ಬ್ರೇಕಿಂಗ್ ನ್ಯೂಸ್
14-08-25 10:29 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.14 : ಧರ್ಮಸ್ಥಳದಲ್ಲಿ ಶವ ಶೋಧ ಕಾರ್ಯಾಚರಣೆ 15ನೇ ದಿನವೂ ಮುಂದುವರಿದಿದ್ದು ನೇತ್ರಾವತಿ ಸ್ನಾನಘಟ್ಟ, ಬಂಗ್ಲೆಗುಡ್ಡೆ, ಕಲ್ಲೇರಿ ಕಾಡಿನ ಬಳಿಕ ದ್ವಾರಕಾಶ್ರಮದ ಬಳಿ ಶೋಧ ಕಾರ್ಯ ನಡೆಸಲಾಗಿದೆ. ಇಲ್ಲಿ 17ನೇ ಪಾಯಿಂಟ್ ಗುರುತಿಸಿ ಶೋಧಕ್ಕಾಗಿ ಅಗೆದಿದ್ದು ಅಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.
13ನೇ ಸ್ಥಳದಲ್ಲಿ ಹಲವು ಹೆಣ ಹೂತಿದ್ದಾಗಿ ದೂರುದಾರ ಹೇಳಿದ್ದ. ಹೀಗಾಗಿ ಎರಡು ದಿನ ಕಾರ್ಯಾಚರಣೆ ನಡೆಸಿದ್ದು ಅಲ್ಲಿ ಶೋಧ ನಡೆಸಿದರೂ ಯಾವುದೇ ಕುರುಹು ಸಿಕ್ಕಿರಲಿಲ್ಲ. ಅಲ್ಲಿ ಎರಡು ದಿನಗಳ ಕಾಲ 18 ಅಡಿ ಆಳಕ್ಕೆ, ಮತ್ತೊಂದು ಕಡೆ 13 ಅಡಿ ಅಗಲಕ್ಕೆ ಅಗೆಯಲಾದರೂ, ಕುರುಹು ಪತ್ತೆಯಾಗಿಲ್ಲ. ಈ ನಡುವೆ ಇಬ್ಬರು ಸಾಕ್ಷಿದಾರರು ಮುಂದೆ ಬಂದಿದ್ದು, 13ನೇ ಜಾಗದಲ್ಲಿ ಶವ ಹೂತಿದ್ದನ್ನು ನಾವೂ ನೋಡಿದ್ದೇವೆ ಎಂದು ಸ್ಥಳೀಯರಾದ ತುಕಾರಾಮ ಗೌಡ ಹಾಗೂ ಪುರಂದರ ಗೌಡ ಹೇಳಿದ್ದಾರೆ.
ಎಸ್ ಐಟಿಗೆ ದೂರು ಕೊಡಲಾಗಿದೆ. ಅವರು ತನಿಖೆ ನಡೆಸಿದ್ರೆ ನಾವು ಎಲ್ಲಾ ಸಾಕ್ಷಿ ಹೇಳಲು ಸಿದ್ಧ ಎಂದು ಈ ಇಬ್ಬರು ತಿಳಿಸಿದ್ದಾರೆ. ನೇತ್ರಾವತಿ ನದಿ ತಡದಲ್ಲಿ ಶವ ಹೂತಿರುವ ಪ್ರಕರಣದಲ್ಲಿ ಒಬ್ಬ ಅಧಿಕಾರಿಯ ಪಾತ್ರವೂ ಇದೆ, ಅದನ್ನು ಎಸ್ ಐಟಿ ಬಳಿ ಹೇಳುತ್ತೇವೆ. ಅಂಬಾಸಿಡರ್ ಕಾರಿನ ಡಿಕ್ಕಿಯಿಂದ ಹೆಣ ತೆಗೆದು ಸಂಜೆ 4-5 ಗಂಟೆಯ ವೇಳೆಗೆ ಕದ್ದು ಮುಚ್ಚಿ ಹೆಣ ಹೂತಿದ್ದನ್ನು ನಾನು ನೋಡಿದ್ದೇನೆ ಎಂದು ಪುರಂದರ ಗೌಡ ಹೇಳಿದ್ದಾರೆ.
ಇದರ ಬಗ್ಗೆ ಭಯದಿಂದ ಇಲ್ಲಿಯವರೆಗೂ ಹೇಳಿರಲಿಲ್ಲ. ಈಗ ಎಸ್ ಐಟಿ ರಚನೆ ಮಾಡಿರುವುದರಿಂದ ಧೈರ್ಯದಿಂದ ಹೇಳಿದ್ದೇವೆ ಎಂದು ಹೇಳಿದ್ದಾರೆ. ಈಗ ಹೆಣದ ಕುರುಹು ಸಿಗದಿರಲು ಆ ಜಾಗ ಅಭಿವೃದ್ಧಿಯಾಗಿರುವುದೇ ಕಾರಣ ಎಂದು ಪುರಂದರಗೌಡ ಹೇಳಿದ್ದಾರೆ. ಭಾರಿ ಮಳೆ ಬಂದು ಪ್ರವಾಹ ಆದ ಕಾರಣ, ಅಣೆಕಟ್ಟು ಕೆಲಸದ ಕಾರಣದಿಂದಾಗಿಯೂ ಆ ಜಾಗದ ವ್ಯತ್ಯಾಸ ಆಗಿದೆ ಎಂದು ಪುರಂದರ ಗೌಡ ಹೇಳಿದ್ದಾರೆ.
The search operation for alleged buried bodies in Dharmasthala entered its 15th day, with Special Investigation Team (SIT) officials shifting their focus to the area near Dwarkashrama after earlier digs at Netravati bathing ghat, Banglegudde, and Kalleri forest yielded no results.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm