗದಿಂದ 30 ಮಂದಿ ಬಂದಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
Massive crowds throngs to see the stunning displays at International Kite Festival 2025 at Thannirbhavi Beach in Mangalore. The 8th ONGC-MRPL International Kite Festival, held on January 18 and 19 at Thannirbhavi Beach, Mangaluru, was inaugurated by district in-charge minister Dinesh Gundurao.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm