ಬ್ರೇಕಿಂಗ್ ನ್ಯೂಸ್
01-02-25 07:47 pm Mangalore Correspondent ಕರಾವಳಿ
ಮಂಗಳೂರು, ಫೆ.1: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ದೆಹಲಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಪ್ರತಿದಿನ ಸಂಚರಿಸಲಿದೆ. ಫೆ.1ರಿಂದಲೇ ಈ ವಿಮಾನ ಯಾನ ಆರಂಭಗೊಂಡಿದ್ದು, ಬೆಳಗ್ಗೆ 6.40ಕ್ಕೆ ಮಂಗಳೂರಿನಿಂದ ಹೊರಟು 9.35ಕ್ಕೆ ದೆಹಲಿಗೆ ತಲುಪಿದೆ. ಆಮೂಲಕ ಕರಾವಳಿಯಿಂದ ರಾಜಧಾನಿ ದೆಹಲಿಯನ್ನು ಏರ್ ಇಂಡಿಯಾ ಇನ್ನಷ್ಟು ಹತ್ತಿರವಾಗಿಸಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ಐಎಕ್ಸ್ 1552 ಹೆಸರಿನ ವಿಮಾನವು ಮಂಗಳೂರಿನಿಂದ 167 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ತಲುಪಿದೆ. ಇದೇ ವೇಳೆಗೆ ಪ್ರತಿಯಾಗಿ ದೆಹಲಿಯಿಂದಲೂ ಬೆಳಗ್ಗೆ 6.40ಕ್ಕೆ ಹೊರಟು 9.35ಕ್ಕೆ ಮಂಗಳೂರಿಗೆ ವಿಮಾನ ಆಗಮಿಸಿದೆ. ದೆಹಲಿಯಿಂದ ಹೊರಟ ವಿಮಾನವನ್ನು ಕ್ಯಾಪ್ಟನ್ ವಿನೀತ್ ಕುಮಾರ್ ಮತ್ತು ಸಿಬಂದಿ ಮುನ್ನಡೆಸಿದ್ದಾರೆ. ದೆಹಲಿಯಿಂದ ಬಂದ ವಿಮಾನದಲ್ಲಿ 144 ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರಿನಿಂದ ಹೊರಟ ವಿಮಾನಕ್ಕೆ ಏರೋ ಡ್ರೋಮ್ ರೆಸ್ಕ್ಯು ತಂಡದಿಂದ ನೀರು ಹಾಯಿಸುವ ಮೂಲಕ ಶುಭ ಹಾರೈಕೆ ನೀಡಲಾಯಿತು. ಕಳೆದ ಜನವರಿ 4ರಿಂದ ಪ್ರತಿ ಶನಿವಾರ ಮಂಗಳೂರಿನಿಂದ ಪುಣೆಗೆ ಹೊಸ ವಿಮಾನ ಸಂಚಾರ ಆರಂಭಿಸಿತ್ತು. ಇದರ ಬೆನ್ನಲ್ಲೇ ರಾಜಧಾನಿ ದೆಹಲಿಗೂ ಪ್ರತಿ ದಿನದ ವಿಮಾನ ಸಂಚಾರ ಆರಂಭಿಸಿದೆ. ನೇರ ವಿಮಾನ ಸಂಚಾರದಿಂದ ಮಂಗಳೂರಿನಿಂದ ಬಿಸಿನೆಸ್ ಇನ್ನಿತರ ಉದ್ದೇಶಕ್ಕೆ ದೆಹಲಿಗೆ ಹೋಗುವವರಿಗೆ ಸುಗಮವಾಗಲಿದೆ. ಈಗಾಗಲೇ ಇಂಡಿಗೋ ಸಂಸ್ಥೆಯಿಂದ ದಿನವೂ ಸಂಜೆ ದೆಹಲಿಗೆ ವಿಮಾನ ಸಂಚಾರ ಇದೆ. ಇದರೊಂದಿಗೆ ಬೆಳಗ್ಗೆ, ಸಂಜೆ ಡೈಲಿ ವಿಮಾನ ಸಂಚಾರ ಮಾಡಿದಂತಾಗಿದೆ.
Air India Express commenced a direct flight service between Mangalore and Delhi. The initiative offers a direct daily morning service between the two cities.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm