ಬ್ರೇಕಿಂಗ್ ನ್ಯೂಸ್
01-02-25 07:47 pm Mangalore Correspondent ಕರಾವಳಿ
ಮಂಗಳೂರು, ಫೆ.1: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ದೆಹಲಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಪ್ರತಿದಿನ ಸಂಚರಿಸಲಿದೆ. ಫೆ.1ರಿಂದಲೇ ಈ ವಿಮಾನ ಯಾನ ಆರಂಭಗೊಂಡಿದ್ದು, ಬೆಳಗ್ಗೆ 6.40ಕ್ಕೆ ಮಂಗಳೂರಿನಿಂದ ಹೊರಟು 9.35ಕ್ಕೆ ದೆಹಲಿಗೆ ತಲುಪಿದೆ. ಆಮೂಲಕ ಕರಾವಳಿಯಿಂದ ರಾಜಧಾನಿ ದೆಹಲಿಯನ್ನು ಏರ್ ಇಂಡಿಯಾ ಇನ್ನಷ್ಟು ಹತ್ತಿರವಾಗಿಸಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ಐಎಕ್ಸ್ 1552 ಹೆಸರಿನ ವಿಮಾನವು ಮಂಗಳೂರಿನಿಂದ 167 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ತಲುಪಿದೆ. ಇದೇ ವೇಳೆಗೆ ಪ್ರತಿಯಾಗಿ ದೆಹಲಿಯಿಂದಲೂ ಬೆಳಗ್ಗೆ 6.40ಕ್ಕೆ ಹೊರಟು 9.35ಕ್ಕೆ ಮಂಗಳೂರಿಗೆ ವಿಮಾನ ಆಗಮಿಸಿದೆ. ದೆಹಲಿಯಿಂದ ಹೊರಟ ವಿಮಾನವನ್ನು ಕ್ಯಾಪ್ಟನ್ ವಿನೀತ್ ಕುಮಾರ್ ಮತ್ತು ಸಿಬಂದಿ ಮುನ್ನಡೆಸಿದ್ದಾರೆ. ದೆಹಲಿಯಿಂದ ಬಂದ ವಿಮಾನದಲ್ಲಿ 144 ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರಿನಿಂದ ಹೊರಟ ವಿಮಾನಕ್ಕೆ ಏರೋ ಡ್ರೋಮ್ ರೆಸ್ಕ್ಯು ತಂಡದಿಂದ ನೀರು ಹಾಯಿಸುವ ಮೂಲಕ ಶುಭ ಹಾರೈಕೆ ನೀಡಲಾಯಿತು. ಕಳೆದ ಜನವರಿ 4ರಿಂದ ಪ್ರತಿ ಶನಿವಾರ ಮಂಗಳೂರಿನಿಂದ ಪುಣೆಗೆ ಹೊಸ ವಿಮಾನ ಸಂಚಾರ ಆರಂಭಿಸಿತ್ತು. ಇದರ ಬೆನ್ನಲ್ಲೇ ರಾಜಧಾನಿ ದೆಹಲಿಗೂ ಪ್ರತಿ ದಿನದ ವಿಮಾನ ಸಂಚಾರ ಆರಂಭಿಸಿದೆ. ನೇರ ವಿಮಾನ ಸಂಚಾರದಿಂದ ಮಂಗಳೂರಿನಿಂದ ಬಿಸಿನೆಸ್ ಇನ್ನಿತರ ಉದ್ದೇಶಕ್ಕೆ ದೆಹಲಿಗೆ ಹೋಗುವವರಿಗೆ ಸುಗಮವಾಗಲಿದೆ. ಈಗಾಗಲೇ ಇಂಡಿಗೋ ಸಂಸ್ಥೆಯಿಂದ ದಿನವೂ ಸಂಜೆ ದೆಹಲಿಗೆ ವಿಮಾನ ಸಂಚಾರ ಇದೆ. ಇದರೊಂದಿಗೆ ಬೆಳಗ್ಗೆ, ಸಂಜೆ ಡೈಲಿ ವಿಮಾನ ಸಂಚಾರ ಮಾಡಿದಂತಾಗಿದೆ.
Air India Express commenced a direct flight service between Mangalore and Delhi. The initiative offers a direct daily morning service between the two cities.
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
08-06-25 10:29 pm
HK News Desk
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm