ಬ್ರೇಕಿಂಗ್ ನ್ಯೂಸ್
07-09-25 10:59 pm Mangalore Correspondent ಕರಾವಳಿ
ಮಂಗಳೂರು, ಸೆ.7 : ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಶನಿವಾರ ಸ್ಥಳ ಮಹಜರು ನಡೆಸಿದಾಗ ಮತ್ತೆರಡು ಮಾನವ ತಲೆಬುರುಡೆಗಳು ಪತ್ತೆಯಾಗುವೆ ಎಂದು ಹೇಳಾಗುತ್ತಿದ್ದು ಎಸ್ಐಟಿ ತಂಡದ ತನಿಖೆಗೆ ಹೊಸ ಆಯಾಮ ಸಿಕ್ಕಿದೆ.
ಶನಿವಾರ ಎಸ್ಐಟಿ ಅಧಿಕಾರಿಗಳು ಸೌಜನ್ಯಾ ಮಾವ ವಿಟಲ ಗೌಡರನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ, ಅದೇ ಸ್ಥಳದಲ್ಲಿ ಮತ್ತೆರಡು ಮಾನವ ಬುರುಡೆ ಮತ್ತು ಎಲುಬುಗಳು ಪತ್ತೆಯಾಗಿವೆ. ಈ ಜಾಗದಲ್ಲಿ ಹಿಂದೆ ಚಿನ್ನಯ್ಯ ಜಾಗ ತೋರಿಸಿದ ಸಂದರ್ಭದಲ್ಲಿ ಸ್ಥಳ ಶೋಧ ನಡೆಸಲಾಗಿತ್ತು.ಆದರೆ ಆಗ ಕಾಣಿಸಿರದ ತಲೆಬುರುಡೆ ಈಗ ಕಂಡಿರುವುದು ಅಚ್ಚರಿ ಸೃಷ್ಟಿಸಿದೆ. ಚಿನ್ನಯ್ಯ ಉದ್ದೇಶಪೂರ್ವಕ ಈ ಜಾಗವನ್ನು ತೋರಿಸಿರಲಿಲ್ಲವೇ ಎಂಬ ಶಂಕೆ ಮೂಡಿದೆ.
ನೂರಾರು ಶವಗಳನ್ನು ಹೂತ ಬಗ್ಗೆ ಚಿನ್ನಯ್ಯನ ಹೇಳಿಕೆ ಆಧರಿಸಿ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಸಂದರ್ಭದಲ್ಲಿ ಚಿನ್ನಯ್ಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಶವ ಹೂತಿರುವ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಗೆ ಹೇಳಿದ್ದ ಎನ್ನಲಾಗಿದೆ. ಇದೇ ಮಾಹಿತಿ ಆಧರಿಸಿ ವಿಠಲ ಗೌಡರನ್ನು ಸ್ಥಳಕ್ಕೆ ಕಳಿಸಿ ತಲೆಬುರುಡೆ ತರುವಂತೆ ಮಾಡಲಾಗಿತ್ತು ಎನ್ನುವ ಮಾಹಿತಿ ಇದೆ. ಇದೇ ವೇಳೆ ವಿಡಿಯೋ ವನ್ನೂ ಮಾಡಿದ್ದರಂತೆ. ಚಿನ್ನಯ್ಯ ಆರೋಪಿಯಾಗಿ ಬದಲಾದ ನಂತರ ಎಸ್ಐಟಿ ತನಿಖೆ ತಲೆಬುರುಡೆಯತ್ತ ತಿರುಗಿತ್ತು. ಈ ವೇಳೆ ತನಗೇನೂ ಗೊತ್ತಿಲ್ಲ ಎಂದು ಚಿನ್ನಯ್ಯ ಹೇಳಿದ್ದ. ಆನಂತರ, ಜಯಂತ್ ಮಾತಿನಂತೆ ಗಿರೀಶ್ ಮಟ್ಟಣ್ಣನವರ್, ವಿಠಲ ಗೌಡರನ್ನು ಕರೆಸಿ ವಿಚಾರಣೆ ಮಾಡಿದ್ದರು.
ವಿಠಲ ಗೌಡ ತಲೆಬುರುಡೆ ತಂದಿರುವ ವಿಷಯ ತಿಳಿಸಿದ್ದು ಈಗ ಮತ್ತೆ ಅದೇ ಜಾಗದಲ್ಲಿ ಸ್ಥಳ ಶೋಧ ನಡೆಸಲಾಗಿದೆ. ಈಗ ಮತ್ತೆರಡು ಬುರುಡೆ ಪತ್ತೆಯಾಗಿದೆ ಎಂಬ ಸುದ್ದಿ ಹರಡಿದ್ದು ಇದರ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡೆ ಕಾಡಿಗೆ ಪೊಲೀಸರ ಭದ್ರತೆ ಏರ್ಪಡಿಸಿದ್ದಾರೆ.
The Special Investigation Team (SIT) probing the Dharmasthala case has tightened security around the Banglegudde forest after suspicions arose that two more human skulls and bones were found during a spot inspection on Saturday. The development has added a new dimension to the ongoing investigation.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
07-09-25 11:24 pm
Mangalore Correspondent
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm