ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ 6 ಬಲಿ, 132 ಮಂದಿಯಲ್ಲಿ ಸೋಂಕು

09-08-20 03:15 pm       Mangalore Reporter   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಕೋವಿಡ್ ಸೋಂಕಿಗೆ 6 ಮಂದಿ ಸಾವನ್ನಪ್ಪಿದ್ದು, 132 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಕರ್ನಾಟಕದಲ್ಲಿ ಒಂದೇ ದಿನ 5,985 ಕೇಸ್​, 107 ಮಂದಿ ಬಲಿ

ಮಂಗಳೂರು, ಆಗಸ್ಟ್ 09: ಜಿಲ್ಲೆಯಲ್ಲಿ ರವಿವಾರ ಕೋವಿಡ್ ಸೋಂಕಿಗೆ 6 ಮಂದಿ ಸಾವನ್ನಪ್ಪಿದ್ದು, 132 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಕೋವಿಡ್ ಸೋಂಕಿಗೆ ಇಂದು ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಅರೋಗ್ಯ ಇಲಾಖೆ ದೃಢಪಡಿಸಿದೆ, ಇದುವರೆಗೆ ಕೋವಿಡ್ ಸೋಂಕಿಗೆ ಒಟ್ಟು 220 ಮಂದಿ ಸಾವನ್ನಪ್ಪಿದ್ದಾರೆ.

ಇಂದಿನ 132 ಹೊಸ ಪ್ರಕರಣಗಳಲ್ಲಿ ಮಂಗಳೂರಿನಲ್ಲಿ 81 ಮಂದಿ, ಬಂಟ್ವಾಳದ 22 ಮಂದಿ, ಬೆಳ್ತಂಗಡಿಯ 4 ಮಂದಿ, ಪುತ್ತೂರಿನಲ್ಲಿ 6 ಮಂದಿ, ಸುಳ್ಯದಲ್ಲಿ 3 ಮಂದಿ ಹಾಗೂ ಜಿಲ್ಲೆಯನ್ನು ಹೊರತುಪಡಿಸಿ 16 ಮಂದಿ ಸಾವನ್ನಪ್ಪಿದ್ದಾರೆ.

ರವಿವಾರದ 132 ಹೊಸ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 7207 ಕ್ಕೆ ಏರಿಕೆಯಾಗಿದೆ, ಇಂದು 195 ಮಂದಿ ಗುಣಮುಖರಾಗಿದ್ದು ಒಟ್ಟು 3682 ಮಂದಿ ಬಿಡುಗಡೆಯಾಗಿದ್ದಾರೆ. 3305 ಸಕ್ರೀಯ ಪ್ರಕರಣಗಳು ಇವೆ.