Mangalore gun misfire, congress, chittaranjan Shetty: ಕಾಂಗ್ರೆಸ್ ಮುಖಂಡನಿಗೆ ಗುಂಡೇಟು ; ವಿಟ್ಲ ಬಳಿಯ ಅನಂತಾಡಿಯಲ್ಲಿ ಘಟನೆ, ತನ್ನದೇ ರಿವಾಲ್ವರ್ ಮಿಸ್ ಫೈರ್ ! 

04-02-25 07:47 pm       Mangalore Correspondent   ಕರಾವಳಿ

ಇತ್ತೀಚೆಗಷ್ಟೇ ಪರವಾನಗಿ ಇರುವ ಪಿಸ್ತೂಲ್ ಪಡೆದಿದ್ದ ಪಡೆದಿದ್ದ ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ಆಕಸ್ಮಿಕ ಮಿಸ್ ಫೈರಿಂಗ್ ಆಗಿ ಗಾಯಗೊಂಡಿದ್ದಾರೆ. 

ಬಂಟ್ವಾಳ, ಫೆ.4: ಇತ್ತೀಚೆಗಷ್ಟೇ ಪರವಾನಗಿ ಇರುವ ಪಿಸ್ತೂಲ್ ಪಡೆದಿದ್ದ ಪಡೆದಿದ್ದ ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ಆಕಸ್ಮಿಕ ಮಿಸ್ ಫೈರಿಂಗ್ ಆಗಿ ಗಾಯಗೊಂಡಿದ್ದಾರೆ. 

ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಈ ಹಿಂದೆ ಇಂಟಕ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಬೊಂಡಾಲ ಚಿತ್ತರಂಜನ್ ಶೆಟ್ಟಿ ವಿಟ್ಲ ಸಮೀಪದ ಅನಂತಾಡಿಯಲ್ಲಿ ಕಲ್ಲಿನ ಕೋರೆಯ ಬಳಿ ಗುಂಡೇಟು ಪಡೆದಿದ್ದಾರೆ. ಇತ್ತೀಚೆಗಷ್ಟೇ ಇವರು ತನ್ನ ಪರವಾನಗಿ ಸಹಿತ ರಿವಾಲ್ವರ್ ಇಟ್ಟುಕೊಂಡಿದ್ದರು. 

ಇಂದು ಸಂಜೆ ಅನಂತಾಡಿ ಬಳಿಯ ಕಲ್ಲಿನ ಕೋರೆ ಇರುವಲ್ಲಿಗೆ ಚಿತ್ತರಂಜನ್ ಶೆಟ್ಟಿ ತೆರಳಿದ್ದಾಗ ಘಟನೆ ನಡೆದಿದೆ. ಅಲ್ಲಿ ಘಟನೆ ಏನಾಗಿದೆ ಎನ್ನುವುದು ತಿಳಿದುಬಂದಿಲ್ಲ. ತನ್ನದೇ ರಿವಾಲ್ವರ್ ಗುಂಡು ಆಕಸ್ಮಿಕವಾಗಿ ಸಿಡಿದು ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಅವರನ್ನು ಮಂಗಳೂರಿನ ಅಡ್ಯಾರ್ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಸ್ ಫೈರಿಂಗ್ ಸುದ್ದಿ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ.

Mangalore gun misfire, congress leader chittaranjan shetty admitted to hospital after injury at vital. chittaranjan who was at a red stone quarry was injured by mid fire from his licensed gun.