ಬ್ರೇಕಿಂಗ್ ನ್ಯೂಸ್
15-03-25 04:11 pm Mangalore Correspondent ಕರಾವಳಿ
ಮಂಗಳೂರು, ಮಾ.15 : 13 ವರ್ಷದ ಹುಡುಗನೊಬ್ಬ ಅಪಾರ್ಟ್ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ನಗರದ ಮೇರಿಹಿಲ್ ಬಳಿಯಲ್ಲಿ ಶನಿವಾರ (ಮಾ.15) ಬೆಳಗ್ಗೆ ನಡೆದಿದೆ.
ಏಳನೇ ಕ್ಲಾಸ್ ಓದುತ್ತಿದ್ದ ಸಮರ್ಜಿತ್ ಭಂಡಾರಿ(13) ದುರಂತ ಸಾವಿಗೀಡಾದ ವಿದ್ಯಾರ್ಥಿ. ಬೆಳಗ್ಗೆ 5.30ರಿಂದ 6 ಗಂಟೆ ನಡುವೆ ಘಟನೆ ನಡೆದಿದ್ದು, ಕೂಡಲೇ ಮನೆಯವರು ಬಾಲಕನನ್ನು ಎಜೆ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ತಲೆ ಮತ್ತು ಬೆನ್ನು ಮೂಳೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಷ್ಟರಲ್ಲಿಯೇ ಮೃತಪಟ್ಟಿದ್ದಾನೆ. ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರು. ಅಪಾರ್ಟ್ಮೆಂಟಿನ ಇತರ ಕುಟುಂಬ ಸದಸ್ಯರು ಸೇರಿದ್ದು ಎಲ್ಲರೂ ಶಾಕ್ ಗೆ ಒಳಗಾಗಿದ್ದರು. ಮನೆಯವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಕಾವೂರು ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.
ಹುಡುಗನಿಗೆ ಪರೀಕ್ಷೆ ನಡೆಯುತ್ತಿದ್ದು ಎಕ್ಸಾಂ ಭಯದಲ್ಲಿ ಏನೋ ಮಾಡಿರಬೇಕು. ಇವರ ಮನೆ ಎರಡನೇ ಮಹಡಿಯಲ್ಲಿದ್ದು, ಎಲ್ಲಿಂದ ಬಿದ್ದಿದ್ದಾನೆಂದು ಸರಿಯಾಗಿ ಮಾಹಿತಿ ಇಲ್ಲ. ಮನೆಯವರ ಹೇಳಿಕೆ ಪ್ರಕಾರ ಐದನೇ ಮಹಡಿಯೆಂದು ಕೇಸು ದಾಖಲಿಸಿದ್ದೇವೆ. ಕಟ್ಟಡದಿಂದ ಸ್ವಲ್ಪ ದೂರಕ್ಕೆ ಹೋಗಿ ಬಿದ್ದಿದ್ದಾನೆ. ಕಟ್ಟಡದಲ್ಲಿ ಆರಡಿ ಎತ್ತರಕ್ಕೆ ಗ್ರಿಲ್ಸ್ ಇದೆ, ಅದರ ಎಡೆಯಲ್ಲಿ ಆಕಸ್ಮಿಕವಾಗಿ ಬೀಳುವ ಸಾಧ್ಯತೆ ಇಲ್ಲ ಎಂದು ಕಾವೂರು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ. ಪರೀಕ್ಷೆ ಭಯದಲ್ಲಿ ಈ ರೀತಿ ಮಾಡಿದ್ದಾನೆಯೇ ಅಥವಾ ಬೇರಾವುದೇ ಕಾರಣ ಇದೆಯೇ ಎಂದು ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಸಮರ್ಜಿತ್ ಓದುವುದರಲ್ಲಿ ಮತ್ತು ಶಾಲೆಯಲ್ಲಿ ಭಾರೀ ಚುರುಕಾಗಿದ್ದ ಹುಡುಗ. ಯೂಟ್ಯೂಬ್ ಮಾಡಿಯೂ ಸಣ್ಣ ವಯಸ್ಸಿನಲ್ಲೇ ಚುರುಕುತನ ತೋರಿಸಿದ್ದ. ಹುಡುಗನ ಹಠಾತ್ ಸಾವು ಕುಟುಂಬಕ್ಕೆ ತೀವ್ರ ಶಾಕ್ ನೀಡಿದೆ.
13 Year Old Boy Falls from Apartment Building in Mary Hill, Mangalore. The deceased has been identified as Master Samarjit Bhandary. Following the incident, a case has been registered under Unnatural Death Report.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm